News Kannada
Monday, March 27 2023

ಮಂಗಳೂರು

ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಡಿ. 28 ರಿಂದ ತ್ರಿದಿನ ಯಕ್ಷೋತ್ಸವ-2021

Photo Credit :

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷಜನಸಭಾ ಉಜಿರೆ ವತಿಯಿಂದ ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಡಿ. 28 ರಿಂದ ತ್ರಿದಿನ ಯಕ್ಷೋತ್ಸವ-2021 ,ಯಕ್ಷಜನಾರ್ದನ ಪ್ರಶಸ್ತಿಪ್ರದಾನ ,ಸನ್ಮಾನ ಹಾಗು ಯಕ್ಷಗಾನ ಬಯಲಾಟ – ತಾಳಮದ್ದಳೆ ಕಾರ್ಯಕ್ರಮಗಳು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಲಿವೆ.

ಡಿ. 28 ರಂದು ಸಂಜೆ 5 ಗಂಟೆಗೆ ಯಕ್ಷೋತ್ಸವವನ್ನು ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಉದ್ಘಾಟಿಸಲಿದ್ದು ,ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಟಿ.ಶ್ಯಾಮ ಭಟ್ ಮತ್ತು ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ,ಧರ್ಮಸ್ಥಳದ ಬಿ.ಭುಜಬಲಿ ,ಬಾಲಕೃಷ್ಣ ನಾಯಕ್ ,ಸೋಮಶೇಖರ ಶೆಟ್ಟಿ ,ಸುಬ್ರಹ್ಮಣ್ಯ ಕುಮಾರ್ ಅಗರ್ತ ,ಡಿ.ಎಂ.ಗೌಡ ,ಕೆ.ಮೋಹನ್ ಕುಮಾರ್ ,ರಾಜೇಶ್ ಪೈ ,ಅರವಿಂದ ಕಾರಂತ್, ಶ್ರೀಧರ ಕೆ.ವಿ., ಮತ್ತು ರವಿ ಚೆಕ್ಕಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಿ . 29 ರಂದು ಸಂಜೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ದೀಪ ಪ್ರಜ್ವಲಿಸಲಿದ್ದು, ,ಮೋಹನ ಶೆಟ್ಟಿಗಾರ್ ,ಡಾl ಶಶಿಧರ ಡೋಂಗ್ರೆ ,ಮನೋರಮಾ ಭಟ್ ,ಪುರಂದರ ರಾವ್ ,ಹರೀಶ ರಾವ್ ಮುಂಡ್ರುಪ್ಪಾಡಿ,ಅನಂತರಾಮ ಮಯ್ಯ ,ವಾಸುದೇವ ಸೋಮ ಯಾಜಿ , ಗಿರೀಶ್ ಕುದ್ರೆನ್ತಾಯ ,ರಘುರಾಮ ಶೆಟ್ಟಿ ಗೌರವ ಉಪಸ್ಥಿತರಿರುತ್ತಾರೆ. ಡಿ. 30 ರಂದು ಸಂಜೆ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ದೀಪ ಪ್ರಜ್ವಲಿಸಲಿದ್ದು ಉಜಿರೆ ಗ್ರಾ .ಪಂ. ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಧನಂಜಯ ರಾವ್ ,ಶ್ರೀಶ ಮುಚ್ಚಿನ್ನಾಯ , ಗಂಗಾಧರ ರಾವ್ ಕೆವುಡೇಲು ,ದಯಾನಂದ ಎಳಚಿತ್ತಾಯ , ಕೃಷ್ಣಕುಮಾರ್ ಐತಾಳ್ ,ವಾಮನ ಪೈ ಮತ್ತು ಉಷಾಕಿರಣ್ ಕಾರಂತ್ ಉಪಸ್ಥಿತರಿರುತ್ತಾರೆ.

ಯಕ್ಷಜನಾರ್ದನ ಪ್ರಶಸ್ತಿ ಪ್ರದಾನ : ಹಿರಿಯ ಯಕ್ಷಗಾನ ಕಲಾವಿದ. ಕುಂಬ್ಳೆ ಸುಂದರ ರಾವ್ ಅವರಿಗೆ ಎರಡನೇ ವರ್ಷದ ಯಕ್ಷಜನಾರ್ದನ ಪ್ರಶಸ್ತಿ ಪ್ರದಾನ ನಡೆಯಲಿದೆ. ಅದೇ ರೀತಿ ಕ.ಸಾ.ಪ. ದ..ಕ. ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಡಾ l ಎಂ.ಪಿ. ಶ್ರೀನಾಥ್ , ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಮತ್ತು ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಅವರನ್ನು ಸಮ್ಮಾನಿಸಿ ಗೌರವಿಸಲಾಗುವುದು .

ಯಕ್ಷಗಾನ ಬಯಲಾಟ ,ತಾಳಮದ್ದಳೆ: ಡಿ. 28 ರಂದು ಹನುಮಗಿರಿ ಮೇಳದ ಕಲಾವಿದರಿಂದ “ಇಂದ್ರಕೀಲಕ-ಊರ್ವಶೀ ಶಾಪ-ಮಕರಾಕ್ಷ ಕಾಳಗ “ಪ್ರಸಂಗದ ಯಕ್ಷಗಾನ ಬಯಲಾಟ ,ಡಿ .29 ರಂದು ಹಿರಿಯ ಯಕ್ಷಗಾನ ಕಲಾವಿದರಿಂದ “ನಳದಮಯಂತಿ” ಪ್ರಸಂಗ ಹಾಗು ಡಿ 30 . ರಂದು ” “ರಾಜ ಸತ್ಯಹರಿಶ್ಚಂದ್ರ “ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಕಾರ್ಯಕ್ರಮಗಳು ನೇರ ಪ್ರಸಾರದಲ್ಲಿ ಬಿತ್ತರಗೊಳ್ಳಲಿದೆ. ಯಕ್ಷಜನಸಭಾದ ಎರಡನೇ ವರ್ಷದ ತ್ರಿದಿನ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಕಲಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸುವಂತೆ ಯಕ್ಷಜನಸಭಾದ ಗೌರವ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮತ್ತು ಕಾರ್ಯದರ್ಶಿ ವೆಂಕಟ್ರಮಣ ರಾವ್ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

See also    ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ‌ 14ನೇ ಶಾಖೆ ಜ.14 ರಂದು ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು