News Kannada
Friday, March 24 2023

ಮಂಗಳೂರು

ಬಂಟ್ವಾಳ: ಅ.2ರಂದು 21ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ

Bantwal: The 21st annual Sarvajanik Sri Sharada Pooja Mahotsava will be held on October 2.
Photo Credit : News Kannada

ಬಂಟ್ವಾಳ: ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್(ರಿ), ಕಳ್ಳಿಗೆ ಇದರ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ರಜಾಂಗಣದಲ್ಲಿ ಅ.2ರ ಆದಿತ್ಯವಾರದಂದು ವಿಜೃಂಭಣೆಯಿಂದ ನೆರವೇರಲಿದೆ.

ಈ ಕಾರ್ಯಕ್ರಮದ ಅಂಗವಾಗಿ ಅ.1ರ ಶನಿವಾರದಂದು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿರತಣೆ ನಡೆಯಲಿದೆ.

ಅ.2ರ ಆದಿತ್ಯವಾರದಂದು, ಬೆಳಿಗ್ಗೆ 6ಕ್ಕೆ ಪುಣ್ಯಾಹ ವಾಚನ, ಸ್ಥಳಶುದ್ಧಿ, ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, 6.20ಕ್ಕೆ ಶ್ರೀ ಶಾರದಾ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, 7.30ಕ್ಕೆ ಗಣಪತಿ ಹೋಮ, 8ಕ್ಕೆ ಪದ್ಮನಾಭ ರಾವ್ ಕನಪಾಡಿ ಇವರಿಂದ ಮಹೋತ್ಸವ ಉದ್ಘಾಟನೆ, ಧ್ವಜಾರೋಹಣ, ದೀಪ ಪ್ರಜ್ವಲನೆ, 8.30ಕ್ಕೆ ಶ್ರೀ ಮಹಾವಿಷ್ಣು ಭಜನಾ ಮಂಡಳಿ(ರಿ) ದೇವಂದಬೆಟ್ಟು, ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂಡಳಿ, ಬ್ರಹ್ಮರಕುಟ್ಲು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಜ್ಯೋತಿಗುಡ್ಡೆ, ಶ್ರೀ ದುರ್ಗಾ ಭಜನಾ ಮಂಡಳಿ, ಬೆಂಜನ ಪದವು, ಹಾಗೂ ಶ್ರೀ ಮಹಾಮ್ಮಾಯಿ ಸೇವಾ ಸಮಿತಿ, ಕಳ್ಳಿಗೆ ಪಚ್ಚಿನಡ್ಕ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. 9ಘಂಟೆಗೆ ಶ್ರೀ ಸರಸ್ವತಿ ಸಹಸ್ರನಾಮಾರ್ಚನೆ ಸೇವೆ, 9.30ಕ್ಕೆ ಶ್ರೀ ದುರ್ಗಾ ಹೋಮ. 10ಕ್ಕೆ ಶ್ರೀ ಶಾರದಾ ಮಾತೆ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ, ವಿದ್ಯಾರಂಭ, 11ಕ್ಕೆ ಕ್ಷೇತ್ರದ ದೇವರಿಗೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಹಾಲು ಪಾಯಸ ಸೇವೆ, ರುದ್ರಾಭಿಷೇಕ, ಪಂಚಕಜ್ಜಾಯ ಸೇವೆ ಶ್ರೀ ನಾಗದೇವರಿಗೆ ತಂಬಿಲ ಸೇವೆ ನಡೆಯುತ್ತದೆ.

ಮಧ್ಯಾಹ್ನ 12ಕ್ಕೆ ಶ್ರೀ ಶಾರದಾ ಮಾತೆಗೆ ಹೂವಿನ ಪೂಜೆ, 12.30ಕ್ಕೆ ದುರ್ಗಾ ಹೋಮದ ಪೂರ್ಣಹುತಿ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ. 1ಕ್ಕೆ ಅನ್ನಸಂತರ್ಪಣೆ, 2ಕ್ಕೆ ಗಾನಭೂಷಣ ಶ್ರೀ ಕೆ. ವೆಂಕಟಕೃಷ್ಣ ಭಟ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸಂಜೆ ವಿಸರ್ಜನಾ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ವಿಸರ್ಜನೋತ್ಸವ. 6ಕ್ಕೆ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ.

See also  ಸಾಂಕ್ರಾಮಿಕ ರೋಗ ತಡೆಗೆ ಕರಿಕೆಯಲ್ಲಿ ಸ್ವಚ್ಛತಾ ಕಾರ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು