News Kannada
Wednesday, December 06 2023
ಮಂಗಳೂರು

ಮಂಗಳೂರು: ಹತ್ಯೆಗೀಡಾದ ಯುವಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ ಯು.ಟಿ.ಖಾದರ್

UT Khadar vist
Photo Credit : News Kannada

ಮಂಗಳೂರು:  ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಹತ್ಯೆಗೀಡಾದ ಮಸೂದ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ,ಹಾಗೂ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ ನೆಟ್ಟಾರುರವರ ಪತ್ನಿ ಮತ್ತು ಹೆತ್ತವರು ವಿಶ್ರಾಂತಿಯಲ್ಲಿರುವುದರಿಂದ ದೂರವಾಣಿ ಮೂಲಕ  ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಸಾಂತ್ವನ ಹೇಳಿದರು.

ಬೆಂಗಳೂರಿನಿಂದ ಇಂದು ಮುಂಜಾನೆ ಮಂಗಳೂರು ತಲುಪಿದ ವಿಪಕ್ಷ ಉಪ ನಾಯಕ,ಶಾಸಕ ಯು.ಟಿ.ಖಾದರ್ ರವರು ಕಳೆದ ವಾರ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಹತ್ಯೆಯಾಗಿದ್ದ ಮಸೂದ್ ರವರ ಮನೆಗೆ ಹಾಗೂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಇನ್ನೋರ್ವ ಪ್ರವೀಣ ನೆಟ್ಟಾರುರವರ ಮನೆಗೂ ಕೂಡಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಭೇಟಿ ನೀಡಬೇಕಿತ್ತಾದರೂ ಅವರ ಪತ್ನಿ ಮತ್ತು ಹೆತ್ತವರು ವಿಶ್ರಾಂತಿಯಲ್ಲಿರುವುದರಿಂದ ನೆಟ್ಟಾರುರವರ ಚಿಕ್ಕಪ್ಪ ವಿಶ್ವನಾಥ ಅವರಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ತಿಳಿಸಿದರು.

ಕಳೆದ ಎರಡು ದಿನಗಳಿಂದ ಸತತ ನಾಯಕರು ಇತರರ ಭೇಟಿಯಿಂದಾಗಿ ಪ್ರವೀಣ ನೆಟ್ಟಾರುರವರ ಪತ್ನಿ ಹಾಗೂ ಹೆತ್ತವರು ವಿಶ್ರಾಂತಿಯಲ್ಲಿದ್ದು ತಾವು ಕರೆ ಮಾಡಿ ಸಾಂತ್ವನ ತಿಳಿಸಿದ್ದು ಮನೆಗೆ ಭೇಟಿ ನೀಡಿದ್ದಷ್ಟೆ ತೃಪ್ತಿಯಾಯಿತೆಂದು ಈ ಸಂದರ್ಭದಲ್ಲಿ ಪ್ರವೀಣ್ ರವರ ಚಿಕ್ಕಪ್ಪ ವಿಶ್ವನಾಥ ರವರು ಯು.ಟಿ.ಖಾದರ್ ರವರಿಗೆ ತಿಳಿಸಿದರು.

See also  ಬೆಂಗಳೂರು:‌ ಮಾಜಿ ಸಂಸದರ ಪುತ್ರನ ಮೇಲೆ ಹಲ್ಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು