News Kannada
Sunday, December 10 2023
ಮಂಗಳೂರು

ಉಜಿರೆ: ಅ.23 ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ ಉದ್ಘಾಟನೆ

BLT 3
Photo Credit : By Author

ಬೆಳ್ತಂಗಡಿ: ಉಜಿರೆ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಅ.23 ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘವನ್ನು ಹಿರಿಯ ಪುರೋಹಿತ, ವೇದಮೂರ್ತಿ ಪದ್ಮನಾಭ ಜೋಶಿ ಉದ್ಘಾಟಿಸಲಿದ್ದಾರೆ.

ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿಜಯ ರಾಘವ ಪಡುವೆಟ್ನಾಯ, ಸಾಹಿತಿ, ಸಂಘಟಕಿ ವಿಜಯಾ ವಿಷ್ಣು ಡೋಂಗ್ರೆ, ಶಿವಮೊಗ್ಗ ಜಿಲ್ಲೆಯ ಸಹಕಾರಿ ಸಂಘಗಳ ಜಂಟಿ ನಿಬಂಧಕ ನಾಗೇಶ್ ಎಸ್.ಡೋಂಗ್ರೆ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ನಿಯೋಜಿತ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಚಿತ್ಪಾವನ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜ ಅವರನ್ನು ಗೌರವಿಸಿ, ಸಂಘಟನೆಯ ಬಗ್ಗೆ ಮಾಹಿತಿ ನೀಡಿ ಸಮಾರಂಭಕ್ಕೆ ಆಹ್ವಾನಿಸಲಾಯಿತು.

ಈ ಸಂದರ್ಭ ಸಂಘದ ನಿಯೋಜಿತ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ನಿಯೋಜಿತ ಕಾರ್ಯದರ್ಶಿ ನಾರಾಯಣ ಫಡ್ಕೆ ಪದಾಧಿಕಾರಿಗಳಾದ ಯೋಗೀಶ್ ಭಿಡೆ, ಗಿರೀಶ ಡೊಂಗ್ರೆ, ಉಮಾ ಮೆಹೆಂದಳೆ, ಅಶ್ವಿನಿ ಎ. ಹೆಬ್ಬಾರ್, ಡಾ. ಶಶಿಧರ ಡೋಂಗ್ರೆ, ಕೇಶವ ಫಡ್ಕೆ, ಮೃತ್ಯುಂಜಯ ಫಡ್ಕೆ, ಪ್ರಹ್ಲಾದ ಫಡ್ಕೆ ಇದ್ದರು.

See also  ಮಡಿಕೇರಿ: ಮಹಾತ್ಮ ಗಾಂಧಿಗೆ ಅಗೌರವ, ಕೊಡಗು ಸರ್ವೋದಯ ಸಮಿತಿ ಅಸಮಾಧಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು