News Kannada
Thursday, March 30 2023

ಮಂಗಳೂರು

ಮಂಗಳೂರು: ಕರಾವಳಿ ಬಿಜೆಪಿಯಲ್ಲಿ ಅಮಿತ್‌ ಶಾ ಭೇಟಿ ಸಂಚಲನ, ಆಂತರಿಕ ವರದಿಯ ಮೇಲೆ ಕ್ರಮ ಸಂಭವ

Mangaluru: Amit Shah's visit to coastal BJP is on the rise, action on internal report likely
Photo Credit : Twitter

ಮಂಗಳೂರು: ಫೆ.11ರಂದು ಅಮಿತ್‌ ಶಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸುತ್ತಿದ್ದಾರೆ. ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ಸಮಾವೇಶ ಇದಾಗಿದ್ದರೂ, ಚುನಾವಣೆ ಹೊಸ್ತಿಲಲ್ಲಿರುವ ಕಾರಣ ಕುತೂಹಲ ಕೆರಳಿಸಿದೆ. ಹೈಕಮಾಂಡ್‌ ಪ್ರತೀ ಜಿಲ್ಲೆಯಿಂದಲೂ ಖಾಸಗಿ ಅಧ್ಯಯನ ಸಂಸ್ಥೆಗಳ ಮೂಲಕ ಗ್ರೌಂಡ್‌ ರಿಪೋರ್ಟ್‌ ಪಡೆದುಕೊಂಡಿದೆ. ಯಾವ ಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗಿದೆ, ಎಲ್ಲಿ ವೀಕ್‌ ಆಗಿದೆ ಎಂಬ ವರದಿಯ ಜತೆಗೆ ಪ್ರತೀ ಶಾಸಕರ ಬಗ್ಗೆಯೂ ವರದಿ ತರಿಸಿಕೊಂಡಿದೆ. ಹೈಕಮಾಂಡ್‌ ತರಿಸಿಕೊಂಡ ವರದಿ ಯಾವುದೇ ಕ್ಷೇತ್ರದಲ್ಲೂ ಲೆಕ್ಕಾಚಾರ ಬುಡಮೇಲು ಮಾಡಬಹುದು.

ಫೆ.11ರಂದು ಅಮಿತ್‌ ಶಾ ಪುತ್ತೂರಿಗೆ ಬರುತ್ತಿದ್ದಾರೆ. ಕರಾವಳಿಯ ಮಟ್ಟಿಗೆ ಕಮಲ ಪಕ್ಷದ ಸೈದ್ಧಾಂತಿಕ ರಾಜಧಾನಿ ಎಂದೇ ಕರೆಯಲ್ಪಡುವ ಪುತ್ತೂರಿನಲ್ಲಿ ಶಾ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ಸಮಾವೇಶ ಇದಾಗಿದ್ದರೂ, ಚುನಾವಣೆ ಹೊಸ್ತಿಲಲ್ಲಿರುವ ಕಾರಣ ಕುತೂಹಲ ಕೆರಳಿಸಿದೆ. ಸಂಘಟನಾತ್ಮಕವಾಗಿ ಜಿಲ್ಲೆಯಲ್ಲಿ ತಳವೂರಿರುವ ಪಕ್ಷಕ್ಕೆ ಸಮಾವೇಶದ ಯಶಸ್ಸು ಸಮಸ್ಯೆಯೇ ಅಲ್ಲ. ಆದರೆ ಈ ಭೇಟಿಯ ಪಾರ್ಶ್ವದಲ್ಲಿಅಮಿತ್‌ ಶಾ ಜಿಲ್ಲೆಯ ಕ್ಷೇತ್ರವಾರು ರಿಪೋರ್ಟ್‌ ಕಾರ್ಡ್‌ ಬಗ್ಗೆ ಗುಪ್ತವಾಗಿ ಚರ್ಚೆ ನಡೆಸಬಹುದೆನ್ನುವ ವಿಚಾರವೇ ತಲ್ಲಣಕ್ಕೆ ಕಾರಣವಾಗಿದೆ.

ಈಗಾಗಲೇ ಪಕ್ಷದ ಹೈಕಮಾಂಡ್‌ ಪ್ರತೀ ಜಿಲ್ಲೆಯಿಂದಲೂ ಖಾಸಗಿ ಅಧ್ಯಯನ ಸಂಸ್ಥೆಗಳ ಮೂಲಕ ಗ್ರೌಂಡ್‌ ರಿಪೋರ್ಟ್‌ ಪಡೆದುಕೊಂಡಿದೆ. ಯಾವ ಕ್ಷೇತ್ರದಲ್ಲಿ ಪಕ್ಷ ಬಲಿಷ್ಠವಾಗಿದೆ, ಎಲ್ಲಿ ವೀಕ್‌ ಆಗಿದೆ ಎಂಬ ವರದಿಯ ಜತೆಗೆ ಪ್ರತೀ ಶಾಸಕರ ಬಗ್ಗೆಯೂ ವರದಿ ತರಿಸಿಕೊಂಡಿದೆ. ಪ್ರಸ್ತುತ ಜಿಲ್ಲೆಯ 8 ಕ್ಷೇತ್ರಗಳಲ್ಲಿ7ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಸುಳ್ಯದ ಅಂಗಾರರನ್ನು ಹೊರತುಪಡಿಸಿದರೆ ಇತರೆಲ್ಲರೂ 2018ರಲ್ಲಿ ಮೊದಲ ಬಾರಿ ಶಾಸಕರಾದವರು. ಎಲ್ಲಾ ಹಾಲಿಗಳಿಗೆ ಈ ಬಾರಿಯೂ ಟಿಕೆಟ್‌ ಸಿಗಲಿದೆ ಎಂಬ ಮೇಲ್ನೋಟದ ಲೆಕ್ಕಾಚಾರವಿದೆಯಾದರೂ, ಹೈಕಮಾಂಡ್‌ ತರಿಸಿಕೊಂಡ ವರದಿ ಯಾವುದೇ ಕ್ಷೇತ್ರದಲ್ಲೂ ಲೆಕ್ಕಾಚಾರ ಬುಡಮೇಲು ಮಾಡಬಹುದು.

ಅಮಿತ್‌ ಶಾ ಮಂಗಳೂರು ಮೂಲಕ ಪುತ್ತೂರಿಗೆ ಬರಲಿದ್ದು, ಮುಖ್ಯಮಂತ್ರಿ ಬೊಮ್ಮಾಯಿ, ಪುತ್ತೂರು ಮೂಲದ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಜತೆಗಿರಲಿದ್ದಾರೆ. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೆ ಇಲ್ಲಿನ ನಿಕಟ ಸಂಪರ್ಕವಿರುವ ಕಾರಣ ಜಿಲ್ಲೆಯ ವಾಸ್ತವ ವರದಿ ಅಮಿತ್‌ ಶಾ ಅವರಿಗೆ ಅತ್ಯಂತ ಕರಾರುವಕ್ಕಾಗಿ ಸಿಗಲಿದೆ.

ಕೆಲ ದಿನಗಳ ಹಿಂದಷ್ಟೇ ಆರೆಸ್ಸೆಸ್‌ ಪುತ್ತೂರಿನಲ್ಲಿ ಮೆಗಾ ಸಮಾವೇಶ ನಡೆಸಿ ಇಡೀ ಜಿಲ್ಲೆಯ ರಂಗ ತಾಲೀಮಿಗೆ ದಿಕ್ಸೂಚಿ ನೀಡಿದೆ. ಇದೇ ಪುತ್ತೂರಿನಲ್ಲಿಈಗ ಅಮಿತ್‌ ಶಾ ಸಮಾವೇಶ ಏರ್ಪಾಡಾಗುತ್ತಿರುವುದು ಈ ಬಾರಿ ಜಿಲ್ಲೆಯ 8 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಪುತ್ತೂರಿನಿಂದಲೇ ಕರಾರುವಾಕ್‌ ಸೂಚನೆ ಹೋಗಲಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅಮಿತ್‌ ಶಾ ತನ್ನ ಭೇಟಿಯ ವೇಳೆ ಆರೆಸ್ಸೆಸ್‌ ಪ್ರಮುಖರ ಜತೆ ಗುಪ್ತ ಮಾತುಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

See also  ಮಂಗಳೂರು: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪೊಲೀಸ್ ವಶಕ್ಕೆ

ಜಿಲ್ಲೆಯಲ್ಲಿ ಯಾವ ಕ್ಷೇತ್ರದಲ್ಲೂ ಬಿಜೆಪಿ ಟಿಕೆಟ್‌ಗಾಗಿ ಯಾರೂ ಬಹಿರಂಗ ಹೇಳಿಕೆ, ಅಭಿಯಾನ ನಡೆಸಿಲ್ಲ. ಪುತ್ತೂರಿನಲ್ಲಿ ಮಾತ್ರ ಹಿಂದೂ ಸಂಘಟನೆ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಪರ ಅಭಿಮಾನಿಗಳು ಅಭಿಯಾನ ನಡೆಸುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪುತ್ತೂರಿಗೆ ಪುತ್ತಿಲ ಅಭಿಯಾನ ನಡೆಯುತ್ತಿದ್ದು, ಟ್ವಿಟರ್‌ ಮೂಲಕ ಅಮಿತ್‌ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕರಿಗೆ ತಲುಪಿಸಲಾಗಿದೆ.

ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಪುತ್ತೂರಿನಲ್ಲಿ ಮುಖ್ಯಮಂತ್ರಿ ಸೇರಿದಂತೆ ಯಾವುದೇ ರಾಷ್ಟ್ರೀಯ ಬಿಜೆಪಿ ನಾಯಕರ ಸಮಾವೇಶ ನಡೆದಿಲ್ಲ. ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ, ಹಾಲಿ ಕೇಂದ್ರ ಗೃಹ ಸಚಿವರೂ, ಪಕ್ಷದ ನೀತಿ ನಿರೂಪಣೆಯ ಪರಮೋಚ್ಚ ನಾಯಕರೂ ಆದ ಅಮಿತ್‌ ಶಾ ಬರುತ್ತಿರುವುದು ಪಕ್ಷದ ಉತ್ಸಾಹ ಇಮ್ಮಡಿಸಿದ್ದು, ಚುನಾವಣೆ ಹೊಸ್ತಿಲಲ್ಲಿ ಕಾರ್ಯಕರ್ತರಿಗೆ ರೋಮಾಂಚನ ಉಂಟು ಮಾಡಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಂದಲೂ ಕಾರ್ಯಕರ್ತರು, ರೈತರು, ಸಹಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರು ಸಮಾವೇಶವನ್ನು ಚಾರಿತ್ರಿಕಗೊಳಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು