News Kannada
Thursday, March 30 2023

ಮಂಗಳೂರು

ಮಂಗಳೂರು: ಕಸ ವಿಲೇವಾರಿಗೆ ಇಂದಿನಿಂದಲೇ ಅಗತ್ಯ ಕ್ರಮಕ್ಕೆ ಶಾಸಕರ ಸೂಚನೆ

Mangaluru: MLAs instruct to take necessary steps to dispose of garbage from today
Photo Credit : News Kannada

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ120 ಚಾಲಕರು, ಕಸ ಸಂಗ್ರಹ ಮಾಡುವವರು ಸೇರಿದಂತೆ 620 ಹಾಗೂ ವೆಟ್ ವೆಲ್ ಹಾಗೂ ಯುಜಿಡಿಯಲ್ಲಿ ಕೆಲಸ ಮಾಡುವ 250 ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಕಸ ವಿಲೇವಾರಿಯ ಸಮಸ್ಯೆ ಎದುರಾಗಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲು ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಹಾಗೂ ಭರತ್ ಶೆಟ್ಟಿ, ಪಾಲಿಕೆ ಮೇಯರ್ ಜಯಾನಂದ ಅಂಚನ್ ಅವರ ನೇತೃತ್ವದಲ್ಲಿ ಮಾ.16ರ ಗುರುವಾರ ಸಂಜೆ ಸ‌ಭೆ ನಡೆಯಿತು.

ಬೆಂಗಳೂರು ಮಟ್ಟದಲ್ಲಿ ಈಡೇರಬೇಕಾದ ಬೇಡಿಕೆಗಳಿಗೆ ಸೋಮವಾರದಿಂದ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿರುವುದರಿಂದ ಮಂಗಳೂರು ನಗರದ ಮನೆ ಮನೆ ಕಸ ಸಂಗ್ರಹಕ್ಕೆ ಸಮಸ್ಯೆ ಉಂಟಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿಗೆ ಮಾ.17ರ ಶುಕ್ರವಾರದಿಂದಲೇ ಆ್ಯಂಟಿನಿ ವೆಸ್ಟ್ ಮ್ಯಾನೇಜ್ ಮೆಂಟ್ ನಿಂದ ಹೆಚ್ಚುವರಿಯಾಗಿ ಸಿಬ್ಬಂದಿ ನಿಯೋಜನೆ ಮಾಡುವಂತೆ ಅವರು ಸೂಚನೆ ನೀಡಿದರು.

ಇಂತಹ ಸಂದರ್ಭಗಳಲ್ಲಿ ಏಜೆನ್ಸಿಯವರು ಅಗತ್ಯ ವ್ಯವಸ್ಥೆ ಮಾಡಬೇಕು. ಪ್ರತಿಭಟನೆ ಅಂತ್ಯವಾಗುವವರಿಗೆ ಬೇಕಾದ ಸಿಬ್ಬಂದಿ ನಿಯೋಜನೆ ಮಾಡಬೇಕು. ಮನೆ ಮನೆಯ ಕಸ ಸಂಗ್ರಹಣೆಗೆ ಬೇಕಾದಷ್ಟು ಸಿಬ್ಬಂದಿ ಹಾಗೂ ವಾಹನ ಚಾಲಕರನ್ನು ವ್ಯವಸ್ಥೆ ಮಾಡಬೇಕು. ನಗರದ ಜನರ ಸ್ವಚ್ಛತೆ ಸಲುವಾಗಿ ಅಗತ್ಯ ಕ್ರಮಗಳು ಆಗಬೇಕು. ವೆಟ್ ವೆಲ್ ಹಾಗೂ ಎಸ್ಟಿಪಿಗಳನ್ನು ಸುವ್ಯವಸ್ಥಿತವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.

ಸುಮಾರು 80 ಸಿಬ್ಬಂದಿಗಳನ್ನು ಈ ಕಸ ವಿಲೇವಾರಿಗೆ ನಿಯೋಜನೆ ಮಾಡುವದಕ್ಕೆ ಮುಂದಾಗಬೇಕು ಎಂದು ಆ್ಯಂಟನಿ ವೆಸ್ಟ್ ಮ್ಯಾನೇಜ್ ಮೆಂಟ್ ಸೆಲ್ ವ್ಯವಸ್ಥೆ ಮಾಡಿಕೊಳ್ಳಬೇಕು. ವೆಟ್ ವೆಲ್ ನಿರ್ವಹಣೆಗೆ ತುರ್ತಾಗಿ ಸಿಬ್ಬಂದಿ ನಿಯೋಜನೆ ಮಾಡಬೇಕು. 20 ರಿಂದ 30 ವಾಹನಗಳಿಂದ ಕಸವನ್ನು ಸಂಗ್ರಹ ಮಾಡಲು ಸ್ಥಳೀಯ ಪಾಲಿಕೆ ಸದಸ್ಯರ ಸಹಕಾರ ಪಡೆದು ಕಸ ವಿಲೇವಾರಿಗೆ ಶುಕ್ರವಾರದಿಂದಲೇ ಕಾರ್ಯ ನಿರ್ವಹಿಸಬೇಕು. ಕನಿಷ್ಠ 60 ವಾಹನಗಳಲ್ಲಿ ಕಸ ಸಂಗ್ರಹಣೆಗೆ ಬೇಕಾದ ಸಿದ್ಧತೆ ನಡೆಯಬೇಕು ಎಂದು ಶಾಸಕರು ಹಾಗೂ ಪಾಲಿಕೆ ಮೇಯರ್ ಸೂಚನೆ ನೀಡಿದರು.

ಸಿಬ್ಬಂದಿಗಳು ಕೆಲಸ ಸಮಯದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಪೊಲೀಸರ ಸಹಕಾರ ಪಡೆದು ಕಸ ವಿಲೇವಾರಿಗೆ ಕಾರ್ಯ ನಡೆಸಬೇಕು. ವಿಶೇಷವಾಗಿ ವೆಟ್ ವೆಲ್ ಹಾಗೂ ಎಸ್ಟಿಪಿಗಳನ್ನು ಚಾಲನೆ ಹಾಗೂ ನಿರ್ವಹಣೆಗೆ ತುರ್ತು ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

ಪಾಲಿಕೆ ಉಪ ಮೇಯರ್ ಪೂರ್ಣಿಮಾ ವೇದಿಕೆಯಲ್ಲಿದ್ದರು. ಮಹಾನಗರ ಪಾಲಿಕೆ ಸದಸ್ಯರು ಸಭೆಯಲ್ಲಿದ್ದರು.

See also  ಕಾರವಾರ: ತಹಸೀಲ್ದಾರ್ ಕಚೇರಿಯಲ್ಲಿ ಶಾಸಕರಿಂದ ಸಾರ್ವಜನಿಕ ಅಹವಾಲು ಸ್ವೀಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು