News Kannada
Saturday, March 25 2023

ಮಂಗಳೂರು

ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ನೆರವೇರಿಸಿದ ರಾಜೇಶ್ ನಾಯ್ಕ್

Uzhi Grama Panchayath Rajesh Naik lays foundation stone for various works in the area
Photo Credit : News Kannada

ಬಂಟ್ವಾಳ: ಉಳಿ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ೯.೩೫ ಕೋ.ರೂ. ಶಾಸಕರ ನಿಧಿಯಿಂದ ನೀಡಲಾಗಿದ್ದು, ೩ ಕೋ.ರೂ. ಕಿಂಡಿ ಅಣೆಕಟ್ಟು ಅನುಷ್ಠಾನಗೊಂಡಿದ್ದು, ಕ್ಷೇತ್ರಕ್ಕೆ ೧೫ ಕೋ.ರೂ.ಹೆಚ್ಚುವರಿಯಾಗಿ ಅನುದಾನ ಬಂದಿದ್ದು, ಅದರ ಮೂಲಕ ೨ ಕಿಂಡಿ ಅಣೆಕಟ್ಟುಗಳನ್ನು ಉಳಿ ಗ್ರಾಮದಲ್ಲಿ ಅನುಷ್ಠಾನಗೊಳಿಸುವ ಕಾರ್ಯ ಮಾಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.

ಅವರು ಉಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ- ಶಿಲಾನ್ಯಾಸದ ಬಳಿಕ ಗ್ರಾ.ಪಂ.ಸುವರ್ಣ ಸಭಾಭವನದಲ್ಲಿ ನಡೆದ ೯೪ಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಜೆಜೆಎಂ ಮೂಲಕ ಮನೆ ಮನೆಗೆ ನಳ್ಳಿ ನೀರು ಕೊಡುವ ಕಾರ್ಯ ನಡೆದಿದ್ದು, ಉಳಿಯಲ್ಲಿ ೪೭ ಲಕ್ಷ ರೂ.ಕಾಮಗಾರಿ ನಡೆಯುತ್ತಿದೆ. ಗ್ರಾಮದ ೨೯ ರಸ್ತೆಗಳು ಅಭಿವೃದ್ಧಿಯಾಗಿದ್ದು, ೩೦೦ಕ್ಕೂ ಅಧಿಕ ಹಕ್ಕು ಪತ್ರ ವಿತರಿಸುವ ಕಾರ್ಯ ನಡೆದಿದೆ.

ಕಳೆದ ನಾಲ್ಕು ವರ್ಷ ೧೦ ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನದ ಮಾಡುವ ಅವಕಾಶವನ್ನು ಬಂಟ್ವಾಳದ ಜನತೆ ನೀಡಿದ್ದಾರೆ. ಮೊದಲ ವರ್ಷ ವಿರೋಧ ಪಕ್ಷದ ಶಾಸಕನಾಗಿ, ಬಳಿಕ ಬಂದ ಪ್ರವಾಹದ ಸ್ಥಿತಿಯ ನಿಭಾಯಿಸಿ ಮುಂದೆ ಮಹಾಮಾರಿ ನಮ್ಮನ್ನು ಕೊರೊನಾ ಆವರಿಸುತ್ತದೆ. ಆದರೆ ನಮ್ಮ ಪ್ರಧಾನಿ ಮೋದಿಯವರ ನಿರಂತರ ಹೋರಾಟದ ಫಲವಾಗಿ ಭಾರತ ಕೊರೊನಾವನ್ನು ಯಶಸ್ವಿ ಗೆದ್ದು ಬರುತ್ತದೆ.

ಕೊರೊನಾದ ಬಳಿಕ ಬಂಟ್ವಾಳ ಆರೋಗ್ಯ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆ ನಡೆದಿದ್ದು, ಬಂಟ್ವಾಳ ಹಾಗೂ ವಾಮದಪದವು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಕಾರ್ಯನಿರ್ವಹಿಸುತ್ತದೆ. ಜತೆಗೆ ಡಯಾಲಿಸೀಸ್ ಘಟಕ, ನುರಿತ ತಜ್ಞ ವೈದ್ಯರು, ಪುಂಜಾಲಕಟ್ಟೆ ಆಸ್ಪತ್ರೆಯನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಪುಂಜಾಲಕಟ್ಟೆಯಲ್ಲಿ ಜಿಲ್ಲೆಯ ಏಕೈಕ ನಾರಾಯಣ ಗುರು ವಸತಿ ಶಾಲೆ ಆರಂಭಗೊಂಡಿದ್ದು, ೩೦ ಕೋ.ರೂ.ವೆಚ್ಚದಲ್ಲಿ ಅದಕ್ಕೂ ಶಿಲಾನ್ಯಾಸ ನೇರವೇರಿಲಾಗುತ್ತದೆ.

ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಭೂ ನ್ಯಾಯ ಮಂಡಳಿಯ ಸದಸ್ಯ ರಂಜಿತ್ ಮೈರ, ಗ್ರಾ.ಪಂ.ಸದಸ್ಯರಾದ ಚೇತನ್ ಉರ್ದೊಟ್ಟು, ವಸಂತ್ ಸಾಲ್ಯಾನ್ ರಾಮನಗರ, ಸಂಜೀವ ಗೌಡ ಅಗ್ಪಲ, ಶಾಂತ ಕೊಡಂಗೆ, ರೇವತಿ ಮುದಲಾಡಿ, ಗುಲಾಬಿ ಮಾಡೋಡಿ, ರಕ್ಷಿತಾ ಮಾಡೋಡಿ, ಶಾರದಾ ಕೊಡಂಗೆ, ಗ್ರಾಮ ಆಡಳಿತ ಅಧಿಕಾರಿ ನಿಶ್ಮಿತಾ‌, ಲೆಕ್ಕ ಸಹಾಯಕ ಬಾಲಕೃಷ್ಣ ಉಪಸ್ಥಿತರಿದ್ದರು.

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿದ್ಯಾಶ್ರೀ ವಿದ್ಯಾಶ್ರೀ ಸ್ವಾಗತಿಸಿದರು. ಪಾರ್ಶ್ವನಾಥ ಜೈನ್ ಬಾರೆತ್ಯಾರು ಕಾರ್ಯಕ್ರಮ ನಿರ್ವಹಿಸಿದರು.

See also  ಶಿವಮೊಗ್ಗ| ಅನಧಿಕೃತ ಮದ್ಯ ಮಾರಾಟ ಮಾಡುವ ಅಂಗಡಿಗಳ ಪರವಾನಿಗೆ ರದ್ದು: ಆರಗ ಜ್ಞಾನೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು