News Kannada
Sunday, October 01 2023
ಮಂಗಳೂರು

ಮಂಗಳೂರು: ವಿದ್ಯುತ್ ಗುತ್ತಿಗೆದಾರರ ಹಾಗೂ ಗ್ರಾಹಕರ ಸಮಸ್ಯೆಗೆ ಸ್ಪಂದಿಸಲು ಮನವಿ

Mangaluru: Appeal to respond to the grievances of electricity contractors and consumers
Photo Credit : By Author

ಮಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಬೆಂಗಳೂರು ಇದರ ದ.ಕ ಜಿಲ್ಲಾ ಸಮಿತಿ ಮಂಗಳೂರು ಇದರ ನೂತನ ಪದಾಧಿಕಾರಿಗಳು ಒಳಗೊಂಡ ನಿಯೋಗವು ಇಂಧನ ಸಚಿವರಾದ ಗೌರವಾನ್ವಿತ ವಿ. ಸುನಿಲ್ ಕುಮಾರನ್ನು ಭೇಟಿ ಮಾಡಿ ವಿದ್ಯುತ್ ಗುತ್ತಿಗೆದಾರರ ಹಾಗೂ ಗ್ರಾಹಕರ ಸಮಸ್ಯೆಗಳ ಬಗ್ಗೆ ಮನವಿಯನ್ನು ನೀಡಲಾಯಿತು.

ಮುಖ್ಯವಾಗಿ ಕಳೆದ ಒಂದು ವರ್ಷಗಳಿಂದ ವಿದ್ಯುತ್ ಮೀಟರ್‌ಗಳ ಕೊರತೆಯಿಂದ ಹೊಸ ವಿದ್ಯುತ್ ಜೋಡನೆಗಳಿಗೆ ವಿಳಂಬ, ಮೆಸ್ಕಾಂ ಜಿಲ್ಲಾ ವ್ಯಾಪ್ತಿಯಲ್ಲಿ ಉಪವಿಭಾಗ, ಸೆಕ್ಷನ್ ವಿಭಾಗದಲ್ಲಿ ಖಾಲಿಯಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಸುವುದು. ಪಿಡಬ್ಲೂಡಿ ಜಿಲ್ಲಾ ಪಂಚಾಯತ್ ಹಾಗೂ ಇನ್ನಿತರ ಇಲಾಖಾ ಕಾಮಗಾರಿಗಳನ್ನು ಟೆಂಡರ್ ಹಾಗೂ ಇನ್ನಿತರ ರೂಪದಲ್ಲಿ ನೀಡುವಾಗ ವಿದ್ಯುತ್ ಕಾಮಗಾರಿಯನ್ನು ಪ್ರತ್ಯೇಕವಾಗಿಟ್ಟು ಸಿವಿಲ್ ಕಾಮಗಾರಿಯನ್ನು ಮಾತ್ರ ಸಿವಿಲ್ ಗುತ್ತಿಗೆದಾರರಿಗೆ ನೀಡಿ, ಇದರಲ್ಲಿ ಬರುವ ವಿದ್ಯುತ್ ಕಾಮಗಾರಿಯನ್ನು ವಿದ್ಯುತ್ ಗುತ್ತಿಗೆದಾರರಿಗೆ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು.

ಇದೀಗ ನೂತನವಾಗಿ ಜಾರಿ ಬಂದಿರುವ ಸರ್ವರ್ ಎನರ್ಜಿ ಸಿಂಕ್ ಸಮಸ್ಯೆಯಿಂದ ಹೊಸ ಅರ್ಜಿಗಳು ಹಾಗೂ ಎಲ್ಲಾ ಕಛೇರಿ ಕೆಲಸಕ್ಕೆ ಗ್ರಾಹಕರು, ಗುತ್ತಿಗೆದಾರರು ಅಲೆದಾಡುವ ಪರಿಸ್ಥಿತಿ. ಬಡ ವಿದ್ಯುತ್ ಗುತ್ತಿಗೆದಾರರ ಅಭಿವೃದ್ಧಿ ನಿಗಮ ಸ್ಥಾಪನೆ, ಮೆಸ್ಕಾಂ ವ್ಯಾಪ್ತಿಯಲ್ಲಿ 1 ರಿಂದ 5 ಲಕ್ಷದವರೆಗೆ ಲೈನ್ ಕಾಮಗಾರಿಯನ್ನು ಟೆಂಡರ್ ಇಲ್ಲದೆ ಸಾಮಾನ್ಯ ಗುತ್ತಿಗೆದಾರರಿಗೆ ಕೆಲಸ ದೊರಕಿಸಿ ಕೊಡುವುದು. ಗುತ್ತಿಗೆದಾರರು ವಿದ್ಯುತ್ ಲೈನ್ ಕಾಮಗಾರಿ ಅಪಘಾತ ನಡೆದಲ್ಲಿ ಗುತ್ತಿಗೆದಾರರಿಗೆ ಹೊಣೆ ಮಾಡದೆ ಇಲಾಖೆಯಿಂದ ಪರಿಹಾರ ಮೊತ್ತ ನೀಡುವಂತೆ ಕ್ರಮ ಕೈಗೊಳ್ಳುವುದು ಹಾಗೂ ಶತಮಾನದ ಆಚರಣಾ ವರ್ಷದಲ್ಲಿರುವ 2022 ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘಕ್ಕೆ ಜಿಲ್ಲೆಯಲ್ಲಿ ಸಂಘಕ್ಕೆ ನಿವೇಶನ ಒದಗಿಸುವಂತೆ ಮನವಿಯನ್ನು ಜಿಲ್ಲಾಧ್ಯಕ್ಷರಾದ ಕುಶಲ್ ಪೂಜಾರಿ, ಮೆಸ್ಕಾಂ ಪ್ರತಿನಿಧಿ ಬಾಲಕೃಷ್ಣ ಸೆರ್ಕಳ, ಪ್ರಧಾನ ಕಾರ್ಯದರ್ಶಿ ಸುಶಿಲ್ ನೊರೊನ್ಹಾ, ಉಪಾಧ್ಯಕ್ಷರಾದ ರವಿ ಪ್ರಸಾದ್ ಕೆ.ಶೆಟ್ಟಿ ಮನವಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಖಜಾಂಜಿ ಪ್ರವೀಣ್ ಸುವರ್ಣ ಎಸ್., ಸಂಘಟನಾ ಕಾರ್ಯದರ್ಶಿ ಯೂಸುಫ್ ಎನ್. ಎ, ಮಾಜಿ ಉಪಾಧ್ಯಕ್ಷರಾದ ರವಿ ಸುವರ್ಣ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಚರಣ್ ಸನಿಲ್, ಮಂಗಳೂರು ಉಪಸಮಿತಿಯ ಅಧ್ಯಕ್ಷರಾದ ವಿವೇಕಾನಂದ, ಸದಸ್ಯರಾದ ಪದ್ಮನಾಭ ಮತ್ತು ನವೀನ್ ಕುಮಾರ್ ಉಪಸ್ಥಿತರಿದ್ದರು.

See also  ಮಂಗಳೂರು: ಬಟ್ಟಂಪಾಡಿಯಲ್ಲಿ ಕಡಲ್ಕೊರೆತ, ಅಪಾಯದಂಚಿನಲ್ಲಿ 13ಕ್ಕೂ ಹೆಚ್ಚು ಮನೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

186

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು