ಬಂಟ್ವಾಳ : ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ನಿಂದ ಭಾಗವಹಿಸುತ್ತಿರುವ ರಾಜ್ಯದ ಓರ್ವ ಯುವಕ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿಥುನ್ ಭಾಗವಹಿಸಲಿದ್ದಾರೆ.
ಬಂಟ್ವಾಳ ತಾಲೂಕಿನ ಸೇರಾ ನಿವಾಸಿ ದಿ.ಕೃಷ್ಣಪ್ಪ ಪೂಜಾರಿ ಹಾಗೂ ದಿ.ಭಾರತಿ ಅವರ ಏಕೈಕ ಪುತ್ರ ಮಿಥುನ್ ಕುಮಾರ್ . ಭಾರತೀಯ ತಟರಕ್ಷಣಾ ಪಡೆಯಲ್ಲಿರುವ ಅವರು ಆಂದ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದೆಹಲಿಯಲ್ಲಿ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆಯುವ ಪಥಸಂಚಲನಕ್ಕೆ ಇಂಡಿಯನ್ ಕೋಸ್ಟ್ ಗಾರ್ಡ್ ನಿಂದ ಓರ್ವ ಭಾಗವಹಿಸುತ್ತಿದ್ದು, ರಾಜ್ಯಕ್ಕೆ ಅತ್ಯಂತ ಸಂತಸದ ವಿಷಯ.
ನ.1 ರಿಂದ ನೊಯಿಡಾದಲ್ಲಿ ತರಬೇತಿ ನಡೆಯುತ್ತಿದ್ದು, ಜನವರಿಯಿಂದ ದೆಹಲಿಯ ಕರ್ತವ್ಯ ಪಥದಲ್ಲಿ ತರಬೇತಿ ನಡೆಯುತ್ತಿದೆ. ನಾಳೆ ನಡೆಯುವ ಪಥಸಂಚಲನದ ಒಂದು ಯುನಿಟ್ ನಲ್ಲಿ 144 ಜನರಿದ್ದು ಆ ತಂಡದಲ್ಲಿ ಮಿಥುನ್ ಪಥಸಂಚನದಲ್ಲಿ ಭಾಗವಹಿಸಲಿದ್ದಾರೆ.