News Kannada
Wednesday, December 06 2023
ಮಂಗಳೂರು

ಬೆಳ್ತಂಗಡಿ: ರಕ್ಷಣೆಗೆ ಧಾವಿಸಿದ ವ್ಯಕ್ತಿಯನ್ನು ತಳ್ಳಿದಾಗ ಕುಸಿದು ಬಿದ್ದು ಸಾವು

Bengaluru student commits suicide by jumping off college campus building
Photo Credit : IANS

ಬೆಳ್ತಂಗಡಿ: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಡೆದ ನೈತಿಕ ಪೊಲೀಸ್‌ಗಿರಿಯಲ್ಲಿ ವ್ಯಕ್ತಿಯೊಬ್ಬರಿಗೆ ಯುವಕರ ಗೊಂಪೊಂದು ದೈಹಿಕ ಹಲ್ಲೆ ಮಾಡಿದ್ದು ಈ ವೇಳೆ ಅವರ ರಕ್ಷಣೆಗೆ ಧಾವಿಸಿದ ವ್ಯಕ್ತಿಯನ್ನು ದೂಡಿಹಾಕಿದಾಗ ಅವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಶಾಂತಿನಗರ ನಿವಾಸಿ ಜಾರಪ್ಪ ನಾಯ್ಕ್ (55)ಎಂಬವರೇ ಈ ಘಟನೆ ವೇಳೆ ಸಾವನ್ನಪ್ಪಿದವರು. ಸ್ಥಳೀಯ ನಿವಾಸಿಗಳಾದ ಚಂದ್ರಕಾಂತ್ ನಾಯ್ಕ್, ಮನೋಹರ್ ಗೌಡ, ಹರಿಪ್ರಸಾದ್ ಪೂಜಾರಿ, ದೀಪಕ್ ಶೆಟ್ಟಿ ಇವರು ಆರೋಪಿಗಳು.

ಬಾಲಕಿಗೆ ಲೈಂಗಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪದಡಿ ನಾರಾಯಣ ನಾಯ್ಕ( 47) ಎಂಬವರಿಗೆ ತಂಡ ಶುಕ್ರವಾರ ಸಂಜೆ ಹಲ್ಲೆ ನಡೆಸಿತ್ತು. ಈ‌ ವೇಳೆ ವಿವರ ಅರಿತು ಜಾರಪ್ಪ ನಾಯ್ಕ ಅವರು ಸ್ಥಳಕ್ಕೆ ಬಂದು ಹಲ್ಲೆ ತಡೆಯಲು ಮುಂದಾದಾಗ ಅವರನ್ನು  ತಂಡ ದೂಡಿದಾಗ ನೆಲಕ್ಕೆ ಬೀಳುವ ರಭಸದಲ್ಲಿ ಅವರನ್ನು ತಡೆಯುತ್ತಿದ್ದಂತೆ ಅವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ನಾರಾಯಣ ನಾಯ್ಕ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಮೃತರಾದ ಜಾರಪ್ಪ ನಾಯ್ಕ ನಾರಾಯಣ ನಾಯ್ಕ ಅವರ ಪತ್ನಿಯ ಅಕ್ಕನ ಪತಿಯಾಗಿದ್ದಾರೆ. ಶಾಂತಿನಗರ ಆಟದ ಮೈದಾನದ ಬಳಿ ಘಟನೆ ನಡೆದಿದೆ‌.

ವಿವರ ಅರಿತು ಸ್ಥಳಕ್ಕೆ ಆಗಮಿಸಿದ ಜಾರಪ್ಪ ನಾಯ್ಕ ಅವರ ಪುತ್ರ ರಾಜಶೇಖರ್ ಅವರು ಪೊಲೀಸರಿಗೆ ದೂರು ನೀಡಿದ‌‌ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ(ಎಟ್ರಾಸಿಟಿ) ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.

See also  ನೆರಿಯ: ಮನೆಯಿಂದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ಕಳವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು