News Kannada
Tuesday, March 28 2023

ಮಂಗಳೂರು

ಮಂಗಳೂರು: ಕೈಗಾರಿಕಾ ಸುರಕ್ಷತೆಯಲ್ಲಿ ಎಂಆರ್‌ಪಿಎಲ್‌ ಸಂಸ್ಥೆಗೆ ಮೊದಲ ಬಹುಮಾನ

MRPL gets first prize in industrial safety
Photo Credit : News Kannada

ಮಂಗಳೂರು: ಅತ್ಯುತ್ತಮ ಕೈಗಾರಿಕಾ ಸುರಕ್ಷತಾ ನಿರ್ವಹಣೆಗಾಗಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಅರೋಮ್ಯಾಟಿಕ್ಸ್ ಘಟಕವು ಮೊದಲ ಬಹುಮಾನ ಪಡೆದಿದೆ. ತೈಲ ಉದ್ಯಮಗಳಲ್ಲಿ ಸುರಕ್ಷತಾ ನಿಯಮಗಳ ಅನುಸರಣೆಗಾಗಿ 2023ನೇ ಸಾಲಿನ ಪ್ರಶಸ್ತಿ ದೊರೆತಿದೆ.

ಅತ್ಯುತ್ತಮ ಸುರಕ್ಷತಾ ನಿರ್ವಹಣೆಗಾಗಿ ಬಹುಮಾನ ನೀಡಲಾಗಿದೆ. ವಿಪತ್ತು ತಗ್ಗಿಸುವಿಕೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಯ ಅತ್ಯುತ್ತಮ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ರಾಷ್ಟ್ರೀಯ ಸುರಕ್ಷತಾ ದಿನದ ಅಂಗವಾಗಿ ಮಾ.4ರಂದು ಹಿಂದುಸ್ತಾನ್‌ ಏರೋನಾಟಿಕ್ಸ್‌ ಸಂಸ್ಥೆ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ರಾಜ್ಯ ಕಾರ್ಖಾನೆಗಳು, ಬಾಯ್ಲರ್‌, ಕೈಗಾರಿಕಾ ಸುರಕ್ಷತಾ ಇಲಾಖೆ ವತಿಯಿಂದ ಪ್ರಶಸ್ತಿ ನೀಡಲಾಗಿದೆ.

ಸಮಾರಂಭದಲ್ಲಿ ಎಂಆರ್‌ಪಿಎಲ್‌ ಸಂಸ್ಥೆ ಇಡಿ (ರಿಫೈನರಿ) ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್, ಜಿಜಿಎಂ ( ಮಾರ್ಕೆಟಿಂಗ್, ಯೋಜನೆ) ಬಿ ಸುದರ್ಶನ್, ಸಹಾಯಕ ಮ್ಯಾನೇಜರ್ ( ಎಚ್‌ಎಸ್‌ಇ ಮತ್ತು ಎಎಂಪಿ, ಎಸ್‌) ಕುನಾಲ್ ಸಿಂಗ್ ಸಿಕರ್ವಾರ್, ಎಂಆರ್‌ ಪಿಎಲ್‌ ಸಹಾಯಕ ವ್ಯವಸ್ಥಾಪಕ ಯೋಗೇಂದ್ರ ಬಾಬು ಪ್ರಶಸ್ತಿ ಸ್ವೀಕರಿಸಿದರು. ಸಿಂಜಿನ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ್ ಭಾಲ್ಗಟ್ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಖಾನೆ, ಬಾಯ್ಲರ್‌, ಕೈಗಾರಿಕಾ ಸುರಕ್ಷತೆ ಇಲಾಖೆ ನಿರ್ದೇಶಕ ಮತ್ತು ರಾಜ್ಯ ಸುರಕ್ಷತಾ ಸಂಸ್ಥೆ ಕೆ.ಶ್ರೀನಿವಾಸ್ ಕಾರ್ಯದರ್ಶಿ ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.

See also  ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ: ಗಡಿ ಭಾಗದಲ್ಲಿ ತೀವ್ರ ತಪಾಸಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು