News Kannada
Friday, March 24 2023

ಸಮುದಾಯ

ಬಂಟ್ವಾಳ: ಮಾ.24 ರಿಂದ ಮಾ.30ರ ವರೆಗೆ ಸಂಗಬೆಟ್ಟು ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ

The re-consecration of Sangabettu temple from March 24 to March 30 will be held at Brahmakalashabhishekam.
Photo Credit : By Author

ಬಂಟ್ವಾಳ: ಪುನರ್ ನಿರ್ಮಾಣಗೊಂಡ ಸಿದ್ಧಕಟ್ಟೆ ಶ್ರೀ ವೀರಭದ್ರ ಮಹಮ್ಮಾಯೀ ಸಂಗಬೆಟ್ಟು ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರೀ, ಶ್ರೀ ವೀರಭದ್ರ ಸ್ವಾಮೀ ದೇವರ ಹಾಗೂ ಶ್ರೀ ಧೂಮಾವತಿ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕೋತ್ಸವ ಕಾರ್ಯಕ್ರಮ ಮಾ 24ರ ಶುಕ್ರವಾರದಿಂದ ಮಾ.30 ಗುರುವಾರದ ವರೆಗೆ ಜರಗಲಿದೆ.

ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಕ್ಷೇತ್ರದ ಪ್ರಧಾನ ಅರ್ಚಕರಾದ ಪ್ರಭಾಕರ ಐಗಳ್ ಅವರ ಪೂಜಾ ವಿಧಿ ವಿಧಾನಗಳ ನಂತರ ಶ್ರೀ ದಾಮೋದರ ರಾವ್, ನಿವೃತ್ತ ಮುಖ್ಯಮಾಧ್ಯಾಯರು ಸಂಗಬೆಟ್ಟು ಇವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಚಂದ್ರಹಾಸ ಗುರಿಕಾರ್, ಪಿ.ಶ್ರೀನಿವಾಸ ಶೆಟ್ಟಿಗಾರ್ ಯಾನೆ ಸೋಮಯ ಗುರಿಕಾರ್, ಗಂಗಾಧರ ಗುರಿಕಾರ್, ಮಹಾಬಲ ಗುರಿಕಾರ್, ಮೊತ್ತೇಸರರುಗಳಾದ ದೇವಪ್ಪ ಶೆಟ್ಟಿಗಾರ್ ಕೋಣಾಜೆ, ಧನಂಜಯ ಶೆಟ್ಟಿಗಾರ್ ಕೃಷ್ಣಾಪುರ, ವಾಮನ ಶೆಟ್ಟಿಗಾರ್ ಶಿರ್ತಾಡಿ, ಪಾತ್ರಿ ವರ್ಗದಿಂದ ಬೋಜ ಮುಕ್ಕಾಲ್ಲಿ, ಶೇಖರ್ ಮುಕ್ಕಾಲ್ಲಿ, ಮಾಧವ ಶೆಟ್ಟಿಗಾರ್ ಪಾತ್ರಿಗಳು, ಮಾಗಣೆ ಪ್ರಮುಖರಾದ ಗಣೇಶ್ ಶೆಟ್ಟಿಗಾರ್ ಕೆರೆಕಾಡು, ಧರ್ಮಣ ಶೆಟ್ಟಿಗಾರ್ ಅಡ್ಯಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗಣೇಶ್ ಶೆಟ್ಟಿಗಾರ್ ಬೋಳಂಗಡಿ, ಕಾರ್ಯಾಧ್ಯಕ್ಷರಾದ ಎಮ್ ಜಯರಾಮ್ ಮಂಗಳೂರು, ಯಶೋದರ್ ಶೆಟ್ಟಿಗಾರ್ ಸಂಗಬೆಟ್ಟು, ಉಪಾಧ್ಯಕ್ಷರುಗಳಾದ  ವೀರೇಂದ್ರ ಶೆಟ್ಟಿಗಾರ್ ಮೂಡುಬಿದ್ರಿ, ನೋಣಯ ಶೆಟ್ಟಿಗಾರ್ ಸಂಗಬೆಟ್ಟು, ಪ್ರಧಾನ ಕಾರ್ಯದರ್ಶಿ ಭವಾನಿಶಂಕರ್ ಪಿ ಆರ್ ಕಾಟಿಪಳ್ಳ, ಕೋಶಾಧಿಕಾರಿ ಗಣೇಶ್ ಶೆಟ್ಟಿಗಾರ್, ಕಾರ್ಯದರ್ಶಿಗಳಾದ ನಾಗೇಶ್ ಶೆಟ್ಟಿಗಾರ್ ಸಂಗಬೆಟ್ಟು, ಬ್ರಹ್ಮಕಲಶ ಅಭಿಷೇಕೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ರಾಜಕುಮಾರ್ ಶೆಟ್ಟಿಗಾರ್‌ ಅಡ್ಯಾರು, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಶೆಟ್ಟಿಗಾರ್ ಸಂಗಬೆಟ್ಟು, ಉಪಸಮಿತಿಗಳ ಸಂಚಾಲಕರುಗಳಾದ ದೀಪಕ್ ಶೆಟ್ಟಿಗಾರ್ ಸಂಗಬೆಟ್ಟು, ಗೋವರ್ಧನ್ ಶೆಟ್ಟಿಗಾರ್ ಸಿದ್ಧಕಟ್ಟೆ, ವಿಶ್ವನಾಥ ಶೆಟ್ಟಿಗಾರ್ ಸಂಗಬೆಟ್ಟು ಸತೀಶ್ ಶೆಟ್ಟಿಗಾರ್ ಕೊಣಾಜೆ, ತುಕಾರಾಮ ಶೆಟ್ಟಿಗಾರ್ ಮಾಡಮೆ ಹಾಗೂ ಇತರ ಪದಾಧಿಕಾರಿಗಳು ಮತ್ತು ಹತ್ತು ಸಮಸ್ತರು ಉಪಸ್ಥಿತರಿದ್ದರು.

See also  ಗುಣಮಟ್ಟವಲ್ಲದ ಈ ಔಷಧಿಗಳ ಬಳಕೆ ನಿಷೇಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು