News Kannada
Tuesday, March 28 2023

ಮಂಗಳೂರು

ದಿಢೀರ್ ದೆಹಲಿಗೆ ಹಾರಿದ ಸುಳ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ.ಕೃಷ್ಣಪ್ಪ

Sullia ticket aspirant G Krishnappa jumps to Delhi
Photo Credit : News Kannada

ಸುಳ್ಯ: ರಾಜ್ಯದಲ್ಲಿ ಚುನಾವಣೆಗೆ ಭರ್ಜರಿ ತಯಾರಿಗಳು ನಡೆಯುತ್ತಿದೆ. ಹೈಕಮಾಂಡ್ ಪಕ್ಷವನ್ನು ಗೆಲ್ಲಿಸಲು ಜನ ಮ‌ನವೊಲಿಸಲು ಮುಂದಾದರೆ ಇನ್ನೊಂದು ಕಡೆ ಟಿಕೆಟ್ ಆಕಾಂಕ್ಷಿಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕೆಲವರ ಹೆಸರುಗಳು ಕೇಳಿ ಬಂದಿದ್ದು ಇನ್ನು ಕೆಲವರು ಸದ್ದಿಲ್ಲದೆ ಹೈಕಮಾಂಡ್ ಬಾಗಿಲಲ್ಲಿ ಸಾಲು ನಿಂತಿರುವುದು ಪರದೆಯ ಹಿಂದೆ ಕಾಣುವ ನೆರಳಿನಂತಿದೆ.

ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಹೆಸರು ಕೇಳಿ ಬಂದಿದ್ದು ಇಬ್ಬರಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲವಾಗಿದೆ. ಈ ಮಧ್ಯೆ ಜಿ. ಕೃಷ್ಣಪ್ಪ ರವರ ಹೆಸರು ಈಗಾಗಲೇ ಮುಂಚೂಣಿಯಲ್ಲಿರುವುದು ಡಾ. ಹೆಚ್.ಎಂ ನಂದಕುಮಾರ್ ಗೆ ತಲೆ ನೋವಾಗಿರುವುದು ಸುಳ್ಳಲ್ಲ.

ಈ ಬಾರಿ ಸುಳ್ಯದಿಂದ ನಾನೇ ಸ್ವರ್ದಿಸಲಿದ್ದೇನೆ ಎಂದು ಜನರ ನಡುವೆ ಓಡಾಟ ಮಾಡಿದ ನಂದಕುಮಾರ್ ಗೆ ಈ ಸಲ ಟಿಕೆಟ್ ಸಿಗಬಹುದು ಎಂಬ ಮಾತುಗಳು ಕೆಲವು ಕಾರ್ಯಕರ್ತರ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಇದೆಲ್ಲದರ ನಡುವೆ ಜಿ. ಕೃಷ್ಣಪ್ಪ ರವರು ಸುದ್ದಿ ಗದ್ದಲವಿಲ್ಲದೆ ಧಿಡೀರ್ ದೆಹಲಿಗೆ ಹಾರಿರುವುದು ಇದೀಗ ಬಾರಿ ಕುತೂಹಲ ಮೂಡಿಸಿದೆ. ಚುನಾವಣೆಗೆ ಇನ್ನೇನೂ ಕೆಲವೇ ದಿನಗಳಷ್ಟೆ ಬಾಕಿ ಉಳಿದಿರುವುದು. ಅಭ್ಯರ್ಥಿ ಗಳ ಪಟ್ಟಿ ಕೂಡ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಜಿ. ಕೃಷ್ಣಪ್ಪ ರವರು ದೆಹಲಿಯಿಂದ ತಮ್ಮ ಹೆಸರಿನ ಪಟ್ಟಿಯೊಂದಿಗೆ ಆಗಮಿಸುವ ಸಾಧ್ಯೆತೆಯೂ ಬಹಳ ಹೆಚ್ಚಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

See also  ತಮಿಳುನಾಡಿನಿಂದ ಗೋವಾಕ್ಕೆ ಸೈಕಲ್ ನಲ್ಲಿ ಪಯಣ ಆರಂಭಿಸಿದ ಮುಗೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು