News Kannada
Tuesday, June 06 2023
ಮಂಗಳೂರು

ಬೆಳ್ತಂಗಡಿ: ವಾಹನ ಸಂಚಾರಿಗಳಿಗೆ ಅಪಾಯಕರವಾದ ಆವರಣಗೋಡೆ

Belthangady: A dangerous compound wall for motorists
Photo Credit : News Kannada

ಬೆಳ್ತಂಗಡಿ: ಆವರಣಗೋಡೆಯೊಂದು ವಾಹನ ಸಂಚಾರಿಗಳಿಗೆ ಅಪಾಯಕರವಾಗಿ ಪರಿಣಮಿಸುತ್ತಿದ್ದು ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕಾಗಿದೆ.

ಗುರುವಾಯನಕೆರೆ- ನಾರಾವಿ- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಅಳದಂಗಡಿ ಎಂಬಲ್ಲಿ ಈ ಅಪಾಯಕಾರಿ ತಾಣವಿದೆ. ದಿನವಿಡೀ ಸಹಸ್ರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಅಳದಂಗಡಿ ಸೇತುವೆ ಬಳಿ ತಿರುವೊಂದು ಇದ್ದು ಈ ರಸ್ತೆ ತಿರುವಿನ ಅಂಚಿನಲ್ಲಿ ವ್ಯಕ್ತಿಯೊಬ್ಬರು ರಸ್ತೆಯನ್ನು ಆಕ್ರಮಿಸಿ ಭದ್ರವಾದ ಆವರಣಗೋಡೆಯೊಂದನ್ನು ಕಟ್ಟಿ ತಣ್ಣಗಿದ್ದಾರೆ. ಇವರ ಈ ಕಾಮಗಾರಿ ವಾಹನ ಚಾಲಕರಿಗೆ ದುಃಸ್ವಪ್ನವಾಗಿ ಪರಿಣಮಿಸುತ್ತಿದೆ.

ಇಲ್ಲಿ ರಸ್ತೆಯು ಒಂದು ಕಡೆಯಿಂದ ಇಳಿಮುಖವಾಗಿದ್ದು ವಾಹನಗಳು ವೇಗವಾಗಿ ಬಂದು ತಿರುವಿ ಮುಂದೆ ಸಂಚರಿಸುತ್ತವೆ. ಇನ್ನೊಂದು ಬದಿಯಿಂದ ಬರುವ ವಾಹನಗಳಿಗೆ ಆವರಣಗೋಡೆ ಅಡ್ಡವಾಗಿ ಬರುವುದರಿಂದ ಎದುರಿನಿಂದ ಬರುವ ವಾಹನಗಳು ಗೋಚರಿಸುವುದಿಲ್ಲಾ.

ಹೀಗಾಗಿ ಅಪಘಾತ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಈಗಾಗಲೇ ಗುರುವಾಯನಕರೆ ಶಕ್ತಿನಗರದಿಂದ ರಸ್ತೆ ವ್ಯಾಪಕವಾಗಿ ಅಗಲಿಕರಣವಾಗುತ್ತಿದ್ದು, ಇಲ್ಲಿಯೂ ರಸ್ತೆ ಅಗಲವಾದರೆ ನಿರಾಯಾಸವಾಗಿ ವಾಹನ ಓಡಿಸಬಹುದಾಗಿದೆ ಎಂಬುದು ಚಾಲಕರ ಮನೋಗತ.

ಮುಂದಿನ ದಿನಗಳಲ್ಲಿ ಇಲ್ಲಿಯೇ ಸನಿಹದ ಶ್ರೀಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನೆರವೇರಲಿದ್ದು ಈ ಸಂದರ್ಭ ಆಡಳಿತ ಅತೀ ಹೆಚ್ಚು ವಾಹನಗಳ, ಭಕ್ತರ ಓಡಾಟವಿರಲಿದೆ. ಹೀಗಾಗಿ ಆವರಣವನ್ನು ಕೂಡಲೇ ಅನಾವರಣ ಮಾಡಬೇಕಾದ ಅವಶ್ಯಕತೆಯಿದೆ.

See also  ಪೆರಿಂಜೆ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಶ್ರೀ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಫೆ. ೧೦-೧೪ರವರೆಗೆ ಸಹಸ್ರ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು