News Kannada
Friday, March 24 2023

ಮಂಗಳೂರು

ಪ್ರಸಾದ್ ಆರ್ಟ್ ಗ್ಯಾಲರಿ 27 ವರ್ಷ ಅಂಗವಾಗಿ ‘ಪರಂಪ್ರತೀಕ’ ಕಲಾ ಉತ್ಸವ ಉದ್ಘಾಟನೆ

Photo Credit : News Kannada

ಮಂಗಳೂರು , ಫೆ. 26 : ಮೂಡಬಿದ್ರಿಯ ಆಳ್ವಾಸ್ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಅವರು 2022 ರ ಫೆ. 25 ರಂದು ಶನಿವಾರ ಸಂಜೆ 5 ಗಂಟೆಗೆ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಿಂದ 27 ವರ್ಷಗಳನ್ನು ಪೂರೈಸಿದ ಅಂಗವಾಗಿ ‘ಪರಂಪ್ರತೀಕ’ ವಿಶಿಷ್ಟ ಕಲಾ ಉತ್ಸವವನ್ನು ಉದ್ಘಾಟಿಸಿದರು.

ಮಂಗಳೂರಿನ ಕೊಡಿಯಾಲಗುತ್ತು ಪೂರ್ವ ರಸ್ತೆಯಲ್ಲಿರುವ ‘ರಾಮ್ ಪ್ರಸಾದ್’ ನಲ್ಲಿರುವ ಗ್ಯಾಲರಿ ಸಂಸ್ಥಾಪಕ ಕೋಟಿ ಪ್ರಸಾದ್ ಆಳ್ವ ಅವರ ವಿಶಾಲವಾದ ವಸತಿ ಆವರಣದಲ್ಲಿ ನೈಸರ್ಗಿಕ ಹಸಿರಿನ ನಡುವೆ ನಾಲ್ಕು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉತ್ಸವವು 28 ಫೆಬ್ರವರಿ 2022 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 7.30 ರವರೆಗೆ ಮುಂದುವರಿಯಲಿದೆೆ. ಬೆಂಗಳೂರಿನ ಬೋಧಿ ಕಾಲೇಜ್ ಆಫ್ ವಿಷುಯಲ್ ಆರ್ಟ್ನ ನಿರ್ದೇಶಕ ಶಿವಾನಂದ ಬಸವಂತಪ್ಪ ಗೌರವ ಅತಿಥಿಗಳಾಗಿದ್ದರು. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರಿನ ಮೊದಲ ಮತ್ತು ಅತ್ಯಂತ ಕ್ರೀಯಾಶೀಲ ಕಲಾ ಕೇಂದ್ರವಾಗಿರುವ ಪ್ರಸಾದ್ ಆರ್ಟ್ ಗ್ಯಾಲರಿ ಕಲಾವಿದ ಕೋಟಿ ಪ್ರಸಾದ್ ಆಳ್ವ ಅವರು 1994 ರಲ್ಲಿ ನಗರದಲ್ಲಿ ಕಲಾ ಗ್ಯಾಲರಿಯ ಅಗತ್ಯವನ್ನು ಪೂರೈಸಲು ಸ್ಥಾಪಿಸಿದ್ದರು. “ಸೌಂದರ್ಯ ಪ್ರಜ್ಞೆ, ಸ್ರಜನಶೀಲತೆ ಸಮಾಜಕೆ ಅಗತ್ಯ. ಯಾರಿಗೆ ಈ ಪ್ರಜ್ಞೆ ಇದೆಯೋ, ಅವರು ದೇಶವನ್ನು, ಪರಿಸರವನ್ನು, ಸಮಾಜವನ್ನು ಪ್ರೀತಿಸುತ್ತಾರೆ ಎಂದು ಅರ್ಥ,” ಎಂದು ಮೋಹನ್ ಆಳ್ವ ತಮ್ಮ  ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಗೌರವ ಅತಿಥಿ ಶಿವಾನಂದ ಬಸವಂತಪ್ಪ ಅವರು ಪಾರಂಪರಿಕ ಕಲಾ ಸಂಗ್ರಹಗಳ ಮಹತ್ವವನ್ನು ತಿಳಿಸಿದರು ಮತ್ತು ಪ್ರಾಚೀನ ವಸ್ತುಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯದ ಕುರಿತು ಮಾತನಾಡಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಕಲಾ ಗ್ಯಾಲರಿ ಒದಗಿಸುವುದು ಸರ್ಕಾರದ  ಕರ್ತವ್ಯವಾಗಿದ್ದು, ಈ ಕೊರತೆಯನ್ನು ತುಂಬಲು ಸ್ವತಃ ಕಲಾವಿದರು ಒಗ್ಗೂಡಿರುವುದು ಶ್ಲಾಘನೀಯ, ಎಂದು ಹೇಳಿದರು.

ರೇಖಾ ಆಳ್ವ ಸ್ವಾಗತಿಸಿದರು. ಶರತ್ ಹೊಳ್ಳ ಪ್ರಾಸ್ತಾವಿಕ ಭಾಷಣ ನೀಡಿದರು. ರಿಯಾ ಆಳ್ವ ವಂದಿಸಿದರು. ವೀಣಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಲಾ ಉತ್ಸವದ ಅಂಗಳವು ಲಭ್ಯವಿರುವ ಪ್ರತಿಯೊಂದು ಜಾಗವನ್ನೂ ಅಲಂಕರಿಸುವ ಸುಂದರವಾದ ಕಲಾಕೃತಿಗಳೊಂದಿಗೆ ಹಬ್ಬದ ನೋಟವನ್ನು ಧರಿಸಿದೆ. ಸ್ಥಳವು ಚಟುವಟಿಕೆಯಿಂದ ತುಂಬಿ ಉತ್ಸಾಹಿ ಕಲಾವಿದರು ಮತ್ತು ಕಲಾಭಿಮಾನಿಗಳು ಎಲ್ಲೆಡೆ ನೆರೆದಿರುವುದು ಕಂಡುಬಂದಿತು. ‘ಪರಂಪ್ರತೀಕ’ ಕಲಾ ಉತ್ಸವವು ಮೂರು ವಿಭಾಗಗಳಲ್ಲಿ ಕಲೆಯನ್ನು ಪ್ರದರ್ಶಿಸುತ್ತದೆ: (1) ಪಾರಂಪರಿಕ ಸಂಗ್ರಹ ಮತ್ತು ಪ್ರಾಚೀನ ವಸ್ತುಗಳ ಪ್ರದರ್ಶನ, (2) ‘ಪರಂಪ್ರತೀಕ’ ಶೀರ್ಷಿಕೆಯ ಪ್ರತಿಷ್ಠಾಪನಾ ಕಲೆಯ ಸ್ಪರ್ಧೆ ಮತ್ತು (3) 27 ಪ್ರತಿಷ್ಠಿತ ಹಿರಿಯ ಕಲಾವಿದರ ಕೃತಿಗಳ ಪ್ರದರ್ಶನ. ವೈವಿಧ್ಯಮಯ ಕಲೆಯ ಈ ಅಭೂತಪೂರ್ವ  ಪ್ರದರ್ಶನವು ಕಲಾವಿದರು ಮತ್ತು ಕಲಾಭಿಮಾನಿಗಳಿಗೆ ಅವಿಸ್ಮರಣೀಯ ಅನುಭವವಾಗಲಿದೆ.

See also  ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ; ಮಂಜುನಾಥ ಭಂಡಾರಿ

27ನೇ ಫೆಬ್ರವರಿ 2022ರ ಭಾನುವಾರ ಸಂಜೆ 4.30ಕ್ಕೆ ಅಂತರಾಷ್ಟ್ರೀಯ ಖ್ಯಾತಿಯ ದೃಶ್ಯ ಕಲಾವಿದ ಎಲ್.ಎನ್.ತಲ್ಲೂರ್ ಅವರೊಂದಿಗೆ ವಿಶೇಷ ಸಂವಾದಾತ್ಮಕ ಅಧಿವೇಶನವನ್ನು ಏರ್ಪಡಿಸಲಾಗಿದೆ. ಕಲಾ ಇತಿಹಾಸಕಾರರಾದ ಮೈಂಡ್‌ಕ್ರಾಫ್ಟ್ ಸ್ಟುಡಿಯೋಸ್‌ನ ನೇಮಿರಾಜ್ ಶೆಟ್ಟಿ ಅವರು ಅಧಿವೇಶನವನ್ನು ನಿರ್ವಹಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು