News Kannada
Friday, March 31 2023

ಮಂಗಳೂರು

ಮಾರ್ಚ್ 2ಡರ ಬಳಿಕ ಮನಪಾಗೆ ಹೊಸ ಮೇಯರ್, ರಾಜಕೀಯ ಲೆಕ್ಕಾಚಾರಕ್ಕೆ ಪಾಲಿಕೆ ಅಖಾಡ ಸಿದ್ಧ

Photo Credit :

ಮಂಗಳೂರು : ಮಹಾನಗರ ಪಾಲಿಕೆಗೆ ಹೊಸ ಮೇಯರ್ ಹಾಗೂ ಹೊಸ ಉಪ ಮೇಯರ್ ಆಯ್ಕೆ ಪ್ರಾಥಮಿಕ ಸಿದ್ಧತೆ ನಡೆಯುತ್ತಿದ್ದು, ಮಾರ್ಚ್ ಎರಡರಂದು ಚುನಾವಣೆ ನಿಗದಿಯಾಗಿದೆ . ಈ ನೆಲೆಯಲ್ಲಿ ಮನಪಾ ಅಖಾಡದಲ್ಲಿ ರಾಜಕೀಯ ಚರ್ಚೆ ಗರಿಗೆದರಿವೆ ೨೦೨೨ 2023ನೇ ಸಾಲಿಗೆ ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನವು ಹಿಂದುಳಿದ ವರ್ಗ ಎ ಮಹಿಳೆ ಮೀಸಲಾತಿ ಅಂತಿಮಗೊಂಡಿದೆ .

ಕಳೆದ ವರ್ಷ ಮಾರ್ಚ್ ಎರಡರಂದು ಮೇಯರ್ ಚುನಾವಣೆ ನಡೆದಿತ್ತು ಈ ಬಾರಿಯೂ ಇದೇ ಸಮಯಕ್ಕೆ ಚುನಾವಣೆ ನಡೆಯಲಿದೆ .ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಸೂತ್ರ ಹಿಡಿದ ಬಳಿಕ ನಡೆಯುವ ಮೂರನೇ ಮೇಯರ್ ಸ್ಥಾನದ ಚುನಾವಣೆ ಇದಾಗಿದೆ ಮೊದಲಿಗೆ ದಿವಾಕರ ಪಾಂಡೇಶ್ವರ ಮೇಯರ್ ಆಗಿದ್ದು ಪ್ರಸ್ತುತ ಪ್ರೇಮಾನಂದ ಶೆಟ್ಟಿ ಮೇಯರ್.

ಮುಂದಿನ ಮೇಯರ್ ಯಾರು ಎಂಬ ಬಗ್ಗೆ ಬಹಿರಂಗ ಮಾತುಕತೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ .ಆದರೆ ಬಿಜೆಪಿ ಪಕ್ಷದೊಳಗೆ ಈ ಕುರಿತ ಚರ್ಚೆಗೆ ವೇದಿಕೆ ಸಿದ್ಧಗೊಂಡಿದೆ ಆಕಾಂಕ್ಷಿಗಳು ತಮ್ಮ ವ್ಯಾಪ್ತಿಯಲ್ಲಿ ಲಾಬಿ ನಡೆಸಲು ಸದ್ದಿಲ್ಲದೇ ಸುದ್ದಿ ಮಾಡುತ್ತಿದ್ದಾರೆ . ಮುಂದಿನ ಮೇಯರ್ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ,ಶಾಸಕರಾದ ಡಿ ವೇದವ್ಯಾಸ ಕಾಮತ್ ,ಡಾಕ್ಟರ್ ವೈ ಭರತ್ ಶೆಟ್ಟಿ ಸಹಿತ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಮಹತ್ವದ ಸಭೆ ಕೆಲವೇ ದಿನಗಳಲ್ಲಿ ಮಂಗಳೂರಿನಲ್ಲಿ ನಡೆಯಲಿದೆ .

ಉಪ ಮೇಯರ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ನಡೆಯಲಿದೆ ಬಳಿಕ ಕಾರ್ಪೊರೇಟರ್ ಗಳ ಅಭಿಪ್ರಾಯ ಆಲಿಸಲಾಗುತ್ತದೆ. ಬಿಜೆಪಿಯಿಂದ 2ಬಾರಿ ಮೇಯರ್ ಸ್ಥಾನ ಮಂಗಳೂರು ದಕ್ಷಿಣಕ್ಕೆ ಲಭಿಸಿರುವ ಕಾರಣದಿಂದ ಮುಂದಿನದ್ದು ನಗರ ಉತ್ತರಕ್ಕೆ ಎಂಬುದು ಚರ್ಚೆಯಲ್ಲಿದೆ ಜತೆಗೆ ಮೇಯರ್ ಆಯ್ಕೆ ಕುರಿತಂತೆ ಜಾತಿ ಸಮೀಕರಣವೂ ಸದ್ಯ ಕೇಳಿ ಬರುತ್ತಿದೆ.

See also  ಬಂಟ್ವಾಳ: ಸಿಡಿಲಿನ ಅಬ್ಬರಕ್ಕೆ ಮನೆ ಗೋಡೆ ಹಾಗೂ ಹಂಚು ಹಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು