News Kannada
Thursday, March 30 2023

ಮಂಗಳೂರು

ಯುವ ಕವಯತ್ರಿ ಪ್ರಿಯಾ ಸುಳ್ಯರವರ ಚೊಚ್ಚಲ ಕವನ ಸಂಕಲನ ನಾನು, ನಾನು… ನಾವು ಬಿಡುಗಡೆ

Young poetess Priya Sullia's first collection of poems is me, I... We released
Photo Credit : News Kannada

ಪುನರೂರು: ಯುವ ಕವಯತ್ರಿ ಪ್ರಿಯಾ ಸುಳ್ಯರ ಚೊಚ್ಚಲ ಕವನ ಸಂಕಲನ ನಾನು, ನಾನು… ನಾವು ಪುನರೂರಿನ ಶ್ರೀ ವಿಶ್ವನಾಥ ದೇವಾಲಯದ ಸಭಾಂಗಣದಲ್ಲಿ ಮಾರ್ಚ್ 5 ಭಾನುವಾರ ನಡೆದ 13 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರುರವರು ಬಿಡುಗಡೆಗೊಳಿಸಿದರು.

ಕವಯತ್ರಿ ಪ್ರಿಯಾ ಸುಳ್ಯ ಅವರು ಮಾತನಾಡಿ “ಯಾವುದೇ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹ ನೀಡುತ್ತಿರುವ ಸಾಹಿತ್ಯ ಪೋಷಕರಾದ ಡಾ. ಶೇಖರ್ ಅಜೆಕಾರುರವರ ಈ ಕಾರ್ಯ ಶ್ಲಾಘನೀಯ”. ಪ್ರತಿಯೊಬ್ಬ ಬರಹಗಾರರಿಗೆ ತನ್ನ ಬರಹಗಳು ದಾಖಲೀಕರಣವಾಗೋದು ಪುಸ್ತಕ ರೂಪದಲ್ಲಿ ಹೊರ ಬಂದಾಗ. ಹಾಗಾಗಿ ನನ್ನ ಕನಸು ಇಂದು ನನಸಾಗಿದೆಯೆಂದರು ಚೆನ್ನುಡಿಗಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮುನ್ನುಡಿ ಬರೆದ ಡಾ.ಶೇಖರ ಅಜೆಕಾರುಮತ್ತು ಬೆನ್ನುಡಿ ಬರೆದ ಡಾ.ಸುರೇಶ ನೆಗಳಗುಳಿ ಅವರನ್ನು ಕೃತಿಕಾರರಾದ ಪ್ರಿಯಾ ಸುಳ್ಯ ಸನ್ಮಾನಿಸಿದರು.

ವೇದಿಕೆಯಲ್ಲಿ ಹರಿಕೃಷ್ಣ ಪುನರೂರು,ವಿಜಯ ಕುಮಾರ್ ಕೊಡಿಯಾಲ್ ಬೈಲ್,ಹಿರಿಯ ಯಕ್ಷಗಾನ ಅರುವ ಕೊರಗಪ್ಪ ಶೆಟ್ಟಿ,ಭುವನಭಿರಾಮ ಉಡುಪ ,ಅರುಷ್.ಎನ್. ಶೆಟ್ಟಿ ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸುನಿಧಿ ಅಜೆಕಾರು ಸ್ವಾಗತಿಸಿ, ಸುನಿಜ ಅಜೆಕಾರು ವಂದಿಸಿದರು.

See also  ವಕೀಲರ ಭವನದ ಕಾಮಗಾರಿ ಮುಗಿದ್ದಿದ್ದು ಡಿ. 28 ರಂದು ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು