News Kannada
Monday, October 02 2023
ಮಂಗಳೂರು

ಮಂಗಳೂರು: ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣ ದಿಂದ ಹತ್ಯೆಗಳು ನಡೆಯುತ್ತಿವೆ ಎಂದ ರಮಾನಾಥ ರೈ

Ramanath Rai visited anganwadis to take stock of the condition of anganwadis
Photo Credit : R Bhat

ಮಂಗಳೂರು: ದ್ವೇಷಕ್ಕೆ ದ್ವೇಷ ಉತ್ತರವಲ್ಲ, ದ್ವೇಷಕ್ಕೆ ಪ್ರೀತಿ,ಹಿಂಸೆಗೆ ಅಹಿಂಸೆ ಉತ್ತರ. ಜಿಲ್ಲೆಯಲ್ಲಿ ಪ್ರಚೋದನಾಕಾರಿ ಭಾಷಣ ನಿರಂತರ ಆಗುತ್ತಿದೆ ಇದರಿಂದ ಹತ್ಯೆಗಳು ನಡೆಯುತ್ತಿವೆ ಇಂತಹ ಹತ್ಯೆ ಯಲ್ಲಿ ಸಿಗುವ ಉತ್ತರ ಶವಗಳು,ಹಾಗೂ ಜೈಲಿಗೆ ಹೋಗೋದು ಎಂದು ರಮಾನಾಥ ರೈ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸತ್ತವರಲ್ಲಿ ಹಿಂದುಳಿದ ಹಿಂದೂಗಳು ಹಾಗೂ ಮುಸ್ಲಿಂ ಹುಡುಗರು,ಜೈಲಿಗೆ ಹೋದವರು ಹಿಂದುಳಿದ ಹಿಂದೂಗಳು ಹಾಗೂ ಮುಸ್ಲೀಮರು. ಆದರೆ ಪ್ರಚೋದನಾ ಭಾಷಣ ಮಾಡುವುದು ಸಮಾಜದಲ್ಲಿ ಮುಂದುವರಿದ ವರ್ಗ ಇದು ರಾಜಕೀಯದಲ್ಲಿ ಸರಕಾರದ ನಿರ್ಲಕ್ಷ ಎದ್ದು ಕಾಣ್ತದೆ. ಪೋಲಿಸ ರಿಂದ ನೈಜ ಕೊಲೆಗಾರ ಬಂಧನ ಹಾಗೂ ಶಿಕ್ಷೆ ಆಗಬೇಕು ಶಿಕ್ಷೆಗೆ ಯಾವುದೇ ಜಾತಿ ಧರ್ಮ ಬಣ್ಣ ಬಾರಬಾರದು.ಹತ್ಯೆ ಯಾರೇ ಮಾಡಿದ್ರೂ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಅವರು ಹೇಳಿದರು.

ಪ್ರವೀಣ್ ಹತ್ಯೆ ಮಾಡಿದವರನ್ನು ಶೀಘ್ರವಾಗಿ ಬಂಧಿಸಿ ಸರಿಯಾದ ಶಿಕ್ಷೆ ನೀಡಬೇಕು. ಈ ಹಿಂದಿ ಕೋಮು ಘರ್ಷಣೆ.ಈಗ ನಡೆಯುತ್ತಿರುವುದು ಟಾರ್ಗೇಟ್ ಹತ್ಯೆ. ಪ್ರಾಣ ಕಳೆದು ಕೊಳ್ಳುವವರು ದುರ್ಬಲ‌ ವರ್ಗದವರು. ನಮ್ಮ‌ ಜಿಲ್ಲೆಯಲ್ಲಿ ಇಂತಹ ಘಟನೆ ‌ಮುಕ್ತಾಯವಾಗಬೇಕು.

ಮಸೂದ್, ಪ್ರವೀಣ್ ಹತ್ಯೆಗೆ ಸಂಬಂಧಿಸಿ ಯಾವುದೇ ತಾರತಮ್ಯ ಮಾಡದೆ ಶಿವಮೊಗ್ಗದಲ್ಲಿ ಹರ್ಷ ಕುಟುಂಬಕ್ಕೆ ನೀಡಿದಂತೆ ಕನಿಷ್ಠ ಸರಕಾರ  ಶಿವಮೊಗ್ಗದಲ್ಲಿ ಕೊಟ್ಟ ಹಾಗೆ 25 ಲಕ್ಷ ಕೊಡಬೇಕು ಎಂದು ಸರಕಾರದ ಮೇಲೆ ಒತ್ತಾಯ ಮಾಡುತ್ತೇನೆ ಎಂದರು.

ಸುಳ್ಯ ದಲ್ಲಿ ನಡೆದ ಮಸೂದ್ ಮತ್ತು ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿ ರುವುದು ಕಂಡು ಬರುತ್ತದೆ. ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವಲ್ಲಿ ವಿಫಲವಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ಹತ್ಯೆಗಳು ನಡೆಯುತ್ತವೆ. ಹಣ, ಅಧಿಕಾರದ ಕಾರಣಕ್ಕಾಗಿ ಈ ರೀತಿಯ ಹತ್ಯೆ ಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈ ಗೊಂಡರೆ ಜಿಲ್ಲೆ ಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯ.

ಪ್ರಚೋದನಕಾರಿ ಭಾಷಣ ಮಾಡುವವರು ಗಲಭೆಗಳ ಹಿಂದೆ ಇರುತ್ತಾರೆ. ಆದರೆ ಇಂತಹ ಪ್ರಕರಣ ನಡೆದಾಗ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು, ಕೆಲವು ಅಮಾಯಕರು ಬಲಿಯಾಗುವುದು,ಜೈಲು ಸೇರುವುದು ನಡೆಯುತ್ತಿದೆ ಎಂದರು.

See also  ಬೆಳ್ತಂಗಡಿ: ನದಿಯಾದ ರಾಷ್ಟ್ರೀಯ ಹೆದ್ದಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು