News Kannada
Thursday, March 23 2023

ಮಂಗಳೂರು

ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದಯರಾಗ- ಸ್ಯಾಕ್ಸೋಫೋನ್ ವಾದನ

25th Kannada Sahitya Sammelana of Dakshina Kannada District Udayaraga - Saxophone Recital
Photo Credit : News Kannada

ಉಜಿರೆ: ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರದ ಕಾರ್ಯಕ್ರಮಗಳು ಮುಂಜಾನೆ ಉದಯರಾಗದೊಂದಿಗೆ ಪ್ರಾರಂಭಗೊಂಡವು.

 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಆಕಾಶವಾಣಿ ‘ಎ’ ಗ್ರೇಡ್ ಕಲಾವಿದ ಡಿ.ಬಿ. ಪ್ರಕಾಶ ದೇವಾಡಿಗ ಅವರು ಸ್ಯಾಕ್ಸೋಫೋನ್ ವಾದನದ ಮೂಲಕ ಭಕ್ತಿಭಾವದ ರಾಗಲಹರಿಯನ್ನು ಹರಿಸಿದರು.

ಅತ್ಯಂತ ಸುಶ್ರಾವ್ಯವಾಗಿ ಮಹಾಗಣಪತಿ ಕೃತಿಯ ಭಜಮಾನಸದೊಂದಿಗೆ ಆರಂಭಗೊಂಡ ಸ್ಯಾಕ್ಸೋಫೋನ್ ವಾದನವು ಜಯಜಯ ಪದ್ಮನಾಭ ಕೀರ್ತನೆ, ರಾಜರಾಜಿತೇ ಕೃತಿ, ಹರಿಕುಣಿರಾಗ, ಹರಿಮಣ ಮರಾಠಿ ಭಕ್ತಿ ಗೀತೆ, ಕನ್ನಡದ ನಿತ್ಯೋತ್ಸವ ಮತ್ತು ‘ಭಾಗ್ಯದ ಲಕ್ಷ್ಮೀ’ ಯೊಂದಿಗೆ ರಾಗಸುಧೆ ಹರಿಸಿ ಸಮಾಪ್ತಿಗೊಂಡಿತು.

ಮುಖ್ಯ ವಾದಕರಿಗೆ ಸಹ ಸ್ಯಾಕ್ಸೋಫೋನ್ ವಾದಕರಾಗಿ ತ್ಯಾಗರಾಜ್ ಹಾಸನ, ನಾಗಪ್ರಿಯ ಕುತ್ರೊಟ್ಟು ಹಾಗೂ ಜ್ಞಾನಶ್ರೀ ಕುತ್ರೊಟ್ಟು ಜತೆಯಾದರು. ತಬಲಾದಲ್ಲಿ ಗೌರಿ ಪ್ರಸಾದ್ ಹಾಗೂ ಡೊಲ್ಕಿಯಲ್ಲಿ ಪ್ರವೀಣ್ ದೇವಾಡಿಗ ಸಾಥ್ ನೀಡಿದರು.

ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾವೀರ್ ಜೈನ್ ಕಾರ್ಯಕ್ರಮ ನಿರ್ವಹಿಸಿ, ಕಲಾವಿದ ಡಿ.ಬಿ. ಪ್ರಕಾಶ ದೇವಾಡಿಗ ಅವರನ್ನು ಸಮ್ಮಾನಿಸಿದರು.

See also  ನವದೆಹಲಿ: ಮೂವರು ದರೋಡೆಕೋರರನ್ನು ಬಂಧಿಸಿದ ಪೊಲೀಸ್ ಕ್ರೈಂ ಬ್ರಾಂಚ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು