News Kannada
Wednesday, May 31 2023
ಮಂಗಳೂರು

ಕುಂದಾಪುರ: ಕರಾವಳಿ ಭಾಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ- ಕೆ.ಗೋಪಾಲ ಪೂಜಾರಿ

Kundapur: Festive weather prevails in coastal areas
Photo Credit : News Kannada

ಕುಂದಾಪುರ: ಕಳದೆರಡು ವರ್ಷಗಳ ಕಾಲ ಆರ್ಭಟಿಸಿದ ಕೋವಿಡ್ ಸಾಂಕ್ರಮಿಕ ರೋಗದಿಂದ ಜನರ ಬದುಕಿನ ಸಂತಸದ ದಿನಗಳನ್ನು ಕಿತ್ತುಕೊಂಡಿದೆ ಪ್ರಸ್ತುತ ವರ್ಷದಲ್ಲಿ ದೇವರ ದಯೆಯಿಂದ ಕೊರೊನಾದ ಅಡೆತಡೆ ಇಲ್ಲದೆ ನಾಡಿನಲ್ಲಿ ಉತ್ಸವಗಳು, ಹಬ್ಬ ಹರಿದಿನಗಳು, ದೇವತಾ ಕಾರ್ಯಗಳು ವಿಜೃಂಭಣೆಯಿಂದ ನಡೆಯುತ್ತಿದೆ ಕರಾವಳಿ ಭಾಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಸ್ಪಂದನ ಯುವ ಸಂಘ ಮಂಕಿ ಗುಜ್ಜಾಡಿ ಅದರ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಕಿ ಶಾಲೆ ಆಟದ ಮೈದಾನದಲ್ಲಿ ಶನಿವಾರ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಉದ್ಯಮಿ ನಾರಾಯಣ ಟಿ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ಪಂದನ ಯುವ ಸಂಘ ಊರಿನಲ್ಲಿ ಒಳ್ಳೆ ಕೆಲಸಗಳನ್ನು ಮಾಡುವುದರ ಮೂಲಕ ಗುರುತಿಸಿಕೊಂಡಿದೆ ಯಾವುದೆ ರೀತಿಯ ರಾಜಕೀಯ ಬೆಳವಣಿಗೆಗೆ ಸ್ಪಂದನೆ ನೀಡದೆ ಕೆಲಸ ಮಾಡಬೇಕು ಎಂದರು.

ಸ್ಪಂದನ ಯುವ ಸಂಘದ ಅಧ್ಯಕ್ಷ ರಘು ಎಮ್, ನಿವೃತ್ತ ಶಿಕ್ಷಕ ಶಂಕರ ಬಿಲ್ಲವ ಮರವಂತೆ, ಗುಜ್ಜಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಡಿಎಸ್‍ಎಸ್ ಸಂಚಾಲಕ ಮಂಜುನಾಥ, ನಾಗರಾಜ ಪುತ್ರನ್, ಪರಮೇಶ್ವರ ಶ್ರೀಯಾನ್, ಪುಂಡಲೀಕ ಮಂಕಿ, ಯುವ ಸಂಘದ ಗೌವಾಧ್ಯಕ್ಷ ಕಿಶೋರ್ ದೇವಾಡಿಗ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಶಂಕರ ಬಿಲ್ಲವ ಮರವಂತೆ, ಸುರೇಂದ್ರ ನಾವುಡ ಮಂಕಿ ಹಾಗೂ ಕೆ.ಗೋಪಾಲ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸತೀಶ ಪಿ ಸ್ವಾಗತಿಸಿದರು.ಸುಂದರ ಜಿ ನಿರೂಪಿಸಿದರು.ನಿತಿನ್ ಎಂ ವಂದಿಸಿದರು. ಡ್ಯಾನ್ಸ್ ಧಮಾಕ 2023 ಕಾರ್ಯಕ್ರಮ ನಡೆಯಿತು.

See also  ಅಳದಂಗಡಿ: ಲಕ್ಷಾಂತರ ರೂ. ಮೌಲ್ಯದ ನಗದು ಕಳವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು