News Kannada
Saturday, September 23 2023
ಮಂಗಳೂರು

ಬೆಳ್ತಂಗಡಿ: ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಇಂದಿನ ಕಾಲಮಾನದಲ್ಲೂ ಪ್ರಸ್ತುತ- ಹರೀಶ ಪೂಂಜ

Belthangady: Bhagavad Gita preached by Lord Krishna is relevant even in today's times: Harish Poonja
Photo Credit :

ಬೆಳ್ತಂಗಡಿ: ಸುಮಾರು ಐದು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಇಂದಿನ ಕಾಲಮಾನದಲ್ಲೂ ಪ್ರಸ್ತುತವಾಗಿದೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.

ಅವರು, ಶುಕ್ರವಾರ ಇಲ್ಲಿನ ತಾ.ಪಂ.ಸಭಾಂಗಣದಲ್ಲಿ ಆಚರಿಸಲಾದ ಶ್ರೀಕೃಷ್ಣ ಜಯಂತಿ ಸಂದರ್ಭ ಅವರು ಮಾತನಾಡಿದರು.
ನಮ್ಮ ಜೀವನ ಹೇಗಿರಬೇಕು, ಹೇಗಿರಬಾರದು ಎಂಬುದನ್ನು ಗೀತೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಮಾಜದ ಪರವಾಗಿ ನಿಲ್ಲಬೇಕೇ ಹೊರತು ಸ್ವಾರ್ಥ ಜೀವನ ಸಲ್ಲ. ವಸುಧೈವ ಕುಟುಂಬಕಂ ಎಂಬುದು ನಮ್ಮ ಪದ್ಧತಿಯಾಗಬೇಕು ಎಂಬ ಸಂದೇಶವನ್ನು ಕೃಷ್ಣ ಸಾರಿದ್ದಾನೆ ಎಂದರು.

ತಹಸೀಲ್ದಾರ್ ಪೃಥ್ವಿ‌ ಸಾನಿಕಂ ಅವರು ಶ್ರದ್ಧೆ, ಏಕಾಗ್ರತೆ ನಮ್ಮ ಎಲ್ಲಾ ಕಾರ್ಯಗಳ ಯಶಸ್ಸಿಗೆ ಪೂರಕ. ಇದನ್ನು ಶ್ರೀಕೃಷ್ಣನ ಜೀವನದಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.

ಕಂದಾಯ ನಿರೀಕ್ಷಕ ಪಾವಡಪ್ಪ ಕೃಷ್ಣನ ಜೀವನಾದರ್ಶಗಳ‌ ಬಗ್ಗೆ ಮಾತನಾಡಿದರು. ಭೂ ದಾಖಲೆಗಳ ಸಹಾಯಕ ನಿರ್ದೇಶಕ ರೇಣುಕಾ ನಾಯಕ್ ಪಟ್ಟಣ ಪಂ. ಮುಖ್ಯಾಧಿಕಾರಿ ರಾಜೇಶ್, ಕಂದಾಯ, ಸರ್ವೇ ಮತ್ತಿತರ ಇಲಾಖಾ ಸಿಬ್ಬಂದಿಗಳು ಇದ್ದರು.
ಪ್ರಥಮ ದರ್ಜೆ ಸಹಾಯಕ ಶಂಕರ ಸ್ವಾಗತಿಸಿದರು. ಹೇಮಾ ವಂದಿಸಿದರು.

See also  ಬೆಂಗಳೂರು- ಮಂಗಳೂರು ಟೋಲ್‌ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು