News Kannada
Friday, March 24 2023

ಮಂಗಳೂರು

ಬೆಳ್ತಂಗಡಿ: “ಚದುರಂಗ” ಕವನ ಸಂಕಲನ ಬಿಡುಗಡೆ

Belthangady: Permukha Subramanya Bhat's collection of poems "Chaturanga" released
Photo Credit : By Author

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಸೆ.17 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ಪೆರ್ಮುಖ ಸುಬ್ರಹ್ಮಣ್ಯ ಭಟ್ ಅವರ ಕವನ ಸಂಕಲನ “ಚದುರಂಗ” ಬಿಡುಗಡೆ ಕಾರ್ಯಕ್ರಮ ನಡೆಯಿತು.

ಹಿರಿಯ ಸಾಹಿತಿಗಳಾದ ಪ.ರಾಮಕೃಷ್ಣ ಶಾಸ್ತ್ರಿ ಅವರು ಕೃತಿ ಬಿಎಉಗಡರ ಮಾಡಿ ಮಾತನಾಡುತ್ತಾ ಕವನಗಳು ಸೇರಿದಂತೆ ಸಾಹಿತ್ಯ ಹೆಚ್ಚು ಹೆಚ್ಚಾಗಿ ಸೃಷ್ಟಿಯಾಗುತ್ತಿದೆ ಆದರೆ ಗುಣಮಟ್ಟದ ಕಡೆಗೂ ಗಮನ ಹರಿಸಬೇಕಾಗಿದೆ ಎಂದರು.

ಕೃತಿ ಪರಿಚಯ ಮಾಡಿ ಮಾತನಾಡಿದ ಕವಯತ್ರಿ ಹಾಗೂ ಕಲಾವಿದೆ ಡಾ. ವೀಣಾ ಸುಳ್ಯ ಮಾತನಾಡಿ ಕವನ ಕಟ್ಟುವಿಕೆ ಮಾತ್ರ ಸಾಲದು ಅದು ಸಹೃದಯರಿಗೆ ತಲುಪುವಂತಾಗಬೇಕು ಎಂದರು. ಅತಿಥಿಯಾಗಿದ್ದ ವಿಮರ್ಶಕ ಅರವಿಂದ ಚೊಕ್ಕಾಡಿ ಮಾತನಾಡಿ ಅಭಿಪ್ರಾಯಗಳನ್ನು ಹಂಚಿಕೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ. ಶ್ರೀನಾಥ್ ವಹಿಸಿ ಶುಭ ಹಾರೈಸಿದರು. ಕೃತಿಕಾರ ಸುಬ್ರಹ್ಮಣ್ಯ ಭಟ್ ಅವರ ಪತ್ನಿ ಶಾರದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಸಾಪ ಗೌರವ ಕಾರ್ಯದರ್ಶಿ ರಾಮಕೃಷ್ಣ ಚೊಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು. ವಕೀಲರಾದ ಬಿ.ಎಂ ಭಟ್ ಪ್ರಸ್ತಾವನೆ ಮತ್ತು ಕೃತಿಗಾರರ ಪರಿಚಯದ‌ ಮಾತುಗಳನ್ನಾಡಿದರು.

ಸುಜಾತಾ ಜಿ ಭಟ್ ಪ್ರಾರ್ಥನೆ ಹಾಡಿದರು. ಚದುರಂಗ ಹಾಡನ್ನು ಶಂಕರ, ಸುಜಾತಾ ಜಿ ಭಟ್ ಅವರು ಪ್ರಸ್ತುತಿಪಡಿಸಿದರು.
ಅಶ್ರಫ್ ಆಲಿಕುಂಞಿ ವಂದಿಸಿದರು.

See also  ಮಂಗಳೂರು: ಆ.19ರಂದು ಶ್ರೀ ಕೃಷ್ಣ ಜಯಂತಿ ಆಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು