News Kannada
Tuesday, June 06 2023
ಮಂಗಳೂರು

ಬೆಳ್ತಂಗಡಿ: ೪ ಕೋಟಿ ರೂ. ವೆಚ್ಚದ ನೀರಾವರಿ ಯೋಜನೆಗೆ ಚಾಲನೆ

Belthangady: Rs 4 crore Irrigation project launched
Photo Credit : News Kannada

ಬೆಳ್ತಂಗಡಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಬಂ‘ಗಳ ಬದುಕಿಗೆ ಕೃಷಿ ಆ‘ರವಾಗಿಸಬೇಕೆಂಬ ನೆಲೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ತಾಲೂಕಿನಲ್ಲಿ ಕಳೆದ ಬಾರಿ ೫೦ ಬೋರ್‌ವೆಲ್ ಅಳವಡಿಸಿದ್ದು, ಪ್ರಸಕ್ತ ಎರಡನೇ ಹಂತದಲ್ಲಿ ೮೦ ಕೊಳವೆಬಾವಿ ಒದಗಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಬೆಳ್ತಂಗಡಿ ತಾಲೂಕಿನ ೮೦ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನು‘ವಿಗಳಿಗೆ ೪ ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಕೃಷಿಗೆ ಹಾಗೂ ಕುಡಿಯುವ ನೀರು ಒದಗಿಸಲು ಕೊಳವೆಬಾವಿ ಯೋಜನೆಗೆ ಮೇಲಂತಬೆಟ್ಟು ಗ್ರಾಮದ ಫಲಾನು‘ವಿ ವಾಸು ಕೆ.ಪಡಿಬೆಟ್ಟು ಅವರ ಮನೆಯಲ್ಲಿ ಚಾಲನೆ ನೀಡಿ ಮಾತನಾಡಿದರು.

ಕೃಷಿಯನ್ನು ಅವಲಂಬಿಸಿ ಜೀವನ ನಡೆಸುವ ಪರಿಶಿಷ್ಟ ಬಂ‘ಗಳಿಗೆ ವಾರಾಹಿ ಯೋಜನೆಯಡಿ ಪ್ರತಿಯೊಬ್ಬ ಫಲಾನು‘ವಿಗಳಿಗೆ ತಲಾ ೫ ಲಕ್ಷ ರೂ. ವೆಚ್ಚದಂತೆ ಕೊಳವೆಬಾವಿ, ಪೈಪುಲೈನ್, ಸ್ಪ್ರಿಂಕ್ಲರ್ ಜೆಟ್ ಹಾಗೂ ವಿದ್ಯುತ್ ಪೂರೈಕೆ ಮಾಡುವ ವಿನೂತನ ಯೋಜನೆಯನ್ನು ತಾಲೂಕಿನಲ್ಲಿ ಅನುಷ್ಠಾನ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ಶಕ್ತಿ ಕೇಂದ್ರ ಅ‘ಕ್ಷ ಹಾಗೂ ಮೇಲಂತಬೆಟ್ಟು ಗ್ರಾ.ಪಂ. ಸದಸ್ಯ ಚಂದ್ರರಾಜ್ ನೂಜೇಲು, ಬೂತ್ ಸಮಿತಿ ಅ‘ಕ್ಷ ಮೋಹನ್ ಕಂಚಿಂಜ, ಕಾರ್ಯದರ್ಶಿ ಪ್ರವೀಣ್ ಕೋಡಿಯೇಲ್, ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಜಾನ್ ಪಿಂಟೋ, ವಿಜಿಡೋರು ರೋಡ್ರಿಗಸ್, ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಕ್ಕೆ ಕಾವೇರಿ ನೀರಾವರಿ ನಿಗಮದಡಿ ತಲಾ ಒಂದು ಎಕ್ರೆಗಿಂತ ಮೇಲ್ಪಟ್ಟು ಕೃಷಿ ‘ಮಿ ಹೊಂದಿದವರಿಗೆ ತಲಾ ೫ ಲಕ್ಷ ರೂ. ವೆಚ್ಚದಲ್ಲಿ ಬೋರ್‌ವೆಲ್, ಪಂಪ್, ವಿದ್ಯುತ್ ಸಂಪರ್ಕ, ಪೈಪ್‌ಲೈನ್, ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗುತ್ತದೆ. ಮೊದಲ ಹಂತದಲ್ಲಿ ಪ.ಜಾತಿ ೨೫, ಪ.ಪಂಗಡಕ್ಕೆ ೨೫ ಸೇರಿ ೨.೫೦ ಕೋ.ರೂ. ವೆಚ್ಚದಲ್ಲಿ ಒಟ್ಟು ೫೦ ಫಲಾನು‘ವಿಗಳಿಗೆ ಯೋಜನೆ ಲಭಿಸಿದೆ. ಎರಡನೇ ಹಂತದಲ್ಲಿ ಪ.ಜಾತಿಗೆ ೬೦, ಪ.ಪಂ. ಫಲಾನು‘ವಿಗಳಿಗೆ ೨೦ ಸೇರಿ ೮೦ ಮಂದಿಗೆ ಸವಲತ್ತು ಲಭಿಸಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

See also  ಮಂಗಳೂರು: ಕಾಂಗ್ರೆಸ್ ಭವನದಲ್ಲಿ ವಾಸ್ತುದೋಷ ತಜ್ಞರ ಸಲಹೆಯಂತೆ ಮೆಟ್ಟಿಲು ಬದಲಿಸಿದ ನಾಯಕರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು