News Kannada
Monday, March 20 2023

ಮಂಗಳೂರು

ಬೆಳ್ತಂಗಡಿ: ಹಾವೇರಿ ಕಬ್ಬುರೂ ಕೆರೆ ಲೋಕಾರ್ಪಣೆ

Haveri Sugarcane Lake inaugurated
Photo Credit : News Kannada

ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ “ನಮ್ಮೂರು ನಮ್ಮ ಕೆರೆ” ಹಾಗೂ ಕೇಂದ್ರ ಸರಕಾರದ ಮನೇರೆಗಾ ಕಾರ್ಯಕ್ರಮದಡಿ ಪುನಃಶ್ಚೇತನಗೊಳಿಸಲಾದ ಹಾವೇರಿ ಕಬೂರು ಕೆರೆಗೆ ಬಾಗಿನ ಅರ್ಪಿಸಿ ಜನತೆಗೆ ಹಸ್ತಾಂತರಿಸಿದರು.

ಈ ಸಂದರ್ಭ ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕೂಟ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿತ್ತು. ಹೆಗ್ಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಕಲ ಜೀವ ಸಂಕುಲಕ್ಕೆ ಜೀವ ಜಲ ಒದಗಿಸುವ ಅಂರ್ತಜಲ ವೃದ್ಧಿಸುವ ನೆಲೆಯಲ್ಲಿ ಈವರೆಗೆ 488 ಪಾರಂಪರಿಕ ಕೆರೆಗಳಿಗೆ ಕಾಯಕಲ್ಪ ನೀಡಲಾಗಿದೆ. ಕಬ್ಬೂರು ಕೆರೆಗೆ ಬಾಗೀನ ಅರ್ಪಿಸುವುದರ ಮೂಲಕ ಊರಿನ ಜನತೆಗೆ ಕೆರೆ ಲೋಕಾರ್ಪಣೆ ಮಾಡಲಾಯಿತು.

ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮ ಉದ್ಗಾಟಿಸಿ ಕಬ್ಬುರು ಗ್ರಾಮದಲ್ಲಿರುವ ಸ್ವ-ಸಹಾಯ ಗುಂಪುಗಳ ಒಕ್ಕೂಟಕ್ಕೆ ದಾಖಲಾತಿ ಹಸ್ತಾಂತರ ಮಾಡಿದರು, ನಂತರ ಮಾತನಾಡುತ್ತ ಸ್ವ ಸಹಾಯ ಸಂಘ ಅಂದರೆ ನಮಗೆ ನಾವೇ ಸಹಾಯ ಮಾಡಿಕೊಳ್ಳುವುದು ಎಂದು ತಿಳಿಸುತ್ತ, ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ತಮ್ಮ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಪ್ರತಿ ವಾರ 10 ರೂಪಾಯಿ ಉಳಿತಾಯ ಮಾಡುವ ಮೂಲಕ ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಈವರೆಗೆ ರೂ. 68.11 ಕೋಟಿ ಉಳಿತಾಯ ಮಾಡಿರುವ ಬಗ್ಗೆ ಉಲೇಖಿಸಿದರು.

ಉರಿನಲ್ಲಿರುವ ಕೆರೆಗಳು ನನ್ನ ಕೆರೆ ಅಲ್ಲಾ ನಮ್ಮ ಕೆರೆ ಎಂಬ ಭಾವನೆ ಎಲ್ಲರಲ್ಲೂ ಬರಬೇಕು ಇದರಿಂದ ಉರಿನ ಜನರೆಲ್ಲ ಕೆರೆಯ ನೀರನ್ನು ಸಮಾನವಾಗಿ ಹಂಚಿಕೊಂಡಾಗ ಪ್ರೀತಿ ವಿಶ್ವಾಸ ವೃದ್ಧಿಸುದಾಗಿ ತಿಳಿಸಿದರು.

ನಂತರ ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳ ವಿತರಿಸಲಾಯಿತು ಹಾಗೂ ವಿವಿಧ ದೇವಸ್ಥನಕ್ಕೆ ಬಂದಿರುವ ಅನುದಾನ ವಿತರಣೆಯನ್ನು ಹೆಗ್ಗಡೆಯವರು ವಿತರಿಸಿದರು.

ಕಾರ್ಯಕ್ರಮದಲ್ಲಿ ಹಾವೇರಿ ಸಂಸದ ಶಿವಕುಮಾರ ಚ. ಉದಾಸಿ, ಬಳ್ಳಾರಿ ಶಾಸಕ ವಿರೂಪಾಕ್ಷ, ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಅಕ್ಷಯ್ ಶ್ರೀಧರ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ,ಜಿ.ಪಂ. ಹಾವೇರಿ, ಮಾಳವ್ವ ಗುಡ್ಡಪ್ಪ ಕರಿಗಾರ ಅದ್ಯಕ್ಷರು ಗ್ರಾಮ ಪಂಚಾಯಿತಿ ಕಬ್ಬೂರು, ಬಸವರಾಜ ನೀ. ಶಿವಣ್ಣನವರ ಮಾಜಿ ಶಾಸಕರು ,ಬ್ಯಾಡಗಿ ವಿಧಾನಸಭಾ ಕ್ಷೇತ್ರ, ಬಸವರಾಜ ಅರಬಗೊಂಡ ಅದ್ಯಕ್ಷರು ಹಾವೇರಿ ಹಾಲು ಓಕ್ಕೂಟ, ಪುಟ್ಟಪ್ಪ ಶೇಖಪ್ಪ ಗಿರಿಗೌಡ್ರು ಉಪಾದ್ಯಕ್ಷರು ಗ್ರಾಮ ಪಂಚಾಯತ ಕಬ್ಬೂರು, ಕರಿಬಸಪ್ಪ ದ್ಯಾ. ಹೊಸಳ್ಳಿ ಅದ್ಯಕ್ಷರು ಕೆರೆ ಅಭಿವೃದ್ದಿ ಸಮಿತಿ, ಕಬ್ಬೂರು , ದುಗ್ಗೆ ಗೌಡ ಪ್ರಾದೇಶಿಕ ನಿರ್ದೇಶಕರು ದಾರವಾಡ ಪ್ರಾದೇಶಿಕ ವಿಭಾಗ, ನಾಗರಾಜ ಶೆಟ್ಟಿ ನಿರ್ದೇಶಕರು ಹಾವೇರಿ ಜಿಲ್ಲೆ ಉಪಸ್ಥಿತರಿದ್ದರು.

See also  ಐರಿಸ್ ಅಂತರಾಷ್ಟ್ರೀಯ ವಿಜ್ಞಾನ ಮೇಳಕ್ಕೆ ಆಯ್ಕೆಯಾದ ಶಕ್ತಿ ವಸತಿ ಶಾಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು