News Kannada
Saturday, April 01 2023

ಮಂಗಳೂರು

ಬಂಟ್ವಾಳ: ಮಕ್ಕಳಿಗೆ ಕಷ್ಟಗಳನ್ನು ಎದುರಿಸುವ ಜೀವನಪಾಠವೂ ಅತೀ ಅಗತ್ಯ- ಶಾಸಕ ರಾಜೇಶ್ ನಾಯ್ಕ್

Bantwal: Life lessons are also essential for children to face difficulties, says MLA Rajesh Naik
Photo Credit : By Author

ಬಂಟ್ವಾಳ: ಮಕ್ಕಳನ್ನು ಕಷ್ಟಗಳ ಅರಿವು ಇಲ್ಲದಂತೆ ಬೆಳೆಸುವುದು ಇಂದಿನ ಅಗತ್ಯವಾಗಿದ್ದರೂ, ಕಷ್ಟಗಳನ್ನು ಎದುರಿಸುವ ಜೀವನಪಾಠವೂ ಅತೀ ಅಗತ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಬಂಟ್ವಾಳ ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ ಇವರ ಆಶ್ರಯದಲ್ಲಿ ಮೊಡಂಕಾಪು ಇನ್ಫೆಂಟ್ ಜೇಸಸ್ ಚರ್ಚ್ ನ ಅನುಗ್ರಹ ಸಭಾಂಗಣದಲ್ಲಿ ನಡೆದ ಶಿಕ್ಷಣ ತಜ್ಞ ಭಾರತದ ಮಾಜಿ ರಾಷ್ಟ್ರಪತಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನೋತ್ಸವ ನೆನಪಿನ ಶಿಕ್ಷಕರ ದಿನಾಚರಣೆ 2022 ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳನ್ನು ಒಳ್ಳೆಯ ದಾರಿಗೆ ತರುವಲ್ಲಿ ಶಿಕ್ಷಕರು ಶಿಲ್ಪಿಯ ಪಾತ್ರ ನಿರ್ವಹಿಸುತ್ತಾರೆ ಎಂದ‌ ಅವರು, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಕಾರ್ಯ ಮನೆಮನೆಯಲ್ಲೂ ಆಗಬೇಕಿದೆ ಎಂದರು.

ಮಂಗಳೂರು ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿಯವರು ಉಪನ್ಯಾಸ ನೀಡಿದರು. ಇದೇ ಸಂದರ್ಭ ಬಂಟ್ವಾಳ‌ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಕೆ.ಪಿ. ಯವರ ಜೀವನ ಸಂಭ್ರಮ ಚೊಚ್ಚಲ ಕೃತಿ ಬಿಡುಗಡೆಗೊಳಿಸಲಾಯಿತು. ಮಕ್ಕಳ ಜಗಲಿ ಯ ತಾರಾನಾಥ ಕೈರಂಗಳ ಕೃತಿ ಪರಿಚಯಿಸಿದರು.

ವಿಧಾನಪರಿಷತ್ ಸದಸ್ಯ ಭೋಜೇಗೌಡ, ಇನ್ಫೆಂಟ್ ಜೇಸಸ್ ಚರ್ಚ್ ಧರ್ಮಗುರು ವಲೇರಿಯನ್‌ ಡಿಸೋಜ, ಬಂಟ್ವಾಳ ಪುರಸಭಾ ಆಧ್ಯಕ್ಷ ಮಹಮ್ಮದ್ ಶರೀಫ್, ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಬರ್ನಾಡ್ ಸಲ್ದಾನ , ಶಿಕ್ಷಣ ಸಂಯೋಜಕರಾದ ಸುಜಾತ ಕುಮಾರಿ, ಸುಧಾ, ಬಿಆರ್ ಪಿ ವಿದ್ಯಾ, ರವೀಂದ್ರ, ಚೆನ್ನಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ನಾಯಕ್, ಶಿಕ್ಷಕ ಸಂಘಟನೆಗಳ ಪ್ರಮುಖರಾದ ನಾರಾಯಣ ಪೂಜಾರಿ, ಜತ್ತಪ್ಪ ಗೌಡ, ಮುರಳಿಕೃಷ್ಣ, ಬಿ.ಕೆ.ಭಂಡಾರಿ, ಜಯರಾಮ್ ಬಿ, ಸಂತೋಷ್ ಕುಮಾರ್, ವಂದನೀಯ ಮೆಲ್ವಿನ್, ನೋಣಯ್ಯ, ನಾಯ್ಕ್ ,ವಿಷ್ಣು ಹೆಬ್ಬಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕರು ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಕೆ.ಪಿ. ಸ್ವಾಗತಿಸಿದರು. ರಾಮಚಂದ್ರರಾವ್ ಕಾರ್ಯಕ್ರಮ‌ ನಿರ್ವಹಿಸಿದರು. ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ ವಂದಿಸಿದರು. ಸಭಾಕಾರ್ಯಕ್ರಮಕ್ಕೆ ಮುನ್ನ ಸಿಆರ್ ಪಿ ಪ್ರದೀಪ್ ಪೂಪಾಡಿಕಟ್ಟೆ ಮಾರ್ಗದರ್ಶನದಲ್ಲಿ ಶಿಕ್ಷಕರು ಜಾನಪದ ವೈಭವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಟ್ಟರು.

See also  ತುಳುನಾಡಿನ ಜನತೆಗೆ ಬಿಸುಹಬ್ಬದ ಸಂಭ್ರಮ: ತುಳುವಿನಲ್ಲಿ ಶುಭಕೋರಿದ ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು