News Kannada
Thursday, March 23 2023

ಮಂಗಳೂರು

ಬೆಳ್ತಂಗಡಿ: ಅಕ್ರಮವಾಗಿ ಬೆಳೆಬಾಳುವ ಮರ ಸಾಗಾಟ, ಅರಣ್ಯಧಿಕಾರಿಗಳಿಂದ ಕ್ಷಿಪ್ರ ಕಾರ್ಯಾಚರಣೆ

Belthangady: Illegal transportation of timber, forest officials take swift action
Photo Credit : News Kannada

ಬೆಳ್ತಂಗಡಿ: ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿಂದ ರಾತ್ರಿ ವೇಳೆ ಬೆಳೆಬಾಳುವ ಮರ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಅರಣ್ಯಧಿಕಾರಿಗಳು ದಾಳಿ ನಡೆಸಿ ಮರದ ದಿಮ್ಮಿ ಸಹಿತ ಆರೋಪಿಗಳನ್ನು ಜ.30 ರಂದು ವಶಕ್ಕೆ ಪಡೆದಿದ್ದಾರೆ.

ಬಂದಾರು ಶಾಖಾ ಉಪ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬಂದಿಗಳು ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿ ಮುರ ಗ್ರಾಮದ ಮುಗೇರಡ್ಕ ಎಂಬಲ್ಲಿ ಜ.30 ರಂದು ರಾತ್ರಿ ಸುಮಾರು 2.30 ರ ಸಮಯಕ್ಕೆ ಮುಗೇರಡ್ಕ ಎಂಬಲ್ಲಿ ಅಕ್ರಮವಾಗಿ ಹೆಬ್ಬಲಸು, ಮಾವು ಹಾಗೂ ಕಾಡು ಜಾತಿಯ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವ ಲಾರಿಯನ್ನು ಪತ್ತೆ ಹಚ್ಚಿದ್ದರು.

ಲಾರಿಗೆ ಬೆಂಗಾವಲಾಗಿ ಸಂಚರಿಸುತ್ತಿದ್ದ ಪಾಣೆ ಮಂಗಳೂರಿನ ಅಬ್ಬಾಸ್, ಕಡಬ ಮರ್ದಾಳದ
ಇರ್ಫಾನ್, ಇಳಂತಿಲ ಗ್ರಾಮದ ಅಂಡೆತ್ತಡ್ಕ ನಿವಾಸಿಗಳಾದ ಅಶ್ರಫ್, ರಹಿಮಾನ್ ಮರ ಕಡಿದ ಸ್ಥಳದ ವಾರೀಸುದಾರ ಮುರ ಗ್ರಾಮದ ಕೃಷ್ಣಪ್ಪ ಕ್ಷೌರಿಕ ಹಾಗೂ ಲಾರಿ ಚಾಲಕ ಬಂಟ್ವಾಳದ ಬೋಗೋಡಿ ನಿವಾಸಿ ಅಶ್ರಫ್ ಅಂಬೋನು ಅವರ ವಿರುದ್ಧ ಅರಣ್ಯ ಸಂರಕ್ಷಣೆ ಕಾಯ್ದೆಯಂತೆ ದೂರು ದಾಖಲಿಸಲಾಗಿದೆ.

ಲಾರಿ ಸಂಖ್ಯೆ ಕೆಎ-13, ಎ-2102 ಹಾಗೂ ಬೆಂಗಾವಲು ವಾಹನ ಕೆಎ-21 ಇಬಿ- 7581ಹಾಗೂ ಮೂರು ಮೋಟ‌ ಸೈಕಲ್, ಕೆಎ21 ವೈ 6102,ಕೆಎ21 ವೈ 2658 ಹಾಗೂ ಕೆಎ-21 ವೈ-0537 ಮತ್ತು ಲಾರಿಯಲ್ಲಿದ್ದ 26 ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ.

ಪಾಣೆಮಂಗಳೂರಿನ ಅಬ್ಬಾಸ್, ಮರ್ದಾಳ ನಿವಾಸಿ
ಇರ್ಫಾನ್, ಮೊಗ್ರು ನಿವಾಸಿ ಕೃಷ್ಣಪ್ಪ ಕ್ಷೌರಿಕನನ್ನು ಬಂಧಿಸಲಾಗಿದ್ದು ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ವಶ ಪಡಿಸಿದ ಮರಗಳ ಸೊತ್ತುಗಳ ಮೌಲ್ಯ 2.7ಲಕ್ಷ ರೂ. ವಾಹನಗಳ ಅಂದಾಜು ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಉಪ್ಪಿನಂಗಡಿ ವಲಯ ಅರಣ್ಯಧಿಕಾರಿ ಜಯಪ್ರಕಾಶ ಕೆ.ಕೆ., ಮಾರ್ಗದರ್ಶನದಂತೆ ಬಂದಾರು ಶಾಖಾ ಉಪ ವಲಯ ಅರಣ್ಯಾಧಿಕಾಲ ಜೆರಾಲ್ಡ್ ಡಿಸೋಜ, ಹಾಗೂ ಗಸ್ತು ಅರಣ್ಯ ಪಾಲಕರಾದ ಜಗದೀಶ ಕೆ.ಎನ್., ಪ್ರಶಾಂತ್ ಮಾಳಗಿ, ಎಂ.ಎಂ. ಜಗದೀಶ, ಅರಣ್ಯ ವೀಕ್ಷಕರಾದ ರವಿ ಮತ್ತು ಸೇಸಪ್ಪ ಗೌಡ ವಾಹನ ಚಾಲಕರಾದ ಕಿಶೋರ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

 

See also  ವಿಶ್ವ ಮಾನಸಿಕ ಆರೋಗ್ಯ ದಿನ 2022 ಮತ್ತು ಮಹಿಳೆಯರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು