News Kannada
Wednesday, March 29 2023

ಮಂಗಳೂರು

ಸುರತ್ಕಲ್: ಹರ್ಷಿತ್ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ಇನ್ಸ್ ಪೆಕ್ಟರ್ ಗೆ ಮನವಿ

A petition has been made to Surathkal inspector demanding a thorough probe into Harshit's death.
Photo Credit : News Kannada

ಸುರತ್ಕಲ್: ಎರಡು ದಿನಗಳ ಹಿಂದೆ ನೇಣು ಬಿಗಿದು ಸಾವಿಗೆ ಶರಣಾಗಿರುವ ಏಳನೇ ತರಗತಿ ವಿದ್ಯಾರ್ಥಿ ಕೃಷ್ಣಾಪುರ ನಿವಾಸಿ ಹರ್ಷಿತ್ ದೇವಾಡಿಗ(14) ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆಗೆ ಒತ್ತಾಯಿಸಿ ಸ್ಥಳೀಯ ಕಾರ್ಪೋರೇಟರ್ ಲಕ್ಷ್ಮಿ ಶೇಖರ್ ದೇವಾಡಿಗ ನೇತೃತ್ವದಲ್ಲಿ ಸ್ಥಳೀಯರು ಸುರತ್ಕಲ್ ಇನ್ಸ್ ಪೆಕ್ಟರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತಾಡಿದ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಅವರು, “ಬಾಲಕನ ಸಾವಿನ ಕುರಿತಂತೆ ಈಗಾಗಲೇ ಶಾಲೆಯಲ್ಲಿ ತನಿಖೆ ನಡೆಸಲಾಗಿದೆ. ಮಕ್ಕಳು ತಮಾಷೆ ಮಾಡುತ್ತಿದ್ದ ಕ್ಷುಲ್ಲಕ ಕಾರಣಕ್ಕೆ ಬಾಲಕ ದುಡುಕಿನ ನಿರ್ಧಾರ ಕೈಗೊಂಡಿದ್ದು ಸ್ಪಷ್ಟವಾಗಿದೆ. ಆದರೂ ಮಕ್ಕಳ ಕಲ್ಯಾಣ ಸಮಿತಿ ನಡೆಸುವ ತನಿಖೆಗೆ ನಾವು ಇಲಾಖೆಯ ವತಿಯಿಂದ ಸಹಕಾರ ನೀಡಲಿದ್ದೇವೆ” ಎಂದರು.

ಮನಪಾ ಸದಸ್ಯೆ ಲಕ್ಷ್ಮಿ ಶೇಖರ ದೇವಾಡಿಗ, ಸದಸ್ಯ ಪ್ರಶಾಂತ್ ಮೂಡಾಯಿಕೊಡಿ, ಸುಧಾಕರ ದೇವಾಡಿಗ, ದಿನಕರ ದೇವಾಡಿಗ, ಹರೀಶ ದೇವಾಡಿಗ, ದೇವರಾಜ ದೇವಾಡಿಗ, ಲಕ್ಷ್ಮೀಶ್ ದೇವಾಡಿಗ, ಶೇಖರ ದೇವಾಡಿಗ, ದುರ್ಗಾ ಪ್ರಸಾದ್ ಹೊಳ್ಳ, ಶಿವಪ್ರಸಾದ್ ಬೊಳ್ಳಾಜೆ, ಸತೀಶ್ ಅಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಮೃತ ಹರ್ಷಿತ್ ಗೆ 83% ಮಾರ್ಕ್ಸ್ ಇತ್ತು ಹೀಗಾಗಿ ಶೈಕ್ಷಣಿಕ ದೃಷ್ಟಿಯಿಂದ ಶಾಲೆಯ ಆಡಳಿತ ಹೊಣೆ ಎನ್ನಲಾಗದು. ಮಕ್ಕಳ ಕಿಚಾಯಿಸುವಿಕೆಯಿಂದ ಬೇಸತ್ತು ಕೃತ್ಯ ಎಸಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಐದನೇ ಘಟನೆ ಇದಾಗಿದ್ದು ಮಕ್ಕಳ ಖಿನ್ನತೆಯನ್ನು ಮನೆಮಂದಿ, ಶಾಲೆ ಶಿಕ್ಷಕರು ಗಮನಿಸಬೇಕು. ಮಕ್ಕಳ ಕಲ್ಯಾಣ ಸಮಿತಿ ನಿಯೋಗ ತನಿಖೆ ನಡೆಸಿ ವರದಿ ನೀಡುತ್ತದೆ. ಈಗಿನ ಮಕ್ಕಳು ಸೂಕ್ಷ್ಮಮತಿಗಳಾಗಿದ್ದಾರೆ. ಈ ಬಗ್ಗೆ ಎಚ್ಚರಿಕೆ ಅಗತ್ಯ.

See also  ಬೆಳ್ತಂಗಡಿ: ಕುದ್ಯಾಡಿ ಚಿರತೆ ದಾಳಿಗೆ ಹಸು ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು