News Kannada
Sunday, March 26 2023

ಮಂಗಳೂರು

ಚಿತ್ರಾಪುರ ಬೀಚ್ ನಲ್ಲಿ ತಲ್ವಾರ್ ದಾಳಿ: ಹಲವರ ಮೇಲೆ ಹಲ್ಲೆ

Talwar attack at Chitrapur beach: Several people attacked
Photo Credit : News Kannada

ಸುರತ್ಕಲ್: ಪಣಂಬೂರು ಮೊಗವೀರ ಮಹಾಸಭಾ ವ್ಯಾಪ್ತಿಗೆ ಒಳಪಟ್ಟ ಚಿತ್ರಾಪುರ ಕಡಲಕಿನಾರೆಯ ಬಳಿ ನಿನ್ನೇ ಸಂಜೆ ಗಾಂಜಾದ ಅಮಲಿನಲ್ಲಿದ್ದ ಯುವಕರ ತಂಡವೊಂದು ಸಾರ್ವಜನಿಕರೆದುರೇ ತಲವಾರು ಝಳಪಿಸುತ್ತಾ ರಿಕ್ಷಾ ಚಾಲಕನಿಗೆ ಹಾಗೂ ಕೆಲವು ಜನರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕಳೆದ ತಿಂಗಳುಗಳಿಂದ ಕಡಲ ಕಿನಾರೆಯ ಬಳಿ ಕಡಲ್ಕೊರೆತ ಆಗದಂತೆ ತಂದಿದ್ದ ಕಲ್ಲುಗಳ ಮಧ್ಯೆ ಭಾಗದಲ್ಲಿ ಕೆಲವು ಯುವಕರು ಗಾಂಜಾ ಸೇವನೆ, ಮಾರಾಟ ಹಾಗೂ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಇದರ ವಿರುದ್ಧ ಪಣಂಬೂರು ಮೊಗವೀರ ಮಹಾಸಭಾದ ಪ್ರಮುಖರು ಅಲ್ಲದೇ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು.

ಈ ಘಟನೆಯಿಂದ ಕೋಪೋದ್ರಿಕ್ತರಾದ ಯುವಕರು ನಿಮ್ಮನ್ನೆಲ್ಲಾ‌ ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಸುತ್ತಾ ಗಾಂಜಾದ
ಅಮಲಿನಲ್ಲಿ ಆದಿತ್ಯವಾರ ಸಂಜೆ ಚಿತ್ರಾಪುರ ಕಡಲಕಿನಾರೆಯ ಬಳಿ ಸಾರ್ವಜನಿಕರೆದುರೇ ತಲವಾರು ಝಳಪಿಸುತ್ತಾ ಆ ಭಾಗದಲ್ಲಿದ್ದ ರಿಕ್ಷಾ ಚಾಲಕ ಸುನಿಲ್ ಎಂಬುವವರ ಮೇಲೆ ಹಾಗೂ ಕೆಲವು ಜನಗಳ ಮೇಲೂ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಗಾಯಗೊಂಡ ರಿಕ್ಷಾಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಂಜಾದ ಅಮಲಿನಲ್ಲಿ ಹಲ್ಲೆ ನಡೆಸಿದ ಅಮನ್ ಎಂಬುವವನ್ನು ಸಾರ್ವಜನಿಕರು ಹಿಡಿದು ಪೋಲಿಸರಿಗೊಪ್ಪಿಸಿದ್ದು ಮತ್ತೋರ್ವ ಯುವಕ ಪರಾರಿಯಾಗಿದ್ದಾನೆ. ಈ ಬಗ್ಗೆ ಸುರತ್ಕಲ್ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

See also  ಬಂಟ್ವಾಳ: 8ನೇ ದಿನದ ಪಾದಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಸಚಿವೆ ಶೋಭಾ ಕರಂದ್ಲಾಜೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು