News Kannada
Tuesday, March 28 2023

ಮಂಗಳೂರು

ಮನುಷತ್ವದ ರಾಜಕಾರಣ ಮಾಡಿದ ರೈ: ಮೂರೊಳ್ಳಿ ಹೇಳಿಕೆ

Congress is gandhi progeny who says Allah and Rama are one and the same: Sudhir Kumar Marolli
Photo Credit : News Kannada

ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ೬ ಬಾರಿ ಶಾಸಕರಾಗಿ, ಸಚಿವರಾಗಿದ್ದ ರಮಾನಾಥ ರೈ ಅವರು ಎಲ್ಲಾ ಶಾಸಕರಿಗೂ ಅಭಿವೃದ್ಧಿ ಹೇಗೆ ಮಾಡಿಕೊಡಬಹುದು ಎಂದು ತೋರಿಸಿಕೊಟ್ಟು ಮಾದರಿ ಆಗಿದ್ದು,  ಅವರು ಮತಗಳಿಕೆಯ ಬದಲು ಮನುಷ್ಯತ್ವಕ್ಕೆ ರಾಜಕಾರಣ ಮಾಡಿದವರು ಎಂದು ಕೆಪಿಸಿಸಿ ವಕ್ತಾರ, ನ್ಯಾಯವಾದಿ ಸುಧೀರ್ ಕುಮಾರ್ ಮೂರೊಳ್ಳಿ ಹೇಳಿದರು.

ಅವರು ಬಂಟ್ವಾಳ ಪ್ರಜಾಧ್ವನಿ ಯಾತ್ರೆಯಲ್ಲಿ ಎನ್.ಸಿ.ರೋಡು ಜಂಕ್ಷನ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಗೋಡ್ಸೆ ಸಂತತಿಯ ಸುನೀಲ್ ಕುಮಾರ್ ಬಂಟ್ವಾಳಕ್ಕೆ ಬಂದು ಅಲ್ಲಾ- ರಾಮನ ಮಧ್ಯೆ ಚುನಾವಣೆ ಎಂದು ಹೇಳುತ್ತಿದ್ದು, ಆದರೆ ಕಾಂಗ್ರೆಸ್ ಅಲ್ಲಾ ಮತ್ತು ರಾಮ ಇಬ್ಬರು ಒಂದೇ ಎಂದು ಹೇಳುವ ಗಾಂಧಿ ಸಂತತಿಯಾಗಿದೆ. ಬಂಟ್ವಾಳ ಬಂದು ಭಾಷಣ ಬಿಗಿದ ಅಣ್ಣಾಮಲೈ ಬಿಜೆಪಿ ಸೇರುವ ಮೊದಲೇ ಆತನನ್ನು ನಾನು ಬಿಜೆಪಿಯ ಏಜೆಂಟ್ ಎಂದು ಹೇಳಿದ್ದೆ ಎಂದರು.

ರಮಾನಾಥ ರೈ ಅವರ ಕೊನೆಯ ಚುನಾವಣೆಯ ಸಂದರ್ಭದಲ್ಲಿ ಅವರ ವಿರೋಚಿತ ರಾಜಕಾರಣಕ್ಕೆ ಪ್ರೀತಿಯ ಗೆಲುವಿನ ಕಾಣಿಕೆ ಕೊಟ್ಟು, ಪ್ರಾಮಾಣಿಕತೆ, ಜನಪ್ರಿಯತೆಯನ್ನು ಗೆಲ್ಲಿಸಬೇಕಿದೆ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಬಡವರ ಪರ ಕೆಲಸವೇ ಮಾಡದ ಬಿಜೆಪಿಗೆ ಕಾಂಗ್ರೆಸ್ ಪ್ರಕಟಿಸಿದ ಜನಪರ ಯೋಜನೆಗೆ ಹೇಗೆ ದುಡ್ಡು ತರುತ್ತಾರೆ ಎಂಬ ಚಿಂತೆಯಾಗಿದ್ದು, ನಾವು ಹೇಗಾದರೂ ಮಾಡಿ ಗೃಹಜ್ಯೋತಿ, ಗೃಹ ಲಕ್ಷ್ಮೀ, ಅನ್ನಭಾಗ್ಯವನ್ನು ಅನುಷ್ಠಾನ ಮಾಡುತ್ತೇವೆ. ೬ ಬಾರಿ ಶಾಸಕನಾಗಿ, ಸಚಿವನಾಗಿ ಶಕ್ತಿಮೀರಿ ಕೆಲಸ ಮಾಡಿದ್ದು, ಕಳೆದ ಚುನಾವಣೆಯಲ್ಲಿ ತನ್ನನ್ನು ಸೋಲಿಸಿದ ರೀತಿಗೆ ಬೇಸರವಿದೆ ಎಂದರು.‌

ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಜಿನರಾಜ್ ಅರಿಗ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ ಜೈನ್, ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಡಿಸಿಸಿ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅರ್ಶದ್ ಸರವು, ಡಿಸಿಸಿ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಸುರೇಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಪೂಜಾರಿ ಜೋರಾ, ಪುರಸಭಾ ಸದಸ್ಯರಾದ ಲೋಲಾಕ್ಷ ಶೆಟ್ಟಿ, ಬಿ ವಾಸು ಪೂಜಾರಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ವಿ ಕೋಟ್ಯಾನ್, ಚಂದ್ರಶೇಖರ ಕರ್ಣ, ಬಾಲಕೃಷ್ಣ ಅಂಚನ್, ಪಂಚಾಯತ್ ಅಧ್ಯಕ್ಷರಾದ ಯು ಉಮೇಶ್ ಕುಲಾಲ್, ರಜನಿ ಮೂಲ್ಯ, ಉಪಾಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಸದಸ್ಯರಾದ ಸುವರ್ಣ ಕುಮಾರ್ ಜೈನ್, ಫಾರೂಕ್, ಯೋಗೀಶ್ ಬಂಗೇರಾ, ಲವೀನಾ ಶಾಂತಿ ಡಿಸೋಜ, ಮುಹಮ್ಮದ್ ಎಂ, ಸುರೇಶ್ ಪೂಜಾರಿ, ಅಬ್ದುಲ್ ರಝಾಕ್, ವೀರೇಂದ್ರ ಅಮೀನ್, ಲಕ್ಷ್ಮೀನಾರಾಯಣ, ಶರ್ಮ, ಪುಷ್ಪ, ಲೀನಾ ರೋಡ್ರಿಗಸ್, ಶೋಮಲ್ ಲೋಬೋ, ಅಬ್ದುಲ್ ಹನೀಫ್, ಉದಯ ಪೂಜಾರಿ, ಮುಸ್ತಫಾ, ಪ್ರಭಾಕರ್ ಅಮೀನ್, ಜನಾರ್ದನ, ಮಾಣಿಕ್ ರಾಜ್, ತನ್ವೀರ್ ತಾಹಾ, ಅಬ್ದುಲ್ ಖಾದರ್ ಸಲಿ, ಮೊಹಮ್ಮದ್ ಶರೀಫ್, ಪ್ರಮುಖರಾದ ಸುದರ್ಶನ್ ಜೈನ್, ಚಂದ್ರಶೇಖರ ಪೂಜಾರಿ, ಸಿದ್ದೀಕ್ ಸರವು, ಪ್ರವೀಣ್ ರೋಡ್ರಿಗಸ್ ವಗ್ಗ, ವೆಂಕಪ್ಪ ಪೂಜಾರಿ, ವಿಜಯ ಅಲ್ಲಿಪಾದೆ, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ಅಲ್ತಾಫ್ ಸಂಗಬೆಟ್ಟು, ತ್ರಿಶಾಲಾ ಸುವರ್ಣ ಕುಮಾರ್ ಜೈನ್, ಬೇಬಿ ಸುವರ್ಣ, ಗಿರಿಜಾ ಕೃಷ್ಣಪ್ಪ, ಸುನೀತಾ ರೋಡ್ರಿಗಸ್, ಕಿಶೋರ್, ಸತೀಶ್, ಆಸಿಫ್, ಮುಸ್ತಫ ಪಲ್ಲಿಗುಡ್ಡೆ, ರಹೀಂ ಮೈಂದಾಳ, ಚಂದ್ರಕಾಂತ, ಮಹಾಬಲ ನಾಯಕ್, ಪ್ರಸಾದ್, ದಿನೇಶ್ ಕುಮಾರ್, ಜೋಯ್ ವಾಲ್ಟರ್ ಡಿಸೋಜ, ಪ್ರವೀಣ್ ವಾಲ್ಟರ್ ಡಿಸೋಜ, ಸುಲೈಮಾನ್ ಮೈಂದಾಳ, ಯೂಸುಫ್ ಮೈಂದಾಳ, ಸಂತೋಷ್ ಪೂಜಾರಿ ಕುಳಾಲ್, ಶ್ರೀನಿವಾಸ್, ಲವಣ್, ಲಕ್ಷ್ಮಣ್ ಕುಲಾಲ್ ಅಗ್ರಹಾರ ಬೀದಿ, ಸುಮಿತ್ರಾ ಮೋಹನ್ ಅಲ್ಲಿಪಾದೆ, ಕೊಗ್ಗಣ್ಣ, ಪ್ರಭಾಕರ ಆಚಾರ್ಯ, ಪುರುಷೋತ್ತಮ ಬಂಗೇರ, ರಾಜೇಶ್ ಪಾದೆಕೋಡಿ, ವಿನೋದ್ ಕುಂಟಾಲಪಲ್ಕೆ, ಸದಾನಂದ ನಾವೂರು, ವಾಸು ಪೂಜಾರಿ ನಾವೂರು, ಸದಾನಂದ ಶೆಟ್ಟಿ ಇಚ್ಚಿಲಗುತ್ತು, ಇಸ್ಮಾಯಿಲ್, ಸಿದ್ದೀಕ್, ಸತೀಶ್, ಪುರುಷೋತ್ತಮ, ಖಲೀಲ್ ಎನ್ ಸಿ ರೋಡು, ಯಾಕೂಬ್ ಸಾಹೇಬ್, ಶಿಫನ್ ಕಾವಳಕಟ್ಟೆ, ಚಂದ್ರಹಾಸ, ವಸಂತ ಶೆಟ್ಟಿ, ಜನಾರ್ದನ ಆಚಾರ್ಯ, ಪ್ರಭಾಕರ ಆಚಾರ್ಯ, ವಸಂತ ಶೆಟ್ಟಿ, ಗಫಾರ್ ಸಾಹೇಬ್ ಕಾವಳಕಟ್ಟೆ, ಸಾಲಿಯಾ ಕಾವಳಕಟ್ಟೆ, ಉಮ್ಮರ್ ಶರೀಫ್, ಅರುಣ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

See also  ಕಾಸರಗೋಡು : ಗಾಂಜಾ ಮತ್ತು ಎಂ ಡಿ ಎಂ ಎ ಮಾದಕ ವಸ್ತು ಸಹಿತ ಮೂವರ ಬಂಧನ

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ ಕೊಯಿಲ ಸ್ವಾಗತಿಸಿ, ರಾಜೀವ್ ಶೆಟ್ಟಿ ಎಡ್ತೂರು ಪ್ರಸ್ತಾವನೆಗೈದರು. ಮಾಣಿ ಗ್ರಾ ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು