News Kannada
Wednesday, September 27 2023
ಮಂಗಳೂರು

ಮಂಗಳೂರು: ರೈಲು ಸೇವೆ ಕಾಯಂಗೊಳ್ಳದೆ ಟಿಕೆಟ್‌ ದುಬಾರಿ!

TRAIN 1
Photo Credit : News Kannada

ಮಂಗಳೂರು: ಕೋವಿಡ್‌ ಪೂರ್ವದಲ್ಲಿ ಬಹುನಿರೀಕ್ಷಿತ ಮಂಗಳೂರು- ವಿಜಯಪುರ ರೈಲನ್ನು ಓಡಿಸಲು ತೀರ್ಮಾನಿಸಿ ಕೆಲವು ತಿಂಗಳುಗಳ ಕಾಲ ಸಂಚಾರ ನಡೆಸಿತ್ತು.

ಆ ಬಳಿಕ ಕೋವಿಡ್‌ ಹೆಚ್ಚಿದ್ದಾಗ ರೈಲನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ರೈಲನ್ನು ಮರು ಆರಂಭಿಸಲಾಗಿತ್ತು. ಆದರೆ ಆರಂಭವಾದ ದಿನಗಳಿಂದ ಇಂದಿನವರೆಗೂ ವಿಜಯಪುರ ಮಂಗಳೂರು ರೈಲು ತತ್ಕಾಲ್‌ ನೆಲೆಯಲ್ಲೇ ಓಡಾಡುತ್ತಿದೆ.ತತ್ಕಾಲ್‌ ಕಾರಣದಿಂದ ಪ್ರಯಾಣಿಕರು ಕೂಡಾ ರೈಲು ಟಿಕೆಟ್‌ ಬುಕ್‌ ಮಾಡುವ ಸಂದರ್ಭ ತತ್ಕಾಲ್‌ ಮೂಲಕವೇ ಬುಕ್‌ ಮಾಡಿಸಬೇಕಾಗುತ್ತದೆ. ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಮಾಮೂಲಿ ಟಿಕೆಟ್‌ಗಿಂತ ದುಬಾರಿಯಾಗಿದೆ.

ಮಂಗಳೂರು- ವಿಜಯಪುರ ನಡುವೆ ಸಂಚರಿಸುವ ರೈಲು ಇನ್ನು ಕೂಡ ತತ್ಕಾಲ್‌ ನೆಲೆಯಲ್ಲೇ ಓಡಾಟ ನಡೆಸುತ್ತಿರುವ ಕಾರಣ ಪ್ರಯಾಣಿಕರಿಗೆ ಹೆಚ್ಚುವರಿ ಪ್ರಯಾಣ ದರದ ಬರೆ ಬೀಳುತ್ತಿದೆ. ಬಹುತೇಕ ಬಡ ಪ್ರಯಾಣಿಕರೇ ಈ ರೈಲನ್ನು ನೆಚ್ಚಿಕೊಂಡು ಪ್ರಯಾಣಿಸುತ್ತಿದ್ದು, ರೈಲ್ವೆ ಇಲಾಖೆಯ ಅಸಡ್ಡೆಯಿಂದ ಪ್ರಯಾಣಿಕರಿಗೆ ಅನಗತ್ಯ ಹೊರೆಯಾಗಿದೆ.

ತತ್ಕಾಲ್‌ ಕಾರಣದಿಂದ ಪ್ರಯಾಣಿಕರು ಕೂಡಾ ರೈಲು ಟಿಕೆಟ್‌ ಬುಕ್‌ ಮಾಡುವ ಸಂದರ್ಭ ತತ್ಕಾಲ್‌ ಮೂಲಕವೇ ಬುಕ್‌ ಮಾಡಿಸಬೇಕಾಗುತ್ತದೆ. ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಮಾಮೂಲಿ ಟಿಕೆಟ್‌ಗಿಂತ ದುಬಾರಿಯಾಗಿದೆ.

ಸೌತ್‌ ವೆಸ್ಟರ್ನ್‌ ರೈಲ್ವೆ ವತಿಯಿಂದ ಈ ರೈಲು ನಿರ್ವಹಣೆಗೊಳ್ಳುತ್ತಿದ್ದು, ಪ್ರತಿ ಬಾರಿ ತತ್ಕಾಲ್‌ ಅವಧಿ ಮುಗಿಯುವ ಸ್ವಲ್ಪ ದಿನ ಮುಂಚಿತವಾಗಿ ಮತ್ತೆ ಈ ರೈಲು ಸೇವೆಯನ್ನು ಕೆಲವು ತಿಂಗಳುಗಳವರೆಗೆ ಮುಂದುವರಿಸುವ ಬಗ್ಗೆ ಅಧಿಸೂಚನೆ ಹೊರಡಿಸುತ್ತದೆ. ಬಡ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಸಂಚಾರ ನಡೆಸಲು ಸಾಧ್ಯ ಎನ್ನುತ್ತಾರೆ ರೈಲ್ವೆ ಪ್ರಯಾಣಿಕ ಪುತ್ತೂರಿನ ಶ್ರೀಕರ ಬಿ.

ಶೇ.25ರಿಂದ ಶೇ.40ರಷ್ಟು ದುಬಾರಿ
ವಿಜಯಪುರ- ಮಂಗಳೂರು ರೈಲು (07377/78) ಅತ್ಯಂತ ಬೇಡಿಕೆ ಇರುವ ಮಾರ್ಗ. ವಿಜಯಪುರದಿಂದ ಬಾಗಲಕೋಟೆ- ಗದಗ- ಹಾವೇರಿ- ಬ್ಯಾಡಗಿ- ಹರಿಹರ- ದಾವಣಗೆರೆ- ಹಾಸನ- ಸಕಲೇಶಪುರ- ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ಮಂಗಳೂರನ್ನು ಈ ರೈಲು ಸಂಪರ್ಕಿಸುತ್ತಿದೆ. ಕರಾವಳಿ ಭಾಗದ ವೈದ್ಯಕೀಯ ಸೌಲಭ್ಯಕ್ಕೆ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿಸುವ ಸಲುವಾಗಿ ಪ್ರತಿದಿನ ನೂರಾರು ಮಂದಿ ಪ್ರಯಾಣಿಕರು ಈ ರೈಲನ್ನು ಬಳಸುತ್ತಿದ್ದಾರೆ. ಆದೂ ತತ್ಕಾಲ್‌ ಸೇವೆ ಆಗಿರುವ ಕರಣ ಎಲ್ಲ ಪ್ರಯಾಣಿಕರಿಗೆ ಶೇ.25ರಿಂದ 40ರಷ್ಟು ಟಿಕೆಟ್‌ ದರ ದುಬಾರಿಯಾಗುತ್ತಿದೆ.

ಸದ್ಯ ವಿಜಯಪುರ- ಮಂಗಳೂರು ನಡುವೆ ಓಡಾಟ ನಡೆಸುವ ರೈಲಿನ ಸಮಯ ಅನೇಕ ಪ್ರಯಾಣಿಕರಿಗೆ ಅನಾನುಕೂಲ. ಮಧ್ಯಾಹ್ನ 12.40ಕ್ಕೆ ಮಂಗಳೂರಿಗೆ ತಲುಪಿದರೆ ಯಾವುದೇ ಉಪಯೋಗವಾಗುವುದಿಲ್ಲ್ಲ. ಈ ರೈಲು ಬೆಳಗ್ಗೆ 9.30ಕ್ಕೆ ಮಂಗಳೂರು ತಲುಪಿದರೆ ಹೆಚ್ಚು ಅನುಕೂಲ ಎಂಬುದು ರೈಲ್ವೆ ಪ್ರಯಾಣಿಕರ ಅಭಿಪ್ರಾಯ. ಈ ಬಗ್ಗೆ ಮನವಿ ಕೂಡಾ ಸಲ್ಲಿಸಲಾಗಿದೆ.

ವಿಜಯಪುರ- ಮಂಗಳೂರು ರೈಲು ಸಂಚಾರದಲ್ಲಿ ಬದಲಾವಣೆ ಮಾಡಬೇಕು ಮತ್ತು ಈ ರೈಲನ್ನು ಕಾಯಂಗೊಳಿಸಬೇಕು ಎಂದು ಸಂಸದರು ಸೌತ್‌ ವೆಸ್ಟರ್ನ್‌ ರೈಲ್ವೆಗೆ ಪತ್ರ ಬರೆದಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಸ್ಪಂದನೆ ನೀಡಿಲ್ಲ. ಇದರಿಂದಾಗಿ ಪ್ರಯಾಣ ದರ ದುಬಾರಿಯಾಗಿದ್ದು, ಬಡ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.

See also  ಬೆಳ್ತಂಗಡಿ: ಎಲ್ಲಾ ಆವೃತ್ತಿಗಳಿಗಾಗಿ ಗ್ರಾಮಾಭಿವೃದ್ಧಿ ಯೋಜನೆಗೆ ಜಿಎಸ್‍ಟಿ ಮಾನ್ಯತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು