News Kannada
Wednesday, March 22 2023

ಮಂಗಳೂರು

ಇಂದು ಅಡಕೆ ಬೆಲೆಯ ಸ್ಥಿರತೆಗೆ ಕೇಂದ್ರ ಸರಕಾರದ ಕೃಷಿಪರವಾದ ನೀತಿಯೇ ಕಾರಣವಾಗಿದೆ: ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ

Photo Credit : News Kannada

ಬೆಳ್ತಂಗಡಿ: ಇಂದು ಅಡಕೆ ಬೆಲೆಯ ಸ್ಥಿರತೆಗೆ ಕೇಂದ್ರ ಸರಕಾರದ ಕೃಷಿಪರವಾದ ನೀತಿಯೇ ಕಾರಣವಾಗಿದೆ. ಆಮದನ್ನು ಸಂಪೂರ್ಣ ನಿಷೇಧಿಸಲಾಗಿದ್ದು ಅಡಕೆ ಕೃಷಿಕರ ಪರವಾಗಿ ಕಾನೂನನ್ನು ಜಾರಿಗೊಳಿಸದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಜ. 17ರಂದು ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಕ್ಯಾಂಪ್ಕೋ ನೂತನ ಶಾಖೆ ಉದ್ಘಾಟಿಸಿ, ಬಳಿಕ ನಡೆದ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ಕ್ಯಾಂಪ್ಕೋ ಬೆಳೆಗಾರರ ಸದಸ್ಯರ ಸಹಕಾರದಿಂದ ಅಭಿವೃದ್ಧಿಯತ್ತ ಸಾಗುತ್ತಿದೆ. ಅಡಿಕೆಯ ಬೆಲೆಯು ಈಗ ಉತ್ತಮ ಸ್ಥಿತಿಯಲ್ಲಿದ್ದು ಕೃಷಿಕರು ಅಡಿಕೆಯೊಂದನ್ನೇ ಅವಲಂಬಿಸದೆ ಇತರ ಮಿಶ್ರ ಬೆಳೆಯತ್ತ ಗಮನ ಹರಿಸಬೇಕಾಗಿದೆ. ಕ್ಯಾಂಪ್ಕೋ ಈಗಾಗಲೇ ಕಾಳುಮೆಣಸು ಖರೀದಿ ಪ್ರಾರಂಭ ಮಾಡಿದ್ದು ಇನ್ನು ಮುಂದಿನ ದಿನಗಳಲ್ಲಿ ತೆಂಗಿನಕಾಯಿ ಖರೀದಿ ಮತ್ತು ಗುಣಮಟ್ಟದ ತೆಂಗಿನೆಣ್ಣೆಯನ್ನು ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಕೊಕ್ಕೋ ಬೀಜಕ್ಕೂ ಉತ್ತಮ ದರ ನೀಡಿ ಅದರ ಬೆಲೆಯಲ್ಲೂ ಸ್ಥಿರvಯನ್ನು ಕಾಪಾಡಿಕೊಂಡು ಬಂದಿದೆ ಎಂದರು.

ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಪ್ರಸ್ತಾವಿಸಿ, ಅಡಕೆಯ ಒಟ್ಟು ಉತ್ಪಾದನೆಯ ಶೇ. 10 ರಿಂದ 12 ರಷ್ಟು ಮಾತ್ರ ಕ್ಯಾಂಪ್ಕೋಗೆ ಬರುತ್ತಿದೆ. ಉಳಿದವು ಖಾಸಗಿಯವರ ಪಾಲಾಗುತ್ತಿದೆ. ಕ್ಯಾಂಪ್ಕೋ ಆನ್ ವೀಲ್ ಎಂಬ ಕಾರ್ಯಕ್ರಮದಡಿಯಲ್ಲಿ ಸಂಸ್ಥೆಯ ನುರಿತ ಸಿಬ್ಬಂದಿಗಳು ರೈತರ ಮನೆಗಳಿಗೆ ಭೇಟಿ ನೀಡಿ ಅಲ್ಲಿಂದಲೇ ಅಡಕೆ ಖರೀದಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕ್ಯಾಂಪ್ಕೋ ಸದಸ್ಯರಿಗೆ ಸುಸಜ್ಜಿತ ವ್ಯವಸ್ಥೆ ಮತ್ತು ವ್ಯವಹಾರವನ್ನು ಸರಳಗೊಳಿಸಲು ಸಹಕಾರಿ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಈಗಾಗಲೇ ಮಂಚಿ, ಸಿದ್ಧಾಪುರ, ನೆಲ್ಯಾಡಿ ಎಂಬಲ್ಲಿ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಈ ಜನವರಿ ತಿಂಗಳಲ್ಲೇ ನಾಲ್ಕನೆಯ ನೂತನ ಕಟ್ಟಡವನ್ನು ನಾರಾವಿಯಲ್ಲಿ ಉದ್ಘಾಟಿಸುತ್ತಿದ್ದೇವೆ ಎಂದರು.

ಸಹಕಾರಿ ಸಂಘದ ವತಿಯಿಂದ ಕ್ಯಾಂಪ್ಕೋ ಅಧ್ಯಕ್ಷರನ್ನು ಸಮ್ಮಾನಿಸಲಾಯಿತು. ಕ್ಯಾಂಪ್ಕೋದ ವತಿಯಿಂದ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ನಾರಾವಿ ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ರತ್ನಾಕರ ರಾವ್ ಹೊಳೆಹೊದ್ದು ಅವರನ್ನು ಸಮ್ಮಾನಿಸಲಾಯತು.

ಕ್ಯಾಂಪ್ಕೋದ ನಿರ್ದೇಶಕರಾದ ದಯಾನಂದ ಹೆಗ್ಡೆ, ಡಾ. ಜಯಪ್ರಕಾಶ್ ತೋಟತ್ತಾಡಿ, ರಾಘವೇಂದ್ರ ಭಟ್ ಕೆದಿಲ, ಮಹೇಶ್ ಚೌಟ, ಡಿ.ಜಿ.ಎಮ್. ರವೀಶ್ ಯಂ. ಡಿ.ಜಿ.ಎಂ. ಪ್ರಮೋದ್ ಕುಮಾರ್, ಎ.ಜಿ.ಯಂ. ರಾಘವೇಂದ್ರ ಪುತ್ತೂರು, ಪ್ರಾದೇಶಿಕ ವ್ಯವಸ್ಥಾಪಕ ಗೋವಿಂದ ಭಟ್ ಬೆಕಂಪಾಡಿ. ವಲಯ ವ್ಯವಸ್ಥಾಪಕ ಚಂದ್ರ ಯಂ. ತ್ರಿಶೂರು, ವಲಯ ವ್ಯವಸ್ಥಾಪಕ ಜಯರಾಮ ಶೆಟ್ಟಿ, ಕ್ಯಾಂಪ್ಕೋದ ಸಕ್ರೀಯ ಸದಸ್ಯ ರವೀಂದ್ರ ಪೂಜಾರಿ ಬಾಂದೋಟ್ಟು, ಸುಧಾಕರ ಕಜಂಗೆ, ಡಾಕಯ ಪೂಜಾರಿ, ಗಂಗಾಧರ ಶೇರಿಗಾರ್, ಗ್ರಾ.ಪಂ. ಉಪಾಧ್ಯಕ್ಷ ಉದಯ ಹೆಗ್ಡೆ, ನಾರಾವಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯನ್. ಶಶಿಕಾಂತ ಜೈನ್, ಉಪಾಧ್ಯಕ್ಷ ಸದಾನಂದ ಗೌಡ, ನಿರ್ದೇಶಕರುಗಳಾದ ಜಗದೀಶ ಹೆಗ್ಡೆ, ರಾಜೇಂದ್ರ ಕುಮಾರ್, ಹರೀಶ ಹೆಗ್ಡೆ, ಲಕ್ಷ್ಮಣ ಪೂಜಾರಿ, ಸುಜಲತಾ, ಪೆರ್ನ ಉಪಸ್ಥಿತರಿದ್ದರು. ಈ ಸಂದರ್ಭ ಕೃಷಿಕರೊಂದಿಗೆ ಸಂವಾದ ನಡೆಯಿತು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಸ್ವಾಗತಿಸಿದರು. ನಿರ್ದೇಶಕ ದಯಾನಂದ ಹೆಗ್ಡೆ ವಂದಿಸಿದರು. ಕ್ಯಾಂಪ್ಕೋ ಶಾಖಾ ವ್ಯವಸ್ಥಾಪಕ ಗಣೇಶ್ ಎಂ.ಡಿ. ಮತ್ತು ರಾಜೇಶ್ ಸಹಕರಿಸಿದರು. ಬೈಕಂಪಾಡಿ ವಲಯ ವ್ಯವಸ್ಥಾಪಕ ಚಂದ್ರ ಎಂ. ಕಾರ್ಯಕ್ರಮ ನಿರ್ವಹಿಸಿದರು.

See also  ಗುತ್ತಿಗೆದಾರ ಸಂತೋಷ್ ಪ್ರಕರಣ ಸರ್ಕಾರ ಹಸ್ತಕ್ಷೇಪ ಮಾಡಲ್ಲ:ಸಿಎಂ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು