News Kannada
Friday, March 31 2023

ಮಂಗಳೂರು

“ಯಕ್ಷಜನ ಸಭಾ ” ದ ದ್ವಿತೀಯ ವರ್ಷದ  ತ್ರಿದಿನ “ಯಕ್ಷೋತ್ಸವ -2 ” ಕಾರ್ಯಕ್ರಮ

Inauguration of administrative office of Federation of Bunts Associations at Mulki on April 5
Photo Credit :
ಬೆಳ್ತಂಗಡಿ:  ಉಜಿರೆಯ ಸಾಂಸ್ಕೃತಿಕ ಸಂಘಟನೆ “ಯಕ್ಷಜನ ಸಭಾ ” ದ ದ್ವಿತೀಯ ವರ್ಷದ  ತ್ರಿದಿನ “ಯಕ್ಷೋತ್ಸವ -2 ” ಕಾರ್ಯಕ್ರಮವು  ಡಿಸೆಂಬರ್ 28, 29,ಮತ್ತು  30 ರಂದು  ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ  ರಾಮಕೃಷ್ಣ, ಸಭಾ ಮಂಟಪದಲ್ಲಿ  ನಡೆಯಲಿದೆ.
ಮೊದಲ ದಿನ ಡಿ. 28 ರಂದು  ಹನುಮಗಿರಿ ಶ್ರೀ ಕೋದಂಡರಾಮ ಕೃಪಾ ಘೋಷಿತ ಯಕ್ಷಗಾನ ಮಂಡಳಿಯವರಿಂದ ಬಯಲಾಟ,,ನಂತರದ ಎರಡು ದಿನ  ಜಿಲ್ಲೆಯ ಹೆಸರಾಂತ ಅತಿಥಿ ಕಲಾವಿದರಿಂದ ಯಕ್ಷಗಾನ  ತಾಳಮದ್ದಳೆ ಆಯೋಜಿಸಲಾಗಿದೆ.
ಈ   ಸಂದರ್ಭದಲ್ಲಿ ಯಕ್ಷಗಾನದ   ಹಿರಿಯ ಕಲಾವಿದರಿಗೆ  ಎರಡನೇ ವರ್ಷದ “ಯಕ್ಷಜನಸಭಾ ”  ಪ್ರಶಸ್ತಿ ಪ್ರದಾನ ಮತ್ತು ಹಿರಿಯ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದೆ.  ಹಿರಿಯ ಯಕ್ಷಗಾನ ಭಾಗವತ  ದಿನೇಶ್  ಅಮ್ಮಣ್ಣಾಯ ಮತ್ತು ಕಲಾವಿದ ಕೊಳ್ತಿಗೆ ನಾರಾಯಾಣ ಗೌಡ ಹಾಗೂ ಕ.ಸಾ .ಪ,ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ  ಡಾ!ಎಂ.  ಪಿ ಶ್ರೀನಾಥ್  ಅವರಿಗೆ  ಸನ್ಮಾನ ಕಾರ್ಯಕ್ರಮ ನಡೆಯಲಿದೆ  ಎಂದು ಯಕ್ಷಜನ ಸಭಾದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ  ತಿಳಿಸಿದ್ದಾರೆ.

         ಡಿ ೨೮  ರಂದು ಹನುಮ ಗಿರಿ ಮೇಳದ  ಕಲಾವಿದರಿಂದ  “  ಇಂದ್ರಕೀಲಕ ಊರ್ವಶಿ ಶಾಪ ಮಕರಾಕ್ಷ ಕಾಳಗ“ಪ್ರಸಂಗದ ಯಕ್ಷಗಾನ ಬಯಲಾಟ  ಹಾಗು ,ಡಿ.29 ರಂದು ನಳ ದಮಯಂತಿ” ಹಾಗು ಡಿ.30 ರಂದು ” ರಾಜ ಸತ್ಯಹರಿಶ್ಚಂದ್ರ” ಪ್ರಸಂಗದ ಯಕ್ಷಗಾನ ತಾಳಮದ್ದಳೆ  ನಡೆಯಲಿದೆ. .ನೇರ ಪ್ರಸಾರದಲ್ಲಿ ಬಿತ್ತರಗೊಳ್ಳಲಿರುವ  ಯಕ್ಷಜನ ಸಭಾದ ಯಕ್ಷೋತ್ಸವ-2 ಕಾರ್ಯಕ್ರಮಕ್ಕೆ  ಯಕ್ಷಕಲಾಭಿಮಾನಿಗಳು  ಪೂರ್ಣ ಸಹಕಾರ  ನೀಡಿ ಯಶಸ್ವಿಗೊಳಿಸುವಂತೆ  ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮತ್ತು ಕಾರ್ಯದರ್ಶಿ ವೆಂಕಟ್ರಮಣ ರಾವ್  ತಿಳಿಸಿದ್ದಾರೆ. 

See also  ದೇಶವನ್ನು ಪರಮವೈಭವದ ಸ್ಥಿತಿಗೆ ಕೊಂಡೊಯ್ಯುವುದೇ ಬಿಜೆಪಿಯ ಧ್ಯೇಯವಾಗಿದೆ : ಸಂಸದ ನಳಿನ್ ಕುಮಾರ್ ಕಟೀಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು