News Kannada
Thursday, March 23 2023

ಮಂಗಳೂರು

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಒತ್ತುವರಿ ಮತ್ತು ವ್ಯಾಪಾರ ವಹಿವಾಟುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ

Photo Credit :

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಟ್‌ಪಾತ್ ಅತಿಕ್ರಮಿಸಿ ಮತ್ತು ರಸ್ತೆ ಬದಿಗಳಲ್ಲಿ ಅನಧಿಕೃತ ಗೂಡಂಗಡಿ, ತಳ್ಳುಗಾಡಿ ಮತ್ತು ಇತರ ಬೀದಿಓದಿ ವ್ಯಾಪಾರ ವಹಿವಾಟುಗಳನ್ನು ಎಲ್ಲೆಂದಲ್ಲಿ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಸದ್ರಿ ವ್ಯಾಪಾರಿಗಳಿಂದ ಸಾರ್ವಜನಿಕ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅನಧಿಕೃತ ಒತ್ತುವರಿ ಮತ್ತು ವ್ಯಾಪಾರ ವಹಿವಾಟುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲು ಉಲ್ಲೇಖಿತ ನಡವಳಿಯಲ್ಲಿ ಅಧಿಕಾರಿ/ಸಿಬ್ಬಂದಿಗಳ ವಿಶೇಷ ತೆರವು ಕಾರ್ಯಪರ” ತಂಡಗಳನ್ನು ರಚಿಸಲಾಗಿರುತ್ತದೆ.

ಈ ತಂಡಗಳಿಗೆ ಕಾರ್ಯಾಚರಣೆ ಸಮಯದಲ್ಲಿ ಅಗತ್ಯವಾದ ವಾಹನ, ಕೂಲಿಯಾಳು, ಜೆ.ಸಿ.ಬಿ, ಟಿಪ್ಪರ್ ಇತ್ಯಾದಿಗಳನ್ನು ಒದಗಿಸುವರೇ ಈ ಕೆಳಗಿನ ಅಧಿಕಾರಿಗಳಿಗೆ ಸೂಚಿಸಿದೆ.

* ಆರೋಗ್ಯಧಿಕಾರಿಗಳು: ತಂಡಗಳಿಗೆ ಅಗತ್ಯವಾದ ಟಿಪ್ಪರ್ ಮತ್ತು ಕೂಲಿಯಾಳುಗಳನ್ನು ಒದಗಿಸುವುದು. ವಶಪಡಿಸಲಾದ ಸಾಮಾಗ್ರಿಗಳನ್ನು ವಿಲೇಗೊಳಿಸಲು ಸೂಕ್ತ ವ್ಯವಸ್ಥೆ ಮಾಡುವುದು, ಕಾರ್ಯಪಾಲಕ ಅಭಿಯಂತರರು: ಜೆ.ಸಿ.ಬಿ ಹಾಗೂ ಅಧಿಕಾರಿ ಸಿಬ್ಬಂದಿಗಳಿಗೆ ವಾಹನಗಳ ವ್ಯವಸ್ಥೆ ಮಾಡುವುದು.

ಮೇಲ್ಕಂಡಂತ ಆದ್ಯತೆಯ ನೆಲೆಯಲ್ಲಿ ಜರೂರಾಗಿ ಕ್ರಮ ಕೈಗೊಳ್ಳಲು ಆದೇಶಿಸಿದೆ. ನಿರ್ದಿಷ್ಟಗೊಳಿಸಿದ ಕೆಲಸದ ಬಗ್ಗೆ ನಿರ್ಲಕ್ಷ್ಯತನ ತೋರುವ ಅಧಿಕಾರಿ ಯಾ ತಂಡದ ಸದಸ್ಯರ ವಿರುದ್ಧ ಕರ್ತವ್ಯಲೋಪವೆಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

See also  ದೇಶ ವಿರೋಧಿ ಕೃತ್ಯ ಮಟ್ಟ ಹಾಕಲು ಗೃಹ ಸಚಿವರಿಗೆ ಮನವಿ ಸಲ್ಲಿಸಿದ ಹಿಂದೂ ಸಂಘಟನೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು