News Kannada
Sunday, December 10 2023
ಮಂಗಳೂರು

ಬಂಟ್ವಾಳ: “ಅಗಮ ಪ್ರವೀಣ” ಬಿರುದು ಪ್ರಧಾನ ಕಾರ್ಯಕ್ರಮ

"Agama Praveena" title main programme
Photo Credit : By Author

ಬಂಟ್ವಾಳ: ಇಲ್ಲಿನ ಅದಿಶಕ್ತಿ, ಭದ್ರಕಾಳಿ ಸೇವಾ ಸಮಿತಿಯ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸರ್ವೈಶ್ಚರ್ಯ ಪೂಜೆ, ಗುರುವಂದನೆ ಹಾಗೂ “ಅಗಮ ಪ್ರವೀಣ” ಬಿರುದು ಪ್ರಧಾನ ಕಾರ್ಯಕ್ರಮ ಪಣೆಕಲ ಶ್ರೀ ದುರ್ಗಾಂಭ ಮಹಮ್ಮಾಯಿ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.

ಬ್ರಹ್ಮ ಶ್ರೀ ಕುಂಟಾರು ರವೀಶ್ ತಂತ್ರಿಯವರು ಇದಕ್ಕು ಮೊದಲು ಪಣೆಕಲ ವಸಂತ ಭಟ್ ಅವರಿಗೆ ದೇವಸ್ಥಾನದಲ್ಲಿ ತಂತ್ರಿ ದೀಕ್ಷೆಯನ್ನಿತ್ತರು‌. ಬಳಿಕ ಧಾರ್ಮಿಕಸಭೆಯಲ್ಲಿ ಅವರಿಗೆ “ಆಗಮ ಪ್ರವೀಣ” ಬಿರುದನ್ನು ಪ್ರಧಾನಗೈದರು.ನಂತರ ಧಾರ್ಮಿಕ ಉಪನ್ಯಾಸಗೈದ ಕುಂಟಾರು ರವೀಶ್ ತಂತ್ರಿಯವರು ಭಾರತ ದೇಶ ವಿಶ್ವಗುರುವಾಗಲು ಆಧ್ಯಾತ್ಮಿಕವು ಒಂದು ಕಾರಣವಾಗಿದೆ.ಜಾತಿ ಮಯಿಲೆಗೆ ಎನ್ನುವುದು ಅಜ್ಞಾನವಾಗಿದ್ದು,ಯಜ್ಞವೇ ಸುಜ್ಞಾನವಾಗಿದೆ ಎಂದರು.

ಇದೇ ವೇಳೆ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯವರು ಪಣೆಕಲ ಶ್ರೀದುರ್ಗಾಂಭ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅದರ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವಚನಗೈದು, ತಂತ್ರಾಗಮನದ ಮೂಲಕ ಜಾತಿ,ಜಾತಿಯನ್ನು ಬೆಸೆಯುವ ಕೆಲಸವಾಗಬೇಕು,ಮನೆ,ಮನೆಯಲ್ಲು ಸಂಸ್ಕಾರ ಬೆಳೆಸುವ ಮತ್ತು ಉಳಿಸುವ ನಿಟ್ಟಿ ನಲ್ಲಿ ಪ್ರಯತ್ನಗಳಾಗಬೇಕು ಎಂದರು.

ಅಳದಂಗಡಿ ಅರಮನೆಯ ಶ್ರೀ ಡಾ. ಪದ್ಮಪ್ರಸಾದ್ ಅಜಿಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಸೇಸಪ್ಪಕೋಟ್ಯಾನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕುಂಟಾರು ರವೀಶ್ ತಂತ್ರಿಯವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು‌.ಬಂಟ್ವಾಳ ಶಾಸಕ ರಾಜೇ‌ಶ್ ನಾಯ್ಕ ಉಳಿಪಾಡಿಗುತ್ತು ಅವರು ಅಗಮಿಸಿ ಶುಭಹಾರೈಸಿದರು.

ಮಾಜಿ ಸಚಿವರಾದ ಬಿ. ರಮಾನಾಥ ರೈ ,ಪುರಸಭಾ ಸದಸ್ಯೆ ಮೀನಾಕ್ಷಿಗೌಡ,ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ,ಭಜರಂಗದಳದ ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು,ಶ್ರೀ‌ ಆದಿಶಕ್ತಿ ಭದ್ರಕಾಳಿ ಸೇವಾ ಸಮಿತಿ ಅಧ್ಯಕ್ಷ ಲೋಕೇಶ್ ಭಟ್,ನರಿಕೊಂಬು ಎರಿಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಳದ ಪ್ರದಾನ ಅರ್ಚಕ ಕೇಶವ ಶಾಂತಿ‌,ಶ್ರೀ ಮಹಮ್ಮಾಯಿ ದೇವಸ್ಥಾನದ ಅನುವಂಶಿ ಟ್ರಸ್ಟಿ ದಿನೇಶ್ ಪೂಜಾರಿ,ಶ್ರೀ ಮಹಮ್ಮಾಯಿ ದುರ್ಗಾಂಭ ಟ್ರಸ್ಟ್ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ವೇದಿಕೆಯಲ್ಲಿದ್ದರು.

ಶ್ರೀ ಆದಿಶಕ್ತಿ ಸೇವಾಸಮಿತಿ ಸದಸ್ಯ ಅಭಿಜಿತ್ ಸ್ವಾಗತಿಸಿ ,ಪ್ರಸ್ತಾವಿಸಿದರು. ಶ್ರೀಮಹಮ್ಮಾಯಿ ದುರ್ಗಾಂಭ ಟ್ರಸ್ಟ್ ನ ಪ್ರ.ಕಾರ್ಯದರ್ಶಿ ಮಹಾಬಲ ಬಂಗೇರ ವಂದಿಸಿದರು.ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಮಾಣಿಲ ಶ್ರೀ ಮೋಹನ್ ದಾಸ್ ಸ್ವಾಮೀಜಿಯವರ ಮಾರ್ಗದರ್ಶನ,ಅಳದಂಗಡಿ ಅರಮನೆಯ ಶ್ರೀ ಡಾ. ಪದ್ಮಪ್ರಸಾದ್ ಅಜಿಲರ ಉಪಸ್ಥಿತಿಯಲ್ಲಿ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಸರ್ವೈಶ್ಚರ್ಯ ಪೂಜೆ,ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು‌.

See also  ಚೆನ್ನೈ: ಐಎನ್ ಎಸ್ ವಿಕ್ರಾಂತ್ ಚೆನ್ನೈನ ಕಟ್ಟುಪಲ್ಲಿ ಬಂದರಿನಲ್ಲಿ ಬಂದಿಳಿಯುವ ಸಾಧ್ಯತೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು