ಮಂಗಳೂರು: ಇಲ್ಲಿನ ಠಾಣಾ ವ್ಯಾಪ್ತಿಯ ಕೆ ಸಿ ರೋಡ್ ಅಜ್ಜಿನಡ್ಕದಲ್ಲಿ ಮೀನಿನ ವ್ಯಾಪಾರಿ ರೌಡಿಶೀಟರ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ . ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು 7ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಫೈಸಲ್ ನಗರ ನಿವಾಸಿ ತಲ್ಲತ್ ಯಾನೆ ಫೈಸಲ್ ನಗರ ತಲ್ಲತ್ ಬಂಧಿತ ಈ ಹಿಂದೆ ಆಚಿ , ನೌಫಾಲ್ ,ಅಸ್ಪಾಕ್ ,ನಿಸಾರ್ ರಹೀಮ್ ನನ್ನು ಬಂಧಿಸಲಾಗಿತ್ತು.
ಕುದ್ರೋಳಿ ನಿವಾಸಿ ಪ್ರಸ್ತುತ ಕೆ ಸಿ ರೋಡ್ ಅಜ್ಜಿನಡ್ಕ ಬಳಿ ನೆಲೆಸಿದ್ದ ಆರಿಫ್ ನನ್ನು ಮಂಗಳೂರು ಮೀನಿನ ದಕ್ಕೆಗೆ ಕೆಲಸಕ್ಕೆ ತೆರಳುವ ಸಂದರ್ಭ ಆರೋಪಿ ತಲ್ಲತ್ ನೇತೃತ್ವದ 7ಮಂದಿಯ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿತ್ತು. ತಲವಾರು ದಾಳಿಗೊಳಗಾದ ಆರಿಫ್ ವಿರುದ್ಧ ಮಂಗಳೂರಿನ ಕಂಕನಾಡಿ ಬಂದರು ಪೊಲೀಸ್ ಠಾಣೆಗಳಲ್ಲಿ ಹನ್ನೊಂದು ಪ್ರಕರಣಗಳಿದ್ದು ರೌಡಿ ಶೀಟರ್ ಆಗಿದ್ದಾನೆ. ಆದರೆ ಅಂದು ನಡೆದ ದಾಳಿ ಮೀನಿನ ವ್ಯಾಪಾರ ಸಂಬಂಧಿಸಿದ ಹಣದ ವಿಚಾರಕ್ಕಾಗಿ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿತ್ತು.
ರೌಡಿ ತಲ್ಲತ್ ಫರಂಗಿಪೇಟೆ ಡಬ್ಬಲ್ ಮರ್ಡರ್ ಕೇಸಿನ ಪ್ರಮುಖ ಆರೋಪಿಯಾಗಿದ್ದು ಈತನ ಸಹಚರ ನೌಫಾಲ್ ಯಾನೆ ಟೊಪ್ಪಿ ನೌಫಲ್ ಕೂಡ ಫರಂಗಿಪೇಟೆಯ ಡಬಲ್ ಮರ್ಡರ್ ಆರೋಪಿ.
ನೌಫಾಲ್ ಚಿಕ್ಕಪ್ಪನಿಗೆ ತಲವಾರು ದಾಳಿಗೊಳಗಾದ ಆರಿಫ್ 68ಸಾವಿರ ರೂ ಮೀನಿನ ಏಲಂ ವ್ಯವಹಾರದ ಹಣ ನೀಡಬೇಕಿತ್ತು ,ಆದರೆ ದೂರವಾಣಿ ಮೂಲಕ ನೌಫಾಲ್ ಹಣ ಕೇಳಿದಾಗ ಇಬ್ಬರ ನಡುವೆ ಚರ್ಚೆ ಉಂಟಾಗಿತ್ತು ಇದೇ ವೈಷಮ್ಯಕ್ಕೆ ಸಂಬಂಧಿಸಿ ತಲ್ಲತ್ ನೌಪಾಲ ಸಹಿತ 7ಮಂದಿ ತಂಡ ಸೇರಿಕೊಂಡು ಕೊಲೆಗೆ ಯತ್ನಿಸಿದ್ದಾರೆ.
ರೌಡಿ ತಲ್ಲತ್ ವಿರುದ್ಧ ಕೊಲೆ, ಕೊಲೆಯತ್ನ ದರೋಡೆ ಸಹಿತ ಹಲವು ಪ್ರಕರಣಗಳಿವೆ ಈತ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದಾನೆ.