News Kannada
Sunday, April 02 2023

ಮಂಗಳೂರು

ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ- ಕ್ಯಾನ್ಸರ್ ಮುಕ್ತ ಸಮಾಜಕ್ಕಾಗಿ ಸಂಗೀತ ಕಾರ್ಯಕ್ರಮ

Zulekha Yenepoya Institute of Oncology- Concert for Cancer Free Society
Photo Credit : News Kannada

ಮಂಗಳೂರು: ಜುಲೇಖಾ ಯೆನೆಪೊಯ ಆಂಕೊಲಾಜಿ ಸಂಸ್ಥೆ, ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದ ಘಟಕ , ಕ್ಯಾನ್ಸರ್ ಮುಕ್ತ ಸಮಾಜಕ್ಕಾಗಿ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಡಾ.ಅಂಬೇಡ್ಕರ್ ಭವನದಲ್ಲಿ ಸಂಗೀತ ಕಾರ್ಯಕ್ರಮನ್ನು ನಡೆಸಿತು. ಕ್ಯಾನ್ಸರ್ ರೋಗಿಗಳಿಗೆ ಭರವಸೆಯ ಕಿರಣವಾಗಿ ಈ ಸಂಗೀತ ಸಂಜೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ವಹಿಸಿದ್ದರು- ಕುಲಪತಿ, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಮುಖ್ಯ ಅತಿಥಿಗಳಾಗಿ ಸಿಪಿಸಿ ಕರ್ನಾಟಕದ ಆದಾಯ ತೆರಿಗೆ ಆಯುಕ್ತರಾದ ಶ್ರೀಮತಿ ಎಚ್ ಎಲ್ ಸೌಮ್ಯಾ ಆಚಾರ್ ಐಆರ್ ಎಸ್ ಮತ್ತು ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ ನಿರ್ದೇಶಕ ಡಾ.ವಿ ಲೋಕೇಶ್ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಶ್ರೀ ಆರ್ ಗೋಪಿನಾಥ್ ರಾವ್, ಉಪ ನಿರ್ದೇಶಕರು, ಭಾರತ ಸರ್ಕಾರ, ಡಾ. ಶೇಖರ್ ಪಾಟೀಲ್, ಆಂಕೊಲಾಜಿಸ್ಟ್, ಎಚ್ಸಿಜಿ ಆಸ್ಪತ್ರೆ ಮತ್ತು ಶ್ರೀ. ಟಿ ಆರ್ ಗೋಪಾಲಕೃಷ್ಣನ್, ಮಾಜಿ ಸಂಪಾದಕ-ಮುಖ್ಯಸ್ಥ, ದಿ ವೀಕ್ ಮ್ಯಾಗಜೀನ್. ರವರು ವಿಶೇಷ ಆಹ್ವಾನಿತರಾಗಿದ್ದರು.

ಡಾ.ಎಂ.ವಿಜಯಕುಮಾರ್, ಉಪಕುಲಪತಿ- ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ). ವಿವಿಧ ಕ್ಯಾನ್ಸರ್ ಅಂಶಗಳ ಕುರಿತು ಸಂಕ್ಷಿಪ್ತ ಭಾಷಣ ಮಾಡಿದರು, ಇದೇ ನಿಟ್ಟಿನಲ್ಲಿ ಜುಲೇಖಾ ಯೆನೆಪೋಯ ಆಂಕೊಲಾಜಿ ಸಂಸ್ಥೆಯು ಸಲ್ಲಿಸಿದ ಸೇವೆಗಳನ್ನು ಒತ್ತಿ ಹೇಳಿದರು.

ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಜುಲೇಖಾ ಯೆನೆಪೊಯ ಆಂಕೊಲಾಜಿ ಸಂಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವ ಪ್ರಸ್ತುತಿಯನ್ನು ಡಾ.ನಾಗರಾಜ್ ಶೇಟ್ , ಮಾರ್ಕೆಟಿಂಗ್ ಮ್ಯಾನೇಜರ್-ಮತ್ತು ಸಹಾಯಕ ವೈದ್ಯಕೀಯ ಅಧೀಕ್ಷಕರು ಇವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ, ರಿಜಿಸ್ಟ್ರಾರ್ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ). ಡಾ.ಜಲಾಲುದ್ದೀನ್ ಅಕ್ಬರ್, ಪ್ರೊಫೆಸರ್ ಮತ್ತು ಎಚ್ಒಡಿ, ಸರ್ಜಿಕಲ್ ಆಂಕೊಲಾಜಿ, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಮತ್ತು ನೌಕರರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಮತ್ತು ಇತರ ಪ್ರದರ್ಶನಗಳಿಗೆ ಸಾಕ್ಷಿಯಾಯಿತು. ಶ್ರೀ ನಾಗರಾಜ ಕೋಟೆ ಅವರಿಂದ ಸ್ಟ್ಯಾಂಡಪ್ ಕಾಮಿಡಿ, ಡಾ.ಸಜೀವ್ ನಾಯರ್ ಅವರಿಂದ ಪ್ರೇರಕ ಭಾಷಣ, ಸಂಗೀತ ಕಛೇರಿ, ಏಕವ್ಯಕ್ತಿ ನೃತ್ಯ ಮತ್ತು ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳು, ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ವಿಶ್ವವಿದ್ಯಾನಿಲಯದ ಜೊತೆಗೆ, ಈ ಕಾರ್ಯಕ್ರಮವನ್ನು ಜಂಟಿಯಾಗಿ ಶ್ರೀ. ಎಂ ಕೆ ಸೋಮಶೇಖರನ್, ಜೀವ ಜ್ಯೋತಿ ಎಜುಕೇಷನಲ್ ಟ್ರಸ್ಟ್ ಮತ್ತು ಸತ್ಯನಾರಾಯಣ, ಮಾಧ್ಯಮ ಸಲಹೆಗಾರ – ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಇವರು ಏರ್ಪಡಿಸಿದ್ದರು.

See also  ಬಂಟ್ವಾಳ| ಸಾರಡ್ಕದಲ್ಲಿ ಗುಡ್ಡ ಕುಸಿತ: ಸ್ವಲ್ಪದರಲ್ಲೇ ಪಾರಾದ ಬೈಕ್ ಸವಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು