News Kannada
Monday, September 25 2023
ಮಂಗಳೂರು

ಮಂಗಳೂರು: ಒಂದೇ ಮಳೆಗೆ ₹5 ಕೋಟಿ ನಷ್ಟ, ಕೈಗಾರಿಕೆಗಳಿಗೂ ನುಗ್ಗಿದ ನೀರು!

WhatsApp Image 2022 07 02 at 3.48.29 AM
Photo Credit : News Kannada

ಮಂಗಳೂರು:  ಕರಾವಳಿಯಲ್ಲಿ ಗುರುವಾರ ಒಂದೇ ದಿನ ಸುರಿದ ಮಳೆ ಸಾಮಾನ್ಯ ಮಳೆಗಿಂತ ಎರಡು ಪಟ್ಟು ಜಾಸ್ತಿ ಇತ್ತು ಎನ್ನುವುದು ಐಎಂಡಿ ಮಾಹಿತಿ. ಸಾಮಾನ್ಯವಾಗಿ ಈ ಸಮಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 44.1 ಮಿ.ಮೀ ಮಳೆಯಾಗಿತ್ತು.

ಈ ವರ್ಷ ಅದೇ ದಿನಕ್ಕೆ 85.1 ಮಿ.ಮೀ. ಮಳೆಯಾಗಿದೆ. ಸುಮಾರು 30ಕ್ಕೂ ಅಧಿಕ ಕೈಗಾರಿಕೆಗಳ ಒಳಗೆ ಮಳೆ ನೀರು ಪ್ರವೇಶಿಸಿ ಅಲ್ಲಿನ ಮೋಟಾರ್‌, ಕಚ್ಚಾ ಸಾಮಗ್ರಿ, ಸಿದ್ಧವಾದ ಉತ್ಪನ್ನಗಳು, ಯಂತ್ರೋಪಕರಣಗಳ ಬಿಡಿಭಾಗಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.

ಕರಾವಳಿಯಲ್ಲಿ ಗುರುವಾರ ಸುರಿದ ಅಬ್ಬರದ ಮಳೆಗೆ ಸುಮಾರು 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ದಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಳೆ ಹಾನಿಯ ಲೆಕ್ಕಾಚಾರದಲ್ಲಿ ತೊಡಗಿದ್ದು, ಪೂರ್ಣ ಪ್ರಮಾಣದ ನಷ್ಟದ ಪ್ರಮಾಣ ಸಿಗಲು ಇನ್ನಷ್ಟು ಸಮಯ ಬೇಕಿದೆ.

ಕರಾವಳಿಗೆ ಮುಂಗಾರು ಪ್ರವೇಶಿಸಿ ತಿಂಗಳಾದರೂ ಮಳೆಯ ಅಬ್ಬರ ಇರಲಿಲ್ಲ. ಆದರೆ ಜೂನ್‌ ಅಂತ್ಯಕ್ಕೆ ಮಳೆಯ ಅಬ್ಬರ ಕಾಣಿಸಿಕೊಂಡ ಪರಿಣಾಮ ಜಿಲ್ಲೆಯ ಬಹುತೇಕ ಕಡೆ ಹಾನಿಯೇ ಹೆಚ್ಚಾಗಿದೆ. ಬೈಕಂಪಾಡಿ ಕೈಗಾರಿಕಾ ಪ್ರಾಂಗಣದ ತಗ್ಗು ಪ್ರದೇಶದಲ್ಲಂತೂ ಮಳೆ ನೀರಿನಿಂದ ಕೈಗಾರಿಕೆಗಳೊಳಗೆ ನೀರು ಪ್ರವೇಶಿಸಿದ್ದು, ಜಿಲ್ಲೆಯಲ್ಲೇ ಹೆಚ್ಚು ಹಾನಿಯಾಗಿದೆ ಎಂದು ಕೈಗಾರಿಕೋದ್ಯಮಿಗಳು ತಿಳಿಸಿದ್ದಾರೆ.

ಗುರುವಾರ ಸುರಿದ ಮಳೆಗೆ ಮಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಜಿಲ್ಲೆಯಲ್ಲಿ 77 ಮನೆಗಳಿಗೆ ಭಾಗಶಃ ಹಾನಿಯಾದರೆ, 11 ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿಯಾಗಿವೆ. ಮಂಗಳೂರು ನಗರ ವ್ಯಾಪ್ತಿಯೊಳಗೆ ಸುಮಾರು 7 ಮನೆಗಳಿಗೆ ಪೂರ್ಣ ಹಾನಿಯಾದರೆ, 42 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಉಳ್ಳಾಲ ಭಾಗದಲ್ಲಿ 22 ಮನೆಗಳಿಗೆ ಭಾಗಶಃ ಹಾನಿಯಾದರೆ ಮೂರು ಮನೆಗಳು ಪೂರ್ಣ ಹಾನಿಗೆ ಗುರಿಯಾಗಿದೆ.

ಇದರ ಜತೆಯಲ್ಲಿ 38 ವಿದ್ಯುತ್‌ ಕಂಬಗಳು, 3 ಟ್ರಾನ್ಸ್‌ಫರ್‌ ಕಂಬಗಳು, 0.88ರಷ್ಟು ವಿದ್ಯುತ್‌ ವಯರ್‌ಗಳು, 0.65ರಷ್ಟು ಕಚ್ಚಾ ರಸ್ತೆಗಳು ಹಾನಿಗೆ ಗುರಿಯಾಗಿದೆ. ಇವುಗಳ ನಷ್ಟದ ಲೆಕ್ಕಾಚಾರದಲ್ಲಿಯೇ ಒಂದೂವರೆಯಿಂದ ಎರಡು ಕೋಟಿಯಷ್ಟು ನಷ್ಟ ಸಂಭವಿಸಿದೆ ಎನ್ನುತ್ತಾರೆ ತಜ್ಞರು.

ಕರಾವಳಿಯಲ್ಲಿ ಗುರುವಾರ ಒಂದೇ ದಿನ ಸುರಿದ ಮಳೆ ಸಾಮಾನ್ಯ ಮಳೆಗಿಂತ ಎರಡು ಪಟ್ಟು ಜಾಸ್ತಿ ಇತ್ತು ಎನ್ನುವುದು ಐಎಂಡಿ ಮಾಹಿತಿ. ಸಾಮಾನ್ಯವಾಗಿ ಈ ಸಮಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 44.1 ಮಿ.ಮೀ ಮಳೆಯಾಗಿತ್ತು. ಈ ವರ್ಷ ಅದೇ ದಿನಕ್ಕೆ 85.1 ಮಿ.ಮೀ. ಮಳೆಯಾಗಿದೆ. ಎಂದರೆ ಎರಡು ಪಟ್ಟು ಹೆಚ್ಚು ಮಳೆ ಸುರಿದ ಪರಿಣಾಮ ಹಾನಿಗಳೂ ಹೆಚ್ಚಾಗಿವೆ. ಮಂಗಳೂರು ವ್ಯಾಪ್ತಿಯಲ್ಲಿ 108.9 ಮಿ.ಮೀ., ಬಂಟ್ವಾಳದಲ್ಲಿ 108.9 ಮಿ.ಮೀ. ಅತೀ ಹೆಚ್ಚು ಮಳೆಯಾಗಿದೆ.

ಕರಾವಳಿಯಲ್ಲಿ ಅಬ್ಬರದ ಮಳೆಗೆ ಹೆಚ್ಚು ಹಾನಿಯಾದ ಭಾಗ ಬೈಕಂಪಾಡಿ ಕೈಗಾರಿಕಾ ಪ್ರಾಂಗಣ. ಸುಮಾರು 30ಕ್ಕೂ ಅಧಿಕ ಕೈಗಾರಿಕೆಗಳ ಒಳಗೆ ಮಳೆ ನೀರು ಪ್ರವೇಶಿಸಿ ಅಲ್ಲಿನ ಮೋಟಾರ್‌, ಕಚ್ಚಾ ಸಾಮಗ್ರಿ, ಸಿದ್ಧವಾದ ಉತ್ಪನ್ನಗಳು, ಯಂತ್ರೋಪಕರಣಗಳ ಬಿಡಿಭಾಗಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.

See also  ಶಿಖರದಿಂದ ಸಾಗರಕ್ಕೆ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಸಾಹಸಿ ಯುವತಿಯರಿಗೆ ಇಂದು ಉಲ್ಲಾಳ ತೀರದಲ್ಲಿ ಸ್ವಾಗತ

2018ರಲ್ಲಿ ಕಾಣಿಸಿಕೊಂಡ ಮಳೆಯ ಬಳಿಕ ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿ ಕೈಗಾರಿಕೋದ್ಯಮಿಗಳು ಎಚ್ಚರದಿಂದ ಇದ್ದರೆ ಈ ಕಾರಣದಿಂದ ಈ ಬಾರಿ ಕೊಂಚ ನಷ್ಟ ಕಡಿಮೆಯಾಗಿದೆ. ಆದರೆ ಪ್ರತಿ ಮಳೆಗೆ ಬೈಕಂಪಾಡಿ ಕೈಗಾರಿಕಾ ವಲಯದಲ್ಲಂತೂ ಅಪಾರ ನಷ್ಟ ಸಂಭವಿಸುತ್ತಾ ಇರುತ್ತದೆ. ಒಂದೆರಡು ದಿನಗಳಲ್ಲಿ ನಿಖರ ನಷ್ಟದ ಪ್ರಮಾಣ ತಿಳಿದುಬರುತ್ತದೆ ಎನ್ನುತ್ತಾರೆ ಬೈಕಂಪಾಡಿ ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಐಸಾಕ್‌ ವಾಸ್‌.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಹೇಳುವಂತೆ ಈಗಾಗಲೇ ಮನೆ, ಸೇತುವೆ, ವಿದ್ಯುತ್‌ ಕಂಬಗಳ ನಷ್ಟಗಳ ವಿವರಗಳನ್ನು ಸಂಗ್ರಹಿಸಲಾಗಿದೆ. ಆದರೆ ಆರ್ಥಿಕ ವಿಚಾರದ ಕುರಿತು ನಿಖರ ಮಾಹಿತಿಗಳು ಒಂದೆರಡು ದಿನಗಳಲ್ಲಿ ನಿಖರವಾಗಿ ತಿಳಿಯಬಹುದು ಎಂದು ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು