News Kannada
Tuesday, March 28 2023

ಮಂಗಳೂರು

ಮಂಗಳೂರು: ಮುರುಗ ಶರಣರು ಧರ್ಮ ದ್ರೋಹವೆಸಿಗಿದ್ದಾರೆ- ರಾಜೇಶ್ ಪವಿತ್ರನ್

Anger over state government's move to suppress protest against illegal toll gate in Surathkal
Photo Credit : News Kannada

ಮಂಗಳೂರು: ಚಿತ್ರದುರ್ಗ ಮುರುಗ ಮಠದ ಡಾ. ಶಿವಮೂರ್ತಿ ಮುರುಗ ಶರಣರ ಮೃಗೀಯ ಕೃತ್ಯವನ್ನು ಹಿಂದೂ ಮಹಾಸಭಾ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ.

ಇದು ಹಿಂದೂ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಗುರು ಪರಂಪರೆಗೆ ಗೌರವವನ್ನು ಕೊಟ್ಟು, ಬೆಳೆಸುವಂತಹ ಹಿಂದೂ ಸಮಾಜದ ಬೆನ್ನಿಗೆ ಚೂರಿ ಹಾಕಿ, ಮುರುಗ ಶರಣರು ಧರ್ಮ ದ್ರೋಹ ವೆಸಿಗಿದ್ದಾರೆ. ಕೃತ್ಯ ವೆಸಗಿದ ಶ್ರೀಗಳ ಬಂಧನಕ್ಕೆ ವಿಳಂಬ ನೀತಿಯನ್ನು ಅನುಸರಿಸಿದ ಪೊಲೀಸರ ಕ್ರಮವನ್ನು ಖಂಡಿಸಿ, ರಾಜ್ಯ ಬಿಜೆಪಿ ಸರಕಾರದ ಹಸ್ತಕ್ಷೇಪದಿಂದ ಶ್ರೀಗಳ ಬಂಧನ ವಿಳಂಬವಾಗಿದೆ ಎಂದು ಹಿಂದೂ ಮಹಾಸಭಾ ಅನುಮಾನ ವ್ಯಕ್ತಪಡಿಸುತ್ತದೆ.

ಜನಸಾಮಾನ್ಯರಿಗೊಂದು ನ್ಯಾಯ, ಉಳ್ಳವರಿಗೊಂದು ನ್ಯಾಯ, ಇದೆಂಥ ಕಾನೂನು ಎಂದು ಜನರು ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಶ್ರೀಗಳ ಕೃತ್ಯವನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಇನ್ನು ಮುಂದೆ ಕೇಸರಿ ಬಟ್ಟೆ ಧರಿಸಿ ಇಂತಹ ದುಷ್ಕೃತ್ಯ ವ್ಯಸಗುವ ಯಾವುದೇ ಮಠಾಧಿಪತಿಗಳಿರಲಿ, ಅವರನ್ನು ಸಾರ್ವಜನಿಕವಾಗಿ ವಿವಸ್ತ್ರ ವನ್ನಾಗಿಸಿ, ಮಸಿ ಬಳಿದು, ಮೆರವಣಿಗೆ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷರಾದ ರಾಜೇಶ್ ಪವಿತ್ರನ್ ಎಚ್ಚರಿಸಿದರು.

See also  ಭೂಗತ ಮಾರ್ಗ ಬಹುತೇಕ ಪೂರ್ಣ: ಮಂಗಳೂರು ತಾಲ್ಲೂಕು ಕಚೇರಿ ಮುಂಭಾಗ 7ಕೋಟಿ ವೆಚ್ಚದ ಕಾಮಗಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು