News Kannada
Saturday, March 25 2023

ಮಂಗಳೂರು

ಮಂಗಳೂರು: ದಿವ್ಯ ಜೀವನ ಅಮೃತ ಟ್ರಸ್ಟ್ ಕಚೇರಿ ಶಿಲಾನ್ಯಾಸ

Mud stone laying ceremony at Rohan's estate
Photo Credit : News Kannada

 ಮಂಗಳೂರು: ಕಳೆದ ಹಲವಾರು ವರ್ಷಗಳಿಂದ ಸಮಾಜದಲ್ಲಿ ಕಡು ಬಡವರಿಗೆ ಸಹಾಯಹಸ್ತವನ್ನು ನೀಡುತ್ತಾ ಈಗಾಗಲೇ ೨೦೦ ಕ್ಕೂ ಮೇಲ್ಪಟ್ಟು ಕಡುಬಡವ ವಿಧವೆಯರ ಮಕ್ಕಳಿಗೆ ೧ ನೇ ತರಗತಿಯಿಂದ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ನೀಡಿ ಅವರಿಗೆ ಉದ್ಯೋಗ ಸಿಗುವವರೆಗೆ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುತ್ತಿರುವ ದಿವ್ಯ ಜೀವನ ಅಮೃತ ಟ್ರಸ್ಟ್ ನ ಮಂಗಳೂರಿನ ಕಚೇರಿಗೆ ಮಂಗಳೂರಿನ ಪಾಲ್ದನೆಯಲ್ಲಿರುವ ರೋಹನ್ ಎಸ್ಟೇಟ್‌ನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಪಾಲ್ದನೆಯ ಸಂತ ತೆರೆಜಾ ಚರ್ಚಿನ ಪ್ರಧಾನ ಧರ್ಮಗುರು ಆಲ್ಬನ್ ಡಿ’ಸೋಜಾ ಹಾಗೂ ವಾಸ್ತವ್ಯ ಧರ್ಮಗುರು ಫಾ ಸಿಲ್ವೆಸ್ಟರ್ ಮಿರಾಂದ ಸಂಸ್ಥೆ ಯಶಸ್ಸಿಗೆ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರಿನ ರೋಹನ್‌ ಕಾರ್ಪೋರೇಶನ್ ಆಡಳಿತ ನಿರ್ದೇಶಕ ರೋಹನ್ ಮೊಂತೇರೊ, ಅವರು ಸಮಾಜ ಸೇವೆ ಮಾಡುವ ಈ ಸಂಸ್ಥೆಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ ದಾಯ್ಜಿ ವಾರ್ಲ್ಡ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಮಾತನಾಡಿ ನಾವು ಗಳಿಸಿದ ಸಂಪತ್ತಿನಲ್ಲಿ ಕೆಲವು ಅಂಶವನ್ನು ಸಮಾಜಕ್ಕೆ ನೀಡಿದಲ್ಲಿ ಬಾಳು ಸಾರ್ಥಕವಾಗುತ್ತದೆ ಎಂದರು.

ಅತಿಥಿಗಳಾಗಿದ್ದ ಇಯಾನ್ ಕೇರ್ ಪೌಂಡೇಶನ್‌ ಟ್ರಸ್ಟಿ ಹೇಮಾಚಾರ್ಯ, ಬೆಳ್ಮಣ್‌ ಹ್ಯೂಮ್ಯಾನಿಟಿ ಟ್ರಸ್ಟ್ ಸ್ಥಾಪಕ ಟ್ರಸ್ಟಿ ರೋಶನ್  ಬೆಳ್ಮಣ್‌,  ಫೋರ್ ವಿಂಡ್ಸ್ ಮಾಸ್ ಕಮ್ಯುನಿಕೇಶನ್   ನಿರ್ದೇಶಕ ಇ. ಫೆರ್ನಾಂಡಿಸ್, ಇಂಜಿನಿಯರಿಂಗ್ ಕನ್ಸಲ್ಟೆಂಟ್‌ ಮಹಮ್ಮದ್ ಇಕ್ಬಾಲ್  ಸಂಸ್ಥೆಗೆ ಶುಭ ಹಾರೈಸಿದರು.

ಈಗಾಗಲೇ ಜಾತಿ ಮತ ಭೇದವಿಲ್ಲದೆ ೧೭ ಕುಟುಂಬಗಳನ್ನು ದತ್ತು ತೆಗೆದುಕೊಂಡ ಸಂಸ್ಥೆಯ ಸ್ಥಾಪಕ ಡೆನ್ನಿಸ್ ಮಸ್ಕರೇಂಜಸ್ ಅವರು ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ವಿವರಿಸಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ರೋನಾಲ್ಡ್ ಡಿ’ಸೋಜಾ, ಪ್ಲಾಯ್ಡ್ ಡಿ’ಮೆಲ್ಲೊ, ಆಸ್ಟಿನ್ ಫೆರ್ನಾಂಡಿಸ್, ಜೆರೊಮ್ ಸಿಕ್ವೇರಾ, ಸುಜಿತ್ ಕುಮಾರ್, ಸಂತ ತೆರೆಜಾ ಚರ್ಚ್ನ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಕಾನ್ವೆಂಟಿನ ಭಗಿನಿಯರು ಉಪಸ್ಥಿತರಿದ್ದರು. ಸಂತ ತೆರೆಜಾ ಚರ್ಚಿನ ಮಾಜಿ ಉಪಾಧ್ಯಕ್ಷ ವಿಲಿಯಂ ಲೋಬೊ ಕಾರ್ಯ ನಿರ್ವಹಿಸಿದರು. ಮಾರಿ ಮಾತೆಯ ಸೊಡೆಲಿಟಿ ಅಧ್ಯಕ್ಷೆ ಹೆಲೆನ್ ಲೋಬೊ ಸಹಕರಿಸಿದರು

See also  ಮಂಗಳೂರು: ಮತದಾರರ ಪಟ್ಟಿಯಲ್ಲಿ ಬಿ ಎಲ್ ಓ ಗಳಿಂದ ಅಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು