News Kannada
Wednesday, March 29 2023

ಮಂಗಳೂರು

ಬಂಟ್ವಾಳ: ಹೆಗ್ಗಡೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಸಾಧನೆಯೆಂಬುವುದು ಕನಸಲ್ಲ- ಸತೀಶ್ ಶೆಟ್ಟಿ

Bantwal: It is not a dream to follow the path laid down by Heggade: Satish Shetty
Photo Credit : News Kannada

ಬಂಟ್ವಾಳ: ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ [ರಿ] ಪೊಳಲಿ ವಲಯ ಮಟ್ಟದ ಸಾಧನಾ ಸಮಾವೇಶ ಬಂಟ್ವಾಳ ತಾ.ನ ಅಮ್ಮುಂಜೆಯ ಶ್ರೀ ವಿನಾಯಕ ಜನಾರ್ದನ ದೇವಸ್ಥಾನದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ ಅವರು ಕಲ್ಪವೃಕ್ಷದ ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿ‌ ಡಾ.ವೀರೇಂದ್ರ ಹೆಗ್ಗಡೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಸಾಧನೆಯೆಂಬುವುದು ಕನಸಲ್ಲ. ವಿಶೇಷ ಸಾಧನೆ ಮಾಡಿದ ಸಂಘಗಳನ್ನು ಗುರುತಿಸುವುದರಿಂದ ಉಳಿದ ಸಂಘಗಳಿಗೂ ಉತ್ತಮ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.

ಅಮ್ಮುಂಜೆ ಗ್ರಾಮ ಪಂಚಾಯತ್ ಅದ್ಯಕ್ಷ ವಾಮನ ಅಚಾರ್ಯ ಮಾತನಾಡಿ “ನಾನು ಪಂಚಾಯತ್, ಅಧ್ಯಕ್ಷನಾಗಿದ್ದರೂ ಕೂಡಾ ಸ್ವಸಹಾಯ ಸಂಘದ ಸದಸ್ಯ. ಸಂಘದ ಸಭೆಗಳು ಹೇಗೆ ನಡೆಯಬೇಕು ಎಂಬುದನ್ನು ಶ್ರೀ.ಕ್ಷೇ.ಧ.ಗ್ರಾ. ಯೋಜನೆ ಕಲ್ಪಿಸಿಕೊಟ್ಟಿದೆ. ಪಂಚಾಯತ್ ಅಧ್ಯಕ್ಷ ಎನ್ನುವುದಕ್ಕಿಂತಲೂ ನಾನು ಸ್ವಸಹಾಯ ಸಂಘದ ಸದಸ್ಯ ಎನ್ನಲು ಹೆಚ್ಚು ಹೆಮ್ಮೆಪಡುತ್ತೇನೆ” ಎಂದು ಹೇಳಿದರು.

ಬಂಟ್ವಾಳ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ರೊನಾಲ್ಡ್ ಡಿ’ಸೋಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಡಿ. ಎ. ಅಬೂಬಕ್ಕರ್ ,ನಂದಿನಿ ಗ್ರೂಪ್ಸ್ ಬೆಂಜನಪದವು ಇದರ ಮಾಲಕರಾದ ಬಿ. ಉಮೇಶ ಸಾಲ್ಯಾನ್, ಪೊಳಲಿ ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಹೇಮಲತಾ. ಎನ್.ರಾವ್, ಪೊಳಲಿ ವೆಂಕಟೇಶ ನಾವಡ ಪೊಳಲಿ, ಜನಾರ್ಧನ ಆಚಾರ್ಯ ಪುಂಚಮೆ ಮುಂತಾದವರು ಉಪಸ್ಥಿತರಿದ್ದರು.

ವಲಯ ಮಟ್ಟದಲ್ಲಿ ಉತೃಷ್ಟ್ರ ಸಾಧನೆ ಮಾಡಿದ ಉತ್ತಮ ಸಂಘಗಳಾದ ಬಡಗಬೆಳ್ಳೂರು ಒಕ್ಕೂಟದ ಓಂ ಶಕ್ತಿ ಸ್ವಸಹಾಯ ಸಂಘ, ಕೊಡ್ಮಾಣ್ ಒಕ್ಕೂಟದ ಭಾಗ್ಯಜ್ಯೋತಿ ಸ್ವಸಹಾಯ ಸಂಘ, ಬೆಂಜನಪದವು’ಎ’ಒಕ್ಕೂಟದ ಜನನಿ ಸ್ವಸಹಾಯ ಸಂಘ, ಕರಿಯಂಗಳ ಒಕ್ಕೂಟದ ಶ್ರೀ ದುರ್ಗೆ ಸ್ವಸಹಾಯ ಸಂಘ, ಧನುಪೂಜೆ ಒಕ್ಕೂಟದ ಸೌಜನ್ಯ ಸ್ವಸಹಾಯ ಸಂಘ, ಮೇರಮಜಲು ಒಕ್ಕೂಟದ ಶ್ರೀನಿಧಿ ಸ್ವಸಹಾಯ ಸಂಘ, ಅಮ್ಮುಂಜೆ ಒಕ್ಕೂಟದ ಧರ್ಮ ಜ್ಯೋತಿ ಸ್ವಸಹಾಯ ಸಂಘ ಹಾಗೂ ಬಡಗಬೆಳ್ಳೂರು ಒಕ್ಕೂಟದ ಪ್ರಗತಿ ಬಂಧು ಸಂಘಗಳನ್ನು ಗೌರವಿಸಲಾಯಿತು.

ಯೋಜನೆಯಿಂದ ಪ್ರಗತಿನಿಧಿ ಸಾಲ ಪಡೆದು ಯಶಸ್ವಿಯಾಗಿ ಸ್ವ ಉದ್ಯೋಗವನ್ನು ಮಾಡಿ ಅತ್ಯುತ್ತಮ ಸಾಧನೆ ಮಾಡಿದ ಬೆಂಜನಪದವು ಎ ಒಕ್ಕೂಟದ ಶ್ರೀ ಲಲಿತಾಂಬಿಕಾ ಸ್ವಸಹಾಯ ಸಂಘದ ಶೇಖರ್ ಹಾಗೂ ಧನುಪೂಜೆ ಒಕ್ಕೂಟದ ಪಡೀಲ್ ಬೈಲ್ ಸ್ವಸಹಾಯ ಸಂಘದ ತಿಮ್ಮಪ್ಪ ಕುಲಾಲ್ ಹಾಗೂ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ನೆತ್ತರಕೆರೆ ನಿವಾಸಿ, ಸ್ವಸಹಾಯ ಸಂಘದ ಸದಸ್ಯೆ ಶೋಭಾ_ರಾಜೇಶ್ ದಂಪತಿಯ ಪುತ್ರಿಯರಾದ ಹಂಸಿಕಾ ಮತ್ತು ಭೂಮಿಕಾ ಇವರ ಸಾಧನೆಯನ್ನು ಗುರುತಿಸಿ ಕಾಯಕ್ರಮದಲ್ಲಿ ಗೌರವಿಸಲಾಯಿತು.

ಪೊಳಲಿ ವಲಯದ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ಸ್ವಾಗತಿಸಿ. ಸಂದೀಪ್ ಧನುಪೂಜೆ ವಂದಿಸಿದರು. ಸೇವಾ ಪ್ರತಿನಿಧಿ ರತ್ನ ವರದಿ ವಾಚಿದರು. ಬೆಂಜನಪದವು’ ಎ’ ಒಕ್ಕೂಟದ ಅಧ್ಯಕ್ಷ ಜನಾರ್ಧನ .ಆರ್. ಬಾರಿಂಜೆ ಕಾರ್ಯಕ್ರಮ ನಿರೂಪಿಸಿದರು.

See also  ಬೆಂಗಳೂರು: ಪಂಜಿನ ಮೆರವಣಿಗೆಯ ಮೂಲಕ ‘ಅನಂತ ಸ್ಮೃತಿ ನಡಿಗೆ’
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು