News Kannada
Friday, March 31 2023

ಮಂಗಳೂರು

ಮೂಡುಕೋಡಿ: ಈಶ್ವರ ಮಾಸ್ಟರ್‌ ರಸ್ತೆ ನಾಮಫಲಕ ಅನಾವರಣ

Photo Credit : News Kannada

ಬೆಳ್ತಂಗಡಿ : ಗ್ರಾಮ ಪಂಚಾಯತ್ ವೇಣೂರು ವತಿಯಿಂದ ಉದ್ಯಮಿ ರಾಬರ್ಟ್ ಡಿಸೋಜ ಅವರ ಪ್ರಾಯೋಜಕತ್ವದಲ್ಲಿ ನಿರ್ಮಾಣವಾದ ಈಶ್ವರ ಮಾಸ್ಟರ್ ರಸ್ತೆ ನಾಮಫಲಕವನ್ನು ಮಾನವ ಹಕ್ಕು ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ರಾಬರ್ಟ್‌ ಡಿಸೋಜಾ ಅನಾವರಣ ಗೊಳಿಸಿದರು.

ಅಧ್ಯಕ್ಷತೆಯನ್ನು ವೇಣೂರು ಗ್ರಾ ಪಂ ಅಧ್ಯಕ್ಷ ನೇಮಯ್ಯ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ವಕೀಲರಾದ ನಾಗೇಶ್ ಶೆಟ್ಟಿ, ಸತೀಶ್ ಪಿ.ಎನ್, ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ, ಸದಸ್ಯರುಗಳಾದ ಅರುಣ್ ಕ್ರಾಸ್ತಾ, ಹರೀಶ್ ಪಿ.ಎಸ್, ಉಮೇಶ್ ನಡ್ತಿಕಲ್ಲು, ದಿನೇಶ್ ತಾರಿಪಡ್ಪು, ಸುರೇಶ್ ಪೂಜಾರಿ, ಮಾಜಿ ಪಂ ಅಧ್ಯಕ್ಷ ಮೋಹನ ಅಂಡಿಂಜೆ, ಮಾಜಿ ಸದಸ್ಯೆ ಜೆಸ್ಸಿಟೀಚರ್, ಜಾನಕಿ ಟೀಚರ್, ಸೋನಿಯ‌ಾ ರಾಬರ್ಟ್,ಶಿಕ್ಷಕಿ ಕ್ರಿಸ್ತಿನಾ ಜೊನಿಫರ್, ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಯುವವಾಹಿನಿ ಘಟಕದ ಅಧ್ಯಕ್ಷ ಯೋಗಿಶ್ ಬಿಕ್ರೋಟ್ಟು, ಮಾಜಿ ಅಧ್ಯಕ್ಷ ಅರುಣ್ ಕೋಟ್ಯಾನ್ ತಾಲೂಕು ನಿರ್ದೇಶಕರಾದ ರಮೇಶ್ ಪಡ್ದಾಯಿಮಜಲು, ರಕ್ಷೀತ್ ಬಂಗೇರ ಹಲೆಕ್ಕಿ, ಮೂಡುಕೋಡಿ ಬಿಲ್ಲವ ಸಂಘದ ಅಧ್ಯಕ್ಷ ರವೀಂದ್ರ ಪಾಲ್ದಲ್ಕೆ, ಸುಂದರ ಅಪರ್ಣ, ಸುದೀಪ್ ಉಂಬೆಟ್ಟು, ಸುಂದರ ಪೂಜಾರಿ ಪುತ್ತಿಲಕಜೆ, ಶೇಖರ ಕೊಳಂಗಜೆ ಉಪನ್ಯಾಸಕ ಆನಂದಪ್ಪ, ತೇಜಸ್ ಉಪಸ್ಥಿತರಿದ್ದರು.

ರತ್ನರಾಜ ಆರಿಗ ಪ್ರಸ್ತಾವಿಸಿ, ಪಂ.ಸದಸ್ಯ ಅನುಪ್ ಜೆ.ಪಾಯಸ್ ಸ್ವಾಗತಿಸಿ ನಿರೂಪಿಸಿ, ಧರ್ಮರಾಜ್ ವಂದಿಸಿದರು.

See also  ಸಮಾಜದ ಶಾಂತಿಗೆ ಪೊಲೀಸರ ಶ್ರಮ ವಿಶೇಷ -ಶಾಸಕ ರಾಜೇಶ್ ನಾಯ್ಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು