News Kannada
Saturday, April 01 2023

ಮಂಗಳೂರು

ದೆಹಲಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ತಜ್ಞ ಸಮಾಲೋಚನೆ: ಸಹ್ಯಾದ್ರಿಯ ಉಪನ್ಯಾಸಕರು ಆಯ್ಕೆ

International Women's Day Expert Consultation in Delhi
Photo Credit : By Author

ಮಂಗಳೂರು: ದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 7ರಂದು ನಡೆಯುವ ತಜ್ಞ ಸಮಾಲೋಚನೆಗೆ ಸಂಪಂನ್ಮೂಲ ವ್ಯಕ್ತಿಗಳಾಗಿ ನಗರದ ಸಹ್ಯಾದ್ರಿ ಕಾಲೇಜ್ ಆಪ್ ಇಂಜಿನಿಯರಿಂಗ್ ಮತ್ತು ಮೆನೇಜ್ಮೆಂಟ್ ನಿಂದ ಡಾ. ವಿಶಾಲ್ ಸಮರ್ಥ ಮತ್ತು ಪ್ರೊ. ಪದ್ಮನಾಭ ಬಿ. ಆಯ್ಕೆಯಾಗಿದ್ದಾರೆ.

ಸಚಿವಾಲಯದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ವಿಭಾಗದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಆಲ್: ಲಿಂಗ ಸಮಾನತೆಯಲ್ಲಿ ಆವಿಷ್ಕಾರ ಮತ್ತು ತಂತ್ರಜ್ಞಾನ ಎಂಬ ವಿಷಯದ ಕುರಿತು ಇವರು ವಿಚಾರ ಮಂಡಿಸಲಿದ್ದಾರೆ. (DigitalALL: Innovation and Technology for Gender Equity).

ದೇಶದ ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಸಲಿದ್ದಾರೆ. ಡಾ. ವಿಶಾಲ್ ಸಮರ್ಥ ಮತ್ತು ಪ್ರೊ. ಪದ್ಮನಾಭ ಬಿ. ಇವರು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ವಿಭಾಗದ ಅನುದಾನದಿಂದ ನಡೆಯುವ ಕಾರ್ಯಯೋಜನೆಯ ಪ್ರಧಾನ ಸಂಶೋಧಕಿ ಹಾಗೂ ಉಪ ಪ್ರಧಾನ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಯಯೋಜನೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಸುಮಾರು 165 ಮಹಿಳೆಯರು ವಿದ್ಯುತ್ ಮಗ್ಗ ತರಬೇತಿಯನ್ನು ನುರಿತ ತರಬೇತುಧಾರರಿಂದ ತರಬೇತಿ ಪಡೆದು ಸ್ವಂತ ಉದ್ದಿಮೆ ಆರಂಭಿಸಲಿದ್ದಾರೆ.

 

See also  ಕಾರವಾರ: ಬಿಜೆಪಿ ಕಚೇರಿಯಲ್ಲಿ ಸೇವಾ ಪ್ರಾಕ್ಷಿಕ ಪೂರ್ವಭಾವಿ ಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು