News Kannada
Monday, December 11 2023
ಮಂಗಳೂರು

ಜನರೊಂದಿಗೆ ಬೆಳೆದು ಬಂದ ಪಕ್ಷ ಬಿಜೆಪಿ: ಸಿ.ಟಿ.ರವಿ

C T RAVI
Photo Credit : Twitter

ಬಂಟ್ವಾಳ: ಭಾರತೀಯ‌ ಜನತಾ‌ ಪಕ್ಷ ಯಾವುದೇ ರಾಜಕೀಯ ಪಾರ್ಟಿಯನ್ನು  ಎ ಟೀಮ್‌ ಅಥವಾ ಬಿ‌ ಟೀಮ್‌ ಆಗಿ‌ಇಟ್ಟುಕೊಂಡಿಲ್ಲ,‌ ನಮ್ಮದೇನಿದ್ದರೂ, ಜನರೊಂದಿಗೆ ಬೆಳೆದು ಬಂದ ಪಕ್ಷ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಬಂಟ್ವಾಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ‌ ಅವರು, ಚುನಾವಣೆ ಮತ್ತು ಮತದಾನದ ಸಂದರ್ಭ ಒಲವು ಬದಲಾವಣೆಗಳಾಗುತ್ತದೆ, ರಾಮಾಯಣ ಕಾಲದಲ್ಲಿಯೂ ವಿಭೀಷಣನ ಪರ ಒಲವು ತೋರಿಸಿದ್ದ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದ ಅವರು, ಬಿಜೆಪಿ ಗೆಲ್ಲಬೇಕುಬೆನ್ನುವ ಮನಸ್ಸಿನವರು‌ ಕಾಂಗ್ರೇಸ್ ನಲ್ಲಿಯೂ ಇದ್ದಾರೆ, ಜೆಡಿಎಸ್ ನಲ್ಲಿಯೂ ಇದ್ದಾರೆ ಎಂದರು.

ಪಕ್ಷಾಂತರ ಪರ್ವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಇದು ಸಹಜ, ಇಲ್ಲಿ ಕೂಡೋ‌ಲೆಕ್ಕಕ್ಕೆ ಯಶಸ್ಸು ಇದೆಯೇ ವಿನಃ ಕಳೆಯುವುದಕ್ಕಲ್ಲ ಎಂದರು. ಪಠ್ಯ ಪುಸ್ತಕ ವಿವಾದ ಕುರಿತ ವಿಶ್ವನಾಥ್ ಹೇಳಿಕೆ‌ ಕುರಿತು ಪ್ರತಿಕ್ರಿಯಿಸಿದ ಅವರು, ಪಠ್ಯ ಪುಸ್ತಕ ಸರಿ‌ಇಲ್ಲ ಎನ್ನುವವರು, ಪಠ್ಯ ಪುಸ್ತಕವನ್ನು ಓದಿ, ಬಳಿಕ ಮಾತನಾಡಲಿ, ಯಾರ್ಯಾರದೋ ಮಾತು ಕೇಳಿ ಮಾತನಾಡಬಾರದು ಎಂದರು.

See also  ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾಗಿ ಸುಧಾಕರ ಪೂಂಜ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು