News Kannada
Thursday, March 30 2023

ಮಂಗಳೂರು

ಮಗಳನ್ನು ಉಳಿಸಿ ಓದಿಸಿ

Photo Credit :

ಬೆಳ್ತಂಗಡಿ : ಹಿಂದೆ ಕಾನೂನಿನ ಅರಿವು ಇಲ್ಲದೆ ತಮಗೆ ಬೇಕಾದ ಹಕ್ಕನ್ನು ನ್ಯಾಯಾಲಯದಲ್ಲಿ ಪಡೆಯಲು ತಿಳಿಯದ ಕಾರಣ ಅನೇಕ ಕುಟುಂಬಗಳು ಹಕ್ಕನ್ನು ಕಳೆದುಕೊಳ್ಳುತ್ತಿದ್ದರು. ಇದೀಗ ಸರಕಾರವು ಕಾನೂನು ಪ್ರಾಧೀಕಾರವನ್ನು ಮಾಡುವ ಮೂಲಕ ನೊಂದ ಮಹಿಳೆಯರು, ಮಕ್ಕಳು, ವಿಕಲಚೇತನರು, ಬಡ ಕುಟುಂಬಗಳು ಹಕ್ಕಿನಿಂದ ವಂಚಿತಗೊಳ್ಳಬಾರದು ಎಂದು ಉಚಿತ ಕಾನೂನು ವ್ಯವಸ್ಥೆ ಮಾಡಿದ್ದು ಇದರ ಮಾಹಿತಿ ಪ್ರತೀ ನೊಂದ ಕುಟುಂಬಗಳಿಗೆ ತಲುಪಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯದೀಶ ನಾಗೇಶ್ ಮೂರ್ತಿ ಬಿ.ಕೆ ಹೇಳಿದ್ದಾರೆ.

ಅವರು ಸೋಮವಾರ ಬೆಳ್ತಂಗಡಿ ಸಂತೆಕಟ್ಟೆ ಸುವರ್ಣ ಆರ್ಕೇಡ್‌ನಲ್ಲಿ ದ.ಕ.ಜಿ.ಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ, ಸ್ತಿçಶಕ್ತಿ ಬ್ಲಾಕ್ ಸೊಸೈಟಿ (ರಿ) ಬೆಳ್ತಂಗಡಿ, ಕಾನೂನು ಸೇವೆಗಳ ಪ್ರಾಧಿಕಾರ ದ.ಕ, ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವತಿಯಿಂದ ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಮತ್ತು ಕಾನೂನು ಸಪ್ತಾಹ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ ನೊಂದವರಿಗೆ ನ್ಯಾಯ ಒದಗಿಸಲು ಕೋರ್ಟ್ ಶುಲ್ಕವನ್ನು ಉಚಿತವಾಗಿ ಪಾವತಿಸುವುದಲ್ಲದೆ ಉಚಿತವಾಗಿ ವಕೀಲರನ್ನು ನೇಮಿಸುವ ಮೂಲಕ ನ್ಯಾಯಯುತವಾದ ಹಕ್ಕನ್ನು ಪಡೆಯಲು ನೆರವು ನೀಡಲಾಗುತ್ತಿದೆ. ಇದರ ಮಾಹಿತಿಯನ್ನು ಅಂಗನವಾಡಿ ಕಾರ್ಯಕರ್ತರು, ಸ್ವಯಂ ಸೇವಾ ಸಂಸ್ಥೆಗಳು ನೊಂದವರಿಗೆ ಮಾಹಿತಿ ನಿಡುವ ಮೂಲಕ ನೆರವಾಗಬೇಕು ಎಂದರು.

ಪ್ರಧಾನ ಸಿವಿಲ್ ನ್ಯಾಯದೀಶ ಸತೀಶ್ ಕೆ.ಜಿ ಮಾತನಾಡಿ ಸರಕಾರವು ಮಹಿಳೆಯರಿಗೆ, ಮಕ್ಕಳಿಗೆ, ಅಂಗವಿಕಲರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ವೃದ್ಧರಿಗೆ ಪಿಂಚಣಿ ಸೌಲಭ್ಯ, ವೃದ್ಧಾಪ್ಯ ವೇತನ ಇನ್ನಿತರ ಸೌಲಭ್ಯವನ್ನು ನೀಡುತ್ತಿದ್ದು ಜೊತೆಗೆ ಉಚಿತ ಕಾನೂನಿನ ನೆರವನ್ನು ಕೂಡ ನೀಡುತ್ತಿದೆ. ಇದೆಲ್ಲವನ್ನೂ ಪಡೆಯುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದು ನೆಮ್ಮದಿಯ ಜೀವನ ನಡೆಸಬೇಕು. ಹೆಣ್ಣುಮಕ್ಕಳು ಸಮಾಜದಲ್ಲಿ ಗೌರವ ಸ್ಥಾನ ಪಡೆಯುವಂತಾಗಬೇಕು ಎಂದರು.

ಬೆಳ್ತOಗಡಿ ವಕೀಲರ ಸಂಘದ ಅಧ್ಯಕ್ಷ ಎಲೋಶಿಯಸ್ ಲೋಬೋ, ತಾಲೂಕು ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ, ಹಿರಿಯ ಮೇಲ್ವಿಚಾರಕಿ ರತ್ನಾ, ಸಂಪನ್ಮೂಲ ವ್ಯಕ್ತಿಗಳಾದ ವಕೀಲರಾದ ಆರ್ ಸುಭಾಶಿನಿ, ಮುಮ್ತಾಜ್ ಬೇಗಂ, ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್, ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕರಾದ ಅಮೂಲ್ಯ, ಉಷಾ ಕಾಮತ್, ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಮಿತ್ರಾ, ಉಪಸ್ಥಿತರಿದ್ದರು. ಯಶೋಧ ಸ್ವಾಗತಿಸಿದರು. ಮೇಲ್ವಿಚಾರಕಿ ನಂದನಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

See also  ಜಗತ್ತಿನಾದ್ಯಂತ ನಡೆದ ವಿಮೋಚನಾ ಹೋರಾಟಗಳಿಗೆ ಲೆನಿನ್ ಸ್ಪೂರ್ತಿಯ ಸೆಲೆಯಾಗಿದ್ದರು; ಮನೋಜ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು