News Kannada
Thursday, September 28 2023
ಮಂಗಳೂರು

ಮಂಗಳೂರು: ನಗರ ಭಯೋತ್ಪಾದನಾ ನಿಗ್ರಹ ದಳದಿಂದ ಅಣಕು ಪ್ರದರ್ಶನ

Untitled 2 Recovered Recovered Recovered 45
Photo Credit :

ಮಂಗಳೂರು: ಆಂತರಿಕ ಭದ್ರತಾ ವಿಭಾಗದ ಅಡಿಯಲ್ಲಿ (ಐಎಸ್ ಡಿ) ನಗರ ಭಯೋತ್ಪಾದನಾ ನಿಗ್ರಹ ದಳವು ನಗರ ಮತ್ತು ಕಮಿಷನರೇಟ್‌ನ ಮಿತಿಗಳಲ್ಲಿ ಸೇವೆ ಸಲ್ಲಿಸಲು ಸಿದ್ಧವಾಗಿದ್ದು,ಇದಕ್ಕೂ ಮುನ್ನ ಜೂನ್ 16 ಗುರುವಾರ ಪೊಲೀಸ್ ಮೈದಾನದಲ್ಲಿ ತಂಡವು ಅಣಕು ಪ್ರದರ್ಶನ ನಡೆಸಿತು.

ಈ ತಂಡದಲ್ಲಿ 35 ಪೊಲೀಸ್ ಸಿಬ್ಬಂದಿಯನ್ನು ಹೊಂದಿದೆ. ಬೆಂಗಳೂರಿನ ಕೂಡ್ಲುವಿನಲ್ಲಿರುವ ಭಯೋತ್ಪಾದನೆ ನಿಗ್ರಹ ಕೇಂದ್ರದಲ್ಲಿ (ಸಿಸಿಟಿ) ತಂಡ ಎರಡು ತಿಂಗಳ ತರಬೇತಿ ಪಡೆದು ನಗರಕ್ಕೆ ಆಗಮಿಸಿದೆ.

ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ’30 ಸದಸ್ಯರ ಸಿಸಿಟಿ ತಂಡವು ದೈಹಿಕ ಮತ್ತು ಮಾನಸಿಕ ಸದೃಢತೆ ಹಾಗೂ ಕೌಶಲ್ಯ ತರಬೇತಿಯೊಂದಿಗೆ ಎರಡು ತಿಂಗಳ ಅವಧಿಯಲ್ಲಿ ತರಬೇತಿಯನ್ನು ಪಡೆದುಕೊಂಡಿದೆ. ಎರಡು ತಿಂಗಳ ತರಬೇತಿಯಲ್ಲಿ ವಿಚಾರಣೆ, ವ್ಯಕ್ತಿಗಳನ್ನು ಅಪಹರಿಸಿ, ಒತ್ತೆಯಾಗಿಟ್ಟುಕೊಂಡಾಗ ಹೇಗೆ ಕಾರ್ಯಾಚರಿಸುವುದು,  ಸಾಮಾಜಿಕ ವಿರೋಧಿ ಅಂಶಗಳನ್ನು ಎದುರಿಸಲು ವಿಶೇಷ ಸಂದರ್ಭಗಳಲ್ಲಿ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವುದು ಹೇಗೆ ಮುಂತಾದ ತರಬೇತಿ ಪಡೆದುಕೊಂಡಿದೆ .

ಇದರೊಂದಿಗೆ ವರುಣ್ ವಾಟರ್ ಕ್ಯಾನನ್ ವಾಹನವನ್ನು ನಗರ ಸಶಸ್ತ್ರ ಪಡೆಗಳಿಗೆ ಸೇರಿಸಲಾಗುತ್ತದೆ, ಇದರಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದು ಕಾರ್ಯಾಚರಣೆ ಸಂದರ್ಭ ಬಳಸಲಾಗುತ್ತದೆ ಎಂದರು.

See also  ನೆರಿಯ ಗ್ರಾಮದಲ್ಲಿ ಕೃಷಿಕ ಗೋಪಾಲಗೌಡ ಆಸಿಡ್ ಸೇವಿಸಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು