News Kannada
Wednesday, March 29 2023

ಮಂಗಳೂರು

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಆಟೋ ರಿಕ್ಷಾ, ಮಹಿಳೆ ಸಾವು

Woman killed as auto-rickshaw falls into river after driver loses control
Photo Credit : By Author

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾ ನದಿಗೆ ಉರುಳಿದ ಪರಿಣಾಮ ನೀರಿಗೆ ಬಿದ್ದ ಪ್ರಯಾಣಿಕ ಮಹಿಳೆ ಮೃತ ಪಟ್ಟ ಘಟನೆ ಮುಂಡಾಜೆ ಸಮೀಪದ ಚಿಬಿದ್ರೆ ಗ್ರಾಮದ ಕಾಪು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಮೃತ ಮಹಿಳೆಯನ್ನು ಚಿಬಿದ್ರೆಯ ಕಕ್ಕಿಂಜೆ ಕತ್ತರಿಗುದ್ದೆ ನಿವಾಸಿ ಸಫಿಯಾ(57) ಎಂದು ಗುರುತಿಸಲಾಗಿದೆ.

ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡು ಕಕ್ಕಿಂಜೆ ಕಡೆ ಹೋಗುತ್ತಿದ್ದಾಗ ಅಬೂಬಕ್ಕರ್ ಸಿದ್ದೀಕ್ ಎಂಬವರು ಚಲಾಯಿಸುತ್ತಿದ್ದ ರಿಕ್ಷಾ ನಿಯಂತ್ರಣ ತಪ್ಪಿ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿಯ ಕಣಿವೆ ಮೂಲಕ ಉರುಳಿ ಮೃತ್ಯುಂಜಯ ನದಿಗೆ ಬಿದ್ದಿದೆ.ಈ ವೇಳೆ ಮಹಿಳೆ ನದಿ ನೀರಿಗೆ ಬಿದ್ದು ಮೃತ ಪಟ್ಟರು.

ರಿಕ್ಷಾ ಚಾಲಕ ಸಹಿತ ಇತರ ಪ್ರಯಾಣಿಕರಾದ ಮರಿಯಮ್ಮ(25) ಹಾಗೂ ಮಹಮ್ಮದ್ ಅಶ್ರಫ್(35 )ಗಾಯ ಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.ಪ್ರಕರಣ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.

ಅಪಾಯಕಾರಿ ಜಾಗ

ಹೆದ್ದಾರಿಯ ಈ ವ್ಯಾಪ್ತಿಯ ಸುಮಾರು 200ಮೀ. ರಸ್ತೆ ಅಗಲ ಕಿರಿದಾಗಿದ್ದು,ಭಾರಿ ಏರು ಹಾಗೂ ಒಂದು ಬದಿ ಆಳವಾದ ನದಿಯ ಕಣಿವೆ ಹೊಂದಿದೆ.ಇದೀಗ ಇಲ್ಲಿಂದ ಕೆಳಗಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಇಳಿಸಲಾಗಿದ್ದು ನದಿಯಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ರಿಕ್ಷಾವೊಂದು ನದಿ ಕಣಿವೆಗೆ ಉರುಳಿದಾಗ ಮರದ ಬೇರೊಂದಕ್ಕೆ ಸಿಲುಕಿದ ಕಾರಣ ನದಿಗೆ ಬೀಳುವುದು ತಪ್ಪಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.

See also  ಮಂಗಳೂರು ವಿವಿ: ಗ್ರಂಥಾಲಯದಿಂದ ಆಗಸ್ಟ್ 8 ರಿಂದ ಕಾರ್ಯಾಗಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು