News Kannada
Thursday, June 01 2023
ಮಂಗಳೂರು

ಮಂಗಳೂರು: ಯೋಗಾಭ್ಯಾಸದಿಂದ ಆರೋಗ್ಯ ಭಾಗ್ಯ – ಡಾ.ದಿನೇಶ್ ಕುಮಾರ್.ವೈ.

Dr. Dinesh Kumar Y. Sudhakaran said that yoga practices are a blessing in health.
Photo Credit : By Author

ಮಂಗಳೂರು: ಆರೋಗ್ಯ ಮನುಷ್ಯನ ನಿಜವಾದ  ಸಂಪತ್ತು. ಆರೋಗ್ಯ ಭಾಗ್ಯವನ್ನು ಯೋಗದಿಂದ ಸಾಧಿಸಬಹುದು. ಜನರನ್ನು ರೋಗ ಮುಕ್ತವಾಗಿಸಲು ಯೋಗ ಉತ್ತಮ ಮಾರ್ಗ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್.ವೈ.ಹೇಳಿದರು.

ನಗರದ ಲಾಲ್‌ಬಾಗ್ ಬಳಿಯ ವನಿತಾ ಪಾರ್ಕ್‌ನಲ್ಲಿ ದ.ಕ. ಜಿಲ್ಲಾ ರೆಡ್‌ಕ್ರಾಸ್  ಘಟಕ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದೇವಿಕಾ ಯೋಗ ಕ್ಲಾಸ್ ಮತ್ತು ಮಂಗಳೂರು ನಾರ್ತ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಮಹಿಳೆಯರಿಗಾಗಿ ಹಮ್ಮಿಕೊಂಡ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆರೋಗ್ಯವಂತ  ಬದುಕಿಗೆ ಶುದ್ಧ ಗಾಳಿ, ಉತ್ತಮ ಪರಿಸರವೂ ಅಗತ್ಯವಿದೆ. ನಗರದ ಪಾರ್ಕ್‌ಗಳ ಅಭಿವೃದ್ಧಿಯೂ ಸೇರಿದಂತೆ ಪರಿಸರ ಸಂರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದೆ. ಅರಣ್ಯ ಸಂರಕ್ಷಣೆ ಜತೆಗೆ ನಗರ ಪ್ರದೇಶವನ್ನು ಹಸಿರಾಗಿಸಲು ಅರಣ್ಯ ಇಲಾಖೆ ವಿಶೇಷ ಆದ್ಯತೆ ಕಲ್ಪಿಸಿದೆ ಎಂದು ಅವರು ಹೇಳಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಶ್ರೀನಿವಾಸ ನಾಯಕ್‌ಇಂದಾಜೆ ಮಾತನಾಡಿ ವನಿತಾ ಪಾರ್ಕ್‌ನಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಯೋಗ ಶಿಬಿರ ಆಯೋಜಿಸಲಾಗುವುದು ಎಂದರು. ದೇವಿಕಾ ಯೋಗ ಕ್ಲಾಸ್  ನಿರ್ದೇಶಕಿ ದೇವಿಕಾ ಪುರುಷೋತ್ತಮ ಇವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿಬಿರಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು.

ನಿವೃತ್ತ ಎಡಿಸಿ ಪ್ರಭಾಕರ ಶರ್ಮ, ದ.ಕ.ರೆಡ್‌ಕ್ರಾಸ್ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕ ಪಿ.ಬಿ.ಹರೀಶ್ ರೈ, ರವೀಂದ್ರನಾಥ ಉಚ್ಚಿಲ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಖಜಾಂಜಿ ಬಿ.ಎನ್.ಪುಷ್ಪರಾಜ್, ಇನ್ನರ್ ವ್ಹೀಲ್ ಕ್ಲಬ್ ಮಂಗಳೂರು  ನಾರ್ತ್ ಅಧ್ಯಕ್ಷೆ ವಸಂತಿ ಕಾಮತ್, ಕಾರ್ಯದರ್ಶಿ ಗೀತಾ ರೈ,  ದೇವಿಕಾ ಯೋಗ ಕ್ಲಾಸ್  ನಿರ್ದೇಶಕಿ ದೇವಿಕಾ ಪುರುಷೋತ್ತಮ  ಉಪಸ್ಥಿತರಿದ್ದರು. ಪೂರ್ಣಿಮಾ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿಬಿರಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.

ವನಿತಾ ಪಾರ್ಕ್‌ನಲ್ಲಿ 60 ದಿನಗಳ ಕಾಲ ನಡೆದ ಉಚಿತ ಯೋಗ ಶಿಬಿರದಲ್ಲಿ 55 ಮಹಿಳೆಯರು ಭಾಗವಹಿಸಿದ್ದರು.

See also  ಮಾಣಿ: ಬೈಕ್ ಡಿಕ್ಕಿಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು