ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದ ತೃತೀಯ ತ್ರೈಮಾಸಿಕದಲ್ಲಿ ಶೇ. 105.32 ವೃದ್ಧಿದರ ದೊಂದಿಗೆರೂ. 300.63 ಕೋಟಿಗಳ ನಿವ್ವಳ ಲಾಭವನ್ನು ಘೋಷಿಸಿದೆ. ಹಿಂದಿನ ವರ್ಷದಇದೇಅವಧಿಯಲ್ಲಿ ನಿವ್ವಳ ಲಾಭವುರೂ. 146.42ಕೋಟಿಗಳಾಗಿತ್ತು. ಇದರಿಂದಾಗಿ ತೃತೀಯ ತ್ರೈಮಾಸಿಕದ ಅಂತ್ಯಕ್ಕೆ ವಾರ್ಷಿಕ ಶೇ.118.68ರ ವೃದ್ಧಿದರದೊಂದಿಗೆ ರೂ.826.15 ಕೋಟಿಗಳ ನಿವ್ವಳ ಲಾಭ ಗಳಿಸಿದಾಖಲೆ ಮೆರೆದಿದೆ. ಹಿಂದಿನ ವರ್ಷಇದೇ ಅವಧಿಯಲ್ಲಿ ನಿವ್ವಳ ಲಾಭವುರೂ. 377.79 ಕೋಟಿಗಳಾಗಿತ್ತು.
ಇಂದು ಮಂಗಳೂರಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಸಂಪನ್ನಗೊಂಡ ಆಡಳಿತ ಮಂಡಳಿಯ ಸಭೆಯಲ್ಲಿ ವಿತ್ತೀಯ ವರ್ಷ2022-23 ರತೃತೀಯ ತ್ರೈಮಾಸಿಕದ ಹಣಕಾಸು ವರದಿಯನ್ನುಅಂಗೀಕರಿಸಲಾಯಿತು.
ಬ್ಯಾಂಕಿನ ಸ್ವತ್ತುಗಳ ಗುಣಮಟ್ಟದಲ್ಲೂ ಗಮನಾರ್ಹ ವೃದ್ಧಿ ಕಂಡಿವೆ. ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತುಗಳು 8 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆಯಾಗಿದ್ದು, ಶೇ. 3.28 ಕ್ಕೆ ಇಳಿಕೆ ಕಂಡಿವೆ. ಇದು ಹಿಂದಣ ತ್ರೈಮಾಸಿಕ ಅಂತ್ಯಕ್ಕೆ (30-09-2022) ಶೇ. 3.36 ರಷ್ಟಿದ್ದವು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಕೂಡ 6 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆಯಾಗಿದ್ದು, ಶೇ. 1.66ಕ್ಕೆ ಇಳಿಕೆ ಕಂಡಿವೆ. ಪ್ರೊವಿಶನ್ ಕವರೇಜ್ ಅನುಪಾತ ದಾಖಲೆಯಶೇ. 80.21 ಕ್ಕೆ ತಲುಪಿದ್ದು,ಕಳೆದ ವಿತ್ತೀಯ ವರ್ಷ(2021-22ರ) ತೃತೀಯ ತ್ರೈಮಾಸಿಕದ ಅಂತ್ಯಕ್ಕೆಇದು ಶೇ.73.66 ಆಗಿತ್ತು.
ಬ್ಯಾಂಕಿನ ಒಟ್ಟು ವ್ಯವಹಾರವು(31.12.2022 ಅಂತ್ಯಕ್ಕ್ಕೆ), ಶೇ. 9.79ರ ದರದಲ್ಲಿ ವೃದ್ಧಿ ಕಂಡಿದ್ದು, ರೂ 1,47,128.51 ಕೋಟಿಗೆ ಏರಿದೆ. ಬ್ಯಾಂಕಿನ ಠೇವಣಿಗಳು ಶೇ.7.86ರದರದಲ್ಲಿ ವೃದ್ಧಿ ಕಂಡು ರೂ. 84,596.40ಕೋಟಿಗಳಷ್ಟಿವೆ, ಹಾಗೂ ಮುಂಗಡಗಳು ಶೇ. 12.51ದರದಲ್ಲಿ ವೃದ್ಧಿ ಕಂಡುರೂ. 62,532.11 ಕೋಟಿಗಳಿಗೆ ತಲುಪಿವೆ.
ಬ್ಯಾಂಕಿನ ತೃತೀಯ ತ್ರೈಮಾಸಿಕದ ಫಲಿತಾಂಶಗಳನ್ನು ಘೋಷಿಸುತ್ತಾ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್. ಅವರು ಮಾತನಾಡಿ “ಶತಮಾನದ ಸಂಭ್ರಮದಲ್ಲಿರುವ ಕರ್ಣಾಟಕ ಬ್ಯಾಂಕ್ 2022-23ರ ಆರ್ಥಿಕ ವರ್ಷದ ಕಳೆದೆರಡು ತ್ರೈಮಾಸಿಕದಂತೆ ಈ ತ್ರೈಮಾಸಿಕದಲ್ಲೂ ಕೂಡ ಉತ್ತಮ ಸಾಧನೆಯ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಬ್ಯಾಂಕ್ನ ಸ್ಥಿರ ಮತ್ತು ದೃಢವಾದ ಈ ಸಾಧನೆಯು ಬ್ಯಾಂಕನ್ನು ಮತ್ತಷ್ಟು ಪ್ರಗತಿಯೆಡೆಗೆ ಕೊಂಡೊಯ್ಯುವುದೆಂಬ ಭರವಸೆಯಿದೆ. ಬ್ಯಾಂಕಿಂಗ್ ಕ್ಷೇತ್ರದ ಮೂಲಭೂತ ಅಂಶಗಳೆಡೆಗೆ ಗಮನವಿರಿಸಿದ ಉತ್ಕೃಷ್ಟ ಮತ್ತುಜಾಗ್ರತ ವ್ಯವಹಾರಪ್ರಜ್ಞೆಯೇ ಈ ಸಾಧನೆಗೆಕಾರಣ. ಈ ತ್ರೈಮಾಸಿಕದ ಫಲಿತಾಂಶ ಬ್ಯಾಂಕಿನ ಪರಿಣಾಮಕಾರಿಯಾದ ಸರ್ವಾಂಗೀಣಕಾರ್ಯಕ್ಷಮತೆಗೆ ಸಾಕ್ಷಿಯಾಗಿ ನಮ್ಮ ಮುಂದಿದೆ.
NII ಅನುಪಾತ ಶೇ.26.74 ವೃದ್ಧಿ ಕಂಡಿದೆ. NIM ಅನುಪಾತ ದಾಖಲೆಯ ಶೇ. 3.63 ಕ್ಕೆ ವೃದ್ಧಿ ಕಂಡಿದ್ದು, ಅದು ಹಿಂದಿನ ವರ್ಷದದಶಂಬರ ಅಂತ್ಯಕ್ಕೆ ಶೇ. 3.15 ರಷ್ಟಿದ್ದವು. ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತುಗಳು ಶೇ.3.36 ರಿಂದ ಶೇ 3.28 ಕ್ಕೆ ಇಳಿಕೆ ಕಂಡಿವೆ. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಶೇ. 1.72 ರಿಂದ ಶೇ. 1.66 ಕ್ಕೆ ಇಳಿಕೆ ಕಂಡಿವೆ. ಸ್ಥಿರತೆಯಿಂದ ಕೂಡಿದ ಈ ಸರ್ವಾಂಗೀಣ ಪ್ರಗತಿ ಬ್ಯಾಂಕಿನ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟುಯಶಸ್ಸನ್ನು ಸಾಧಿಸಲು ಬ್ಯಾಂಕ್ ಬದ್ಧವಾಗಿದೆ. ಗ್ರಾಹಕಕೇಂದ್ರಿತ ನಮ್ಮ ಪಯಣ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ದಾಖಲೆಗಳನ್ನು ನಿರ್ಮಿಸಿ ಕರ್ಣಾಟಕ ಬ್ಯಾಂಕ್ನ ಶತಮಾನೋತ್ಸವ ವರ್ಷ ಬ್ಯಾಂಕ್ ಹಾಗು ಗ್ರಾಹಕರ ಸಂಬಂಧಕ್ಕೆ ಹೊಸ ಭಾಷ್ಯವನ್ನು ಬರೆಯಲಿದೆ” ಎಂದರು.