News Kannada
Saturday, September 23 2023
ಮಂಗಳೂರು

ಮಂಗಳೂರು: ಗೌರಿ ಲಂಕೇಶ್ ಹತ್ಯೆ ದಿನ ನೆನಪಿಸಿ ಕ್ಯಾಂಪಸ್ ಫ್ರಂಟ್ ಮಂಗಳೂರು ವಿವಿಯಲ್ಲಿ ಪ್ರತಿಭಟನೆ

Campus front protests at Mangalore University to commemorate gauri lankesh's murder
Photo Credit : News Kannada

ಮಂಗಳೂರು: ಪ್ರಗತಿಪರ ಚಿಂತಕಿಯೂ, ಪತ್ರಕರ್ತೆಯೂ ಹಾಗೂ ಹೋರಾಟಗಾರ್ತಿಯಾದಂತಹಾ ಗೌರಿ ಲಂಕೇಶರನ್ನು ಸಂಘಪರಿವಾರದ ಕಿರಾತಕರು ಗುಂಡಿಕ್ಕಿ ಹತ್ಯೆಗೈದ ದಿನವಾದ ಸೆಪ್ಟೆಂಬರ್ 5 ನ್ನು ನೆನಪಿಸುತ್ತಾ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಘಟಕದ ವತಿಯಿಂದ ವಿವಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯು ಜರುಗಿತು.

ದೇಶದಲ್ಲಿ ಪ್ರಭುತ್ವದ ವಿರುದ್ಧ, ಮನುವಾದಿ ಸಿದ್ಧಾಂತದ ವಿರುದ್ಧ ಧ್ವನಿಯೆತ್ತುವವರನ್ನು ಗುರಿಯಾಗಿಸಿಕೊಂಡು ಜೈಲಿಗಟ್ಟುವ ಮುಖಾಂತರ, ಹತ್ಯೆಗೈಯುವ ಮುಖಾಂತರ ಆರ್‌ಎಸ್‌ಎಸ್ ಭಯೋತ್ಪಾದನೆಯನ್ನು ತೋರ್ಪಡಿಸುತ್ತಿದೆ.

ಇವರ ಭಯೋತ್ಪಾದನೆಗೆ ದಾಬೋಲ್ಕಾರ್, ಪನ್ಸಾರೆ, ಕಲಬುರುಗಿ ಹಾಗೂ ಗೌರಿ ಲಂಕೇಶ್ ರಂತಹಾ ಹೋರಾಟಗಾರರು, ಚಿಂತಕರು ಹತ್ಯೆಗೀಡಾಗಿದ್ದು, ಆದರೆ ಅವರ ಜೀವ ಮಾತ್ರ ಕಣ್ಮರೆ ಯಾಗಿದೆಯೇ ಹೊರತು ಅವರು ಸಿದ್ದಾಂತಗಳು ಇಂದೂ ಅಚ್ಚಳಿಯದೇ ನಮ್ಮಲ್ಲಿ‌ ಉಳಿದಿದೆ. ಹತ್ಯೆ, ಜೈಲುಗಳನ್ನು ತೋರಿಸಿ ಈ ಫ್ಯಾಶಿಷ್ಟ್ ವಿರೋಧಿ ಹೋರಾಟವನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ ಎಂದು‌ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ರವರು ಹೇಳಿದರು.

ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ಮುಖಂಡರಾದ ರಿಯಾಝ್, ಮಂಗಳೂರು ವಿವಿ ಮುಖಂಡರಾದ ಮುಖ್ತಾರ್, ಮುನೀರ್, ಆಶಿಕ್ ಉಪಸ್ಥಿತರಿದ್ದರು.

See also  ಶತಮಾನದ ಸಂಭ್ರಮದಲ್ಲಿ ಬಿಜೈ ಕಾಪಿಕಾಡ್ ಸರ್ಕಾರಿ ಶಾಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು