News Kannada
Thursday, March 23 2023

ಸಮುದಾಯ

‘ಪುಣ್ಯ ಕ್ಷೇತ್ರದಲ್ಲಿ ಸಾಹಿತ್ಯ ಸೇವೆ ಅಭಿನಂದನೀಯ’- ಲೀಲಾಕ್ಷ ಕರ್ಕೇರ

'Literary service in the holy land is commendable': Leelaksha Karkera
Photo Credit : News Kannada

ಕಂಕನಾಡಿ: ಬ್ರಹ್ಮ ಬೈದ್ಯರ್ಕಳ ಗರಡಿ ಕ್ಷೇತ್ರವು 150 ವರ್ಷಗಳ ತುಂಬಿದ ಸಂದರ್ಭದಲ್ಲಿ ಸಾಹಿತ್ಯ ಕಾರ್ಯಕ್ರಮ ಜೋಡಿಸಲು ಅವಕಾಶ ಸಿಕ್ಕಿರುವುದು ಚುಟುಕು ಸಾಹಿತ್ಯ ಪರಿಷತ್ತಿನ ಭಾಗ್ಯ. ಪುಣ್ಯ ಕ್ಷೇತ್ರದಲ್ಲಿ ಸಾಹಿತ್ಯ ಸೇವೆ ಅಭಿನಂದನೀಯ ಕಾರ್ಯ. ನಿರಂತರ ಚಟುವಟಿಕೆಯ ಪರಿಷತ್ತಿಗೆ ಉಜ್ವಲ ಭವಿಷ್ಯವಿದೆ’ ಎಂದು ನಮ್ಮ ಕುಡ್ಲ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಲೀಲಾಕ್ಷ ಕರ್ಕೇರ ಹೇಳಿದರು.

ಅವರು ಸೋಮವಾರ ಕಂಕನಾಡಿ ಶ್ರೀ ಬ್ರಹ್ಮ ಬೈದ್ಯರ್ಕಳ ಗರಡಿಯಲ್ಲಿ ಕ್ಷೇತ್ರಕ್ಕೆ 150 ವರ್ಷಗಳು ತುಂಬಿದ ಪ್ರಯುಕ್ತ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ‘ಚುಟುಕಿನೈಸಿರಿ’ ಕವಿ ಸಮ್ಮಿಲನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಇರಾ ನೇಮು ಪೂಜಾರಿ ವಹಿಸಿದ್ದರು. ಹಿರಿಯ ಪತ್ರಕರ್ತ ಗಣೇಶ್ ಪ್ರಸಾದ್ ಪಾಂಡೇಲು, ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಜಯಾನಂದ ಅಂಚನ್, ಉಡುಪಿ ಜಿಲ್ಲಾ ಚುಸಾಪ ಅಧ್ಯಕ್ಷ ಶಿವರಾಮ ಕಾಸರಗೋಡು, ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತಾ ಕುಂಟಿನಿ,ಕಂಕನಾಡಿ ಬ್ರಹ್ಮ ಬೈದ್ಯರ್ಕಳ ಗರೋಡಿ ಕ್ಷೇತ್ರದ ಮೊಕ್ತೇಸರ ಜೆ ದಿನೇಶ್ ಅಂಚನ್,ಯುವ ವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಸುಮಕರ ಕುಂಪಲ, ಶ್ರೀ ಗೋಕರ್ಣ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಸೂರ್ಯಕಾಂತ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಳಿಕ ನಡೆದ ಕವಿಗೋಷ್ಠಿ ‘ಚುಟುಕಿನೈಸಿರಿ’ ಅಧ್ಯಕ್ಷತೆಯನ್ನು ಕವಿ ರೇಮಂಡ್ ಡಿಕುನಾ ಉದ್ಘಾಟಿಸಿದರೆ ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಚುಸಾಪ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ, ಹಿರಿಯ ಕವಿ ಡಾ ಸುರೇಶ್ ನೆಗಳಗುಳಿ ಮುಖ್ಯ ಅತಿಥಿಗಳಾಗಿದ್ದರು.ಇದೇ ಸಂದರ್ಭದಲ್ಲಿ ಯೋಗ ಗುರು ಡಾ ಜಗದೀಶ್ ಶೆಟ್ಟಿ, ಸಾಹಿತಿ ಮುದ್ದು ಮೂಡುಬೆಳ್ಳೆ, ಚಿತ್ರ ಕಲಾವಿದ ಉಮೇಶ್ ಬೆಳ್ಳೂರು, ಐ ಆರ್ ಡಿ ಓ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಪ್ರಫುಲ್ಲ ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ರೇಖಾ ಸುದೇಶ್ ರಾವ್ ಪ್ರಾರ್ಥಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಸ್ವಾಗತಿಸಿದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ವಂದಿಸಿದರು
ಲತೀಶ್ ಸಂಕೊಳಿಗೆ,ವ.ಉಮೇಶ್ ಕಾರಂತ್, ಅರ್ಚನಾ ಎಂ ಕುಂಪಲ ನಿರೂಪಿಸಿದರು.

ಕವಿಗೋಷ್ಠಿಯಲ್ಲಿ ಎಂ ಎಸ್ ವೆಂಕಟೇಶ ಗಟ್ಟಿ, ಎಡ್ವರ್ಡ್ ಲೋಬೋ ತೊಕೊಟ್ಟು, ಶಶಿಕಲಾ ಕುಂಬ್ಳೆ, ರೇಖಾ ಸುದೇಶ್ ರಾವ್, ಗೀತಾ ಲಕ್ಷ್ಮೀಶ್, ವ.ಉಮೇಶ ಕಾರಂತ,ಜಯರಾಮ ಪಡ್ರೆ, ವಿಂದ್ಯಾ ಎಸ್ ರೈ, ಸತೀಶ್ ಬಿಳಿಯೂರು, ರಶ್ಮಿತಾ ಸುರೇಶ್, ಮೈತ್ರಿ ಎಸ್ ಭಟ್ ವಿಟ್ಲ,ಪ್ರೇಮಾ ಉದಯ ಮುಲ್ಕಿ, ರಶ್ಮಿ‌ ಸನಿಲ್, ಶ ಚಂದ್ರಿಕಾ ಕೈರಂಗಳ, ಮನ್ಸೂರು ಮುಲ್ಕಿ, ಭಾಸ್ಕರ್ ವರ್ಕಾಡಿ, ಕಾಂಚನ ಕೋಟೆಕಾರು, ಸೌಮ್ಯ ಗೋಪಾಲ್, ಪರಿಮಳ ಮಹೇಶ್, ಗೋಪಾಲಕೃಷ್ಣ ಶಾಸ್ತ್ರಿ, ದಿನಮಣಿ ರಾವ್, ಶಶಿಕಲಾ ಭಾಸ್ಕರ್ ಬಾಕ್ರಬೈಲು, ಅರ್ಚನಾ ಎಂ ಬಂಗೇರಾ ಕುಂಪಲ, ಲತೀಶ್ ಸಂಕೊಳಿಗೆ ಮೊದಲಾದವರು ಭಾಗವಹಿಸಿದರು.

See also  ಗುವಾಹಟಿ: ಅಸ್ಸಾಂನ ಎರಡು ಗುಡ್ಡಗಾಡು ಜಿಲ್ಲೆಗಳಿಗೆ 2 ಸಾವಿರ ಸೋಲಾರ್ ದೀಪ ರವಾನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು